ಬೆಂಬಲಿಗರು

ಸೋಮವಾರ, ಜನವರಿ 31, 2022

ಒಂದು ಓದು


 ಎಷ್ಟು ಸಾರಿ ಓದಿದದರೂ ಬೇಸರವಾಗದಿರುವ ಪುಸ್ತಕಗಳಲ್ಲಿ ಒಂದು ಡಿ ವಿ ಜಿ ಯವರ ನೆನಪಿನ ಚಿತ್ರಗಳು(ಜ್ಞಾಪಕ ಚಿತ್ರ ಶಾಲೆ ) . ಮನಸಿಗೆ ಉದಾಸೀನವಾದಾಗ ಮುದ ನೀಡುವ ಓದು .

ವಿಶ್ವೇಶ್ವರಯ್ಯ ನವರ ಬಗ್ಗೆ ಬರೆಯುತ್ತಾ -ಅವರ ಜೀವಿತೋದ್ದೇಶ ದ  ಮೂಲ ಸೂತ್ರವನ್ನು ಈ ರೀತಿ ವಿವರಿಸಬಹುದೆಂದು ನನಗೆ(ಡಿವಿಜಿ ಅವರಿಗೆ) ತೋರುತ್ತದೆ . 

೧.ನಮ್ಮ ದೇಶದಲ್ಲಿ ವೇದಶಾಸ್ತ್ರಪುರಾಣಗಳ ಸ್ಮರಣೆಯೂ ಉದಾಹರಣೆಯೂ ಅಡಿಗಡಿಗೂ ಕಾಣುತ್ತವೆ .ಆದರೆ ನಮ್ಮ ಸಾಮಾನ್ಯ ನಿತ್ಯ ಜೀವನದಲ್ಲಿ ಈ ವಾಕ್ಯಗಳು ಪ್ರತಿಫಲಿಸಲಿಲ್ಲ .ಜೀವನದ ಮಟ್ಟ ತೀರಾ ಹೀನವಾಗಿದೆ . ಉನ್ನತವಾದ ತತ್ವಗಳು ನೀಚವಾದ ಜೀವನಕ್ರಮ -ಇವೆರಡನ್ನೂ ಹೇಗೆ ಹೊಂದಿಸುವುದು ?

೨ಕಿವಿಯಲ್ಲಿ ಸಂತೋಷಕ್ಕಾಗಿ ದೊಡ್ಡ ಮಾತುಗಳನ್ನು ಆಡುತ್ತೇವೆ ;ಜೀವನೋಪಾಯಕ್ಕಾಗಿ ಚಿಲ್ಲರೆ ದಾರಿ ಹಿಡಿಯುತ್ತೇವೆ . 

೩.ನಮ್ಮಲ್ಲಿರುವ ಸಂಪತ್ತಿನ ದಾರಿದ್ರ್ಯ ಮಾತ್ರವಲ್ಲ ,ಪೌರುಷದ ದಾರಿದ್ರ್ಯ ಇನ್ನೂ ಹೆಚ್ಚಾಗಿದೆ . 

೪. ನಮ್ಮ ದೇಶ ಒಳ್ಳೆಯ ಸ್ಥಿತಿಗೆ ಬರ ಬೇಕಾದರೆ ನಮ್ಮ ಜನ ತಾವು ಉತ್ತಮರಾಗ ಬೇಕೆಂದು ಮನಸು ಮಾಡಬೇಕು .ಮೊದಲು ಇಹ ಜೀವನವನ್ನು ವಿಹಿತ ರೀತಿಗೆ ತರಬೇಕು .ಪರರ ವಿಚಾರವನ್ನು ಮಾತನಾಡಿಕೊಳ್ಳ್ಳುತ್ತ ಇಹವನ್ನು ಅಲ್ಲಗೆಳೆದಿದ್ದರ ಫಲ ನಮ್ಮ ಇಂದಿನ ಬಾಳು .. (ಇನ್ನೂ ೪ ವಾಕ್ಯಗಳು ಇವೆ )

ಹೀಗೆ ವಿದ್ಯೆ ,ವಿಜ್ಞಾನ ,ನೀತಿ ಮತ್ತು ಕಾರ್ಯವಂತಿಗೆ ವಿಶ್ವಶ್ವೇರಯ್ಯನವರ ದೃಷ್ಟಿಯಲ್ಲಿ ಅತ್ಯಂತ ಮುಖ್ಯ ಗುಣಗಳಾದವು . 

Bharat Ratna with a British knighthood - Why India celebrates Engineers Day  on the birth anniversary of M. Visvesvaraya | The Economic Times


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ