ಬೆಂಬಲಿಗರು

ಭಾನುವಾರ, ಡಿಸೆಂಬರ್ 12, 2021

ಒಂದು ಸಣ್ಣ ಅರ್ಥ ವಿಚಾರ

 ನಾನು ರೈಲ್ವೆ ವೈದ್ಯಾಧಿಕಾರಿ ಆಗಿ ವರ್ಗಾವಣೆ ಗೊಂಡು ಚಾರ್ಜ್ ತೆಗೆದುಕೊಳ್ಳುವಾಗ ಪ್ರತಿಯೊಂದು ಕಡೆ ಹಳೇ ಕಡತಗಳ ರಾಶಿ ಇರುತ್ತಿದ್ದು ಅದರ ವಿಲೇವಾರಿಯ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ . ಅದರಲ್ಲಿ ರೋಗಿಗಳ ವೈಯುಕ್ತಿಕ ದಾಖಲೆ ಅಥವಾ ದೇಶದ ಸುರಕ್ಷತೆಗೆ ಸಂಬಂದಿಸಿದ ಯಾವುದೇ ಮಾಹಿತಿ ಇರುತ್ತಿರಲಿಲ್ಲ . ಒಂದು ಕಡೆ ಇವನ್ನುರದ್ದಿಗೆ ಹಾಕಲು ನಿರ್ಧರಿಸಿದೆ .ನನ್ನ ಫಾರ್ಮಸಿಸ್ಟ್ ಹಾಗೆ ಮಾರುವಂತಿಲ್ಲ ಸರ್ ಮೇಲಿನವರ ಅನುಮತಿ ಬೇಕು ಮತ್ತು ಕೆಲವು ಕೊಟೇಶನ್ ಬೇಕು ಎಂದು ಎಚ್ಚರಿಕೆ ನೀಡಿದರು .ಆಯಿತು ಮೇಲಿನವರಿಗೆ ಬರೆದು ಅನುಮತಿ ಪಡೆದು ,ಒಬ್ಬ ರದ್ದಿಯವನನ್ನು ಕರೆದು ಅವನ ಕೈಯ್ಯಿನಿಂದಲೇ ಹಲವು ಕೊಟೇಶನ್ ಪಡೆದು ಅವನಿಗೇ ಎಲ್ಲಾ ಮಾರಿ ಆಗಿನ ಕಾಲದಲ್ಲಿ ಹತ್ತೋ ಹದಿನೈದೋ ರೂಪಾಯಿ ಸಿಕ್ಕಿ ಅದನ್ನು ಟ್ರೆಜರಿಗೆ ಕಟ್ಟಿಸಿ ದೇಶದ ಸಂಪತ್ತು ಅಣುರೇಣು ಹೆಚ್ಚಿಸಿದೆ . ಆಸ್ಫತ್ರೆಯ ಆಫೀಸು ಕೂಡಾ ಸ್ವಚ್ಛ ಆಯಿತು . 

ಎಚ್ ನರಸಿಂಹಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ (ಕ್ಯಾಬಿನೆಟ್ ಮಂತ್ರಿ ಸ್ಥಾನ )ಪ್ರವಾಸಕ್ಕೆ ರೈಲಿನ  ಪ್ರಥಮ ದರ್ಜೆ   ಸಿ ಗೆ ಅರ್ಹತೆ ಇದ್ದರೂ  ದ್ವಿತೀಯ ತರಗತಿಯಲ್ಲಿ ಪ್ರಯಾಣ ಮಾಡಿ ,ಅಷ್ಟಕ್ಕೇ ಭತ್ತೆ ಪಡೆಯುತ್ತಿದ್ದರು . ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ದಿನಪತ್ರಿಕೆಗಳನ್ನು ಹಳೆಯದಾದ ಮೇಲೆ ಮಾರಿ ಸರಕಾರದ ತಿಜೋರಿಗೆ ಕಟ್ಟುತ್ತಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ