ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 10, 2021

ಮುಂಬೈ ತಾರಾ ಹೊಟೇಲ್ ನಲ್ಲಿ "ಮುನಿಸು ತರವೇ"

 ಮುಂಬೈ ತಾರಾ ಹೊಟೇಲ್ ನಲ್ಲಿ "ಮುನಿಸು ತರವೇ"

                       



                                


ನಿನ್ನೆ ಮುಂಬೈ ಯಲ್ಲಿ ನನ್ನ ಆಪ್ತ ಮಿತ್ರ ಡಾ  ಜೀವನ್ ರಾಮ್ ಮಗಳ ಮದುವೆ . ನಮಗೆ ವಸತಿ ,ಮದುವೆ ಸಮಾರಂಭ ಎಲ್ಲಾ ವಿಮಾನ ನಿಲ್ದಾಣ ಬಳಿ ಇರುವ ಪಂಚ ತಾರಾ ಹೋಟೆಲ್ ಲಲಿತ್ ನಲ್ಲಿ . ಮುಂಬೈ ನಾನು ಮೆಚ್ಚುವದು ಅಲ್ಲಿ ಗೊಂದಲದ ನಡುವೆಯೂ ಇರುವ ಒಂದು ಶಿಸ್ತಿಗಾಗಾಗಿ  ಮತ್ತು ಅಲ್ಲಿ  ದುಡಿಮೆಗೆ ಇರುವ ಅವಕಾಶ ಮತ್ತು ಆದ್ಯತೆಗಾಗಲಿ . 

ಅದಿರಲಿ ಮದುವೆಗೆ ಸ್ಯಾಕ್ಸೋಫೋನ್ ವಾದನ ನುಡಿಸದವರು ಓರ್ವ ಮಹಿಳೆ .ಚೆನ್ನಾಗಿಯೇ ನುಡಿಸಿದರು ;ಮುಖ್ಯ ಕಾರ್ಯಕ್ರಮಕ್ಕೆ ಅನುಗುಣವಾಗಿ ಕೃತಿಗಳ ಆಯ್ಕೆ ಮಾಡಿ ನುಡಿಸಿದರು .ಉದಾ ಮದುಮಗಳನ್ನು ಕರೆ ತರುವಾಗ ಭಾಗ್ಯದ ಲಕ್ಷ್ಮಿ ಬಾರಮ್ಮಾ ಇತ್ಯಾದಿ ..ಕನ್ನಡ ದೇವರ ನಾಮಗಳೇ ಹೆಚ್ಚು ಇದ್ದವು .;ಜತೆಗೆ ಸುಬ್ರಾಯ ಚೊಕ್ಕಾಡಿಯವರ ಜನಪ್ರಿಯ ಕೃತಿ ಮುನಿಸು ತರವೇ ಮುಗುದೆ ಪ್ರಸ್ತುತ ಪಡಿಸಿದ್ದು ವಿಶೇಷ . ಅಂದ ಹಾಗೆ ಹುಡುಗಿ ನಮ್ಮ ಊರಿನವಳು ,ವರ ಸಿಂಧಿ ಎರಡೂ ಸಂಪ್ರದಾಯದಲ್ಲಿ ನಡೆದ ಚಿಕ್ಕ ಚೊಕ್ಕ ಆತ್ಮೀಯ ಕಾರ್ಯಕ್ರಮ. 

ಕೊನೆಗೆ ಸ್ಯಾಕ್ಸೋಫೋನ್ ವಾದಕಿಯನ್ನು  ಭೇಟಿಯಾಗಿ ಅಭಿನಂದನೆ ಸಲ್ಲಿಸಿ ,ಅನುಮತಿ ಪಡೆದು ಭಾವಚಿತ್ರ ತೆಗೆದೆ .ಉಡುಪಿ ಮೂಲದವರಾದ ಇವರ ಹೆಸರು  ಶ್ರೀಮತಿ ಹರಿಣಾಕ್ಷಿ , ಘಾಟ್ಕೋಪರ್ ನಲ್ಲಿ ನೆಲೆಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ