ಬೆಂಬಲಿಗರು

ಬುಧವಾರ, ಫೆಬ್ರವರಿ 8, 2023

ತಿರುವನಂತಪುರ ಪ್ರವಾಸ 3

 ಮಾತೃಭೂಮಿ ಅಕ್ಷರ ಹಬ್ಬದಲ್ಲಿ ನಾನು ಮೆಚ್ಚಿದ ಒಂದು ಸೆಷನ್ ಮಲಯಾಳ ಸಿನೆಮಾ ದಲ್ಲಿ  ಕವಿ ಗಳಾದ 'ಭಾಸ್ಕರನ್ ಮಾಸ್ಟರ್ ಮತ್ತು ವಯಲಾರ್ ರಾಮ ವರ್ಮ ಅವರ ಕಾಲ' ಎಂಬ ವಿಷಯದ ಬಗ್ಗೆ . ಪ್ರಸ್ತುತ ಪಡಿಸಿದವರು ಸ್ವಯಂ ಪ್ರಸಿದ್ಧ ಕವಿ ,ಸಂಗೀತ ನಿರ್ದೇಶಕ ,ನಿರ್ದೇಶಕ ,ನಿರ್ಮಾಪಕ  ವೆಲ್ಲವೂ ಆದ ಶ್ರೀಕುಮಾರನ್ ತಂಬಿ . ಇವರು ಕಲಿತದ್ದು ಸಿವಿಲ್ ಇಂಜಿನಿಯರಿಂಗ್ . ಹಿಡಿದ ವೃತ್ತ್ತಿ ಬೇರೆ . ಒಳ್ಳೆಯ ಮಾತುಗಾರ ಮತ್ತು ಹಾಡುಗಾರ ಕೂಡಾಇದರ ಪ್ರತ್ಯಕ್ಷ ಅನುಭವ ನನಗೆ ಆಯಿತು. .ನಮ್ಮ ಅಂಬರೀಷ್ ಅವರನ್ನು ನಾಯಕನಾಗಿ ನಟಿಸಿದ ಸಂಗೀತ ಪ್ರಧಾನ ಚಿತ್ರ ಗಾನಂ ಇವರ ನಿರ್ಮಾಣ .ಮೊದ ಮೊದಲು ನಟರು ನಟಿಸುವಾಗ ತಾವೇ ಹಾಡುತ್ತಿದ್ದು ಹಿನ್ನಲೆ ವಾದ್ಯದವರು ಅವರ ಹಿಂದೆ ಕ್ಯಾಮೆರಾ ಕ್ಕೆ ಕಾಣದಂತೆ ಬರುತ್ತಿದ್ದರು ಎಂಬ ವಿಚಾರ ಈಗ ತಮಾಷೆಯಾಗಿ ಕಾಣುತ್ತದೆ .  ಮಲಯಾಳಂ ನ ಮೊದಲನೇ ಹಿನ್ನಲೆ ಗಾಯಕ ಕನ್ನಡಿಗರೇ ಆದ ಶ್ರೀ ಟಿ ಕೆ ಗೋವಿಂದ ರಾವ್ ಎಂದು ತಿಳಿಸಿದರು .

No animosity towards Mammootty, no special affection for ...

ಕವಿ ವಯಲಾರ್ ರಾಮ ವರ್ಮಾ ರಚಿಸಿದ ಪ್ರಸಿದ್ದ ಗೀತೆ ಮನುಷನ್ ಮತಂಗಳೆ ಸೃಷ್ಟಿ ಚ್ಚು ಎಂಬ ಗೀತೆಯ ಬಗ್ಗೆ ಕೂಡಾ ಪ್ರಸ್ತಾಪ ಬಂತು . ಇದರ ಭಾವಾರ್ಥ ಹೀಗಿದೆ .

" ಮನುಷ್ಯನು ಮತಗಳನ್ನು ಸೃಷ್ಟಿಸಿದನು 

ಮತಗಳು ದೇವರ ಸೃಷ್ಟಿಸಿದವು .

ಮನುಷ್ಯನು ,ಮತಗಳು ಮತ್ತು ದೇವರುಗಳು 

ಕೂಡಿ ಮನಸು ಮತ್ತು ಮಣ್ಣು ಹಂಚಿಕೊಂಡವು .

ಹಿಂದೂ ಅದೆವು ಮುಸ್ಲಿಂ ಅದೆವು ಕ್ರಿಶ್ಚಿಯನ್ ಅದೆವು 

ನಮ್ಮೊಳಗೇ  ನಾವು  ಅಪರಿಚಿತ ವಾದೆವು;

ಇಂಡಿಯಾ ಭಾರತವಾಯಿತು ಭ್ರಾಂತರ ಆಲಯ 

ಸಾವಿರ ಸಾವಿರ ಮಾನವ ಹೃದಯಗಳು ಆಯುಧಾಗಾರ ವಾಗಲು 

ಓಣಿಯಲ್ಲಿ ದೈವ ಸತ್ತಾಗ ದೆವ್ವ ಗಹಗಹಿಸುತ್ತಿತ್ತು . 

ಸತ್ಯವೆಲ್ಲಿ? ಸೌಂದರ್ಯವೆಲ್ಲಿ ?ಸ್ವಾತಂತ್ರ್ಯವಲ್ಲಿ ?

ರಕ್ತ ಬಂಧವೆಲ್ಲಿ ?ನಿತ್ಯ ಸ್ನೇಹವೆಲ್ಲಿ ?

ಸಾವಿರ ವರುಷಗಳಿಗೊಮ್ಮೆ ಎತ್ತಿ ಬರುವ ಅವತಾರವೆಲ್ಲಿ ?

ಮಾನವ ಓಣಿಯಲ್ಲಿ ಸಾಯುತ್ತಿರೆ 

ಮತಗಳು ಗಹ ಗಹಿಸುತ್ತಿವೆ .. 

 https://youtu.be/q_xZ7rq2Y0s



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ