ಬೆಂಬಲಿಗರು

ಶನಿವಾರ, ಡಿಸೆಂಬರ್ 11, 2021

ಆಧುನಿಕ ರಾಬಿನ್ ಹುಡ್ ಗಳು

                    ಆಧುನಿಕ ರಾಬಿನ್ ಹುಡ್ ಗಳು 

ನಿನ್ನೆ ಮುಂಬೈ ಲಲಿತ್ ಹೊಟೇಲ್ ನಲ್ಲಿ ಉಪಾಹಾರ ಸೇವಿಸುವಾಗ ಒಂದು  ಫಲಕ ಗಮನ ಸೆಳೆಯಿತು . ಇಲ್ಲಿ ಉಳಿಕೆಯಾದ ಆಹಾರ ವಸ್ತುಗಳನ್ನು ಹಸಿದವರಲ್ಲಿ ಹಂಚಲು ರಾಬಿನ್ ಹುಡ್ ಆರ್ಮಿ ಸ್ವಯಂ ಸೇವಾ ಸಂಸ್ಥೆಗೆ ಕೊಡಲಾಗುವುದು ಎಂಬ ಒಕ್ಕಣೆ .

ಪರಿಚಾರಕರಲ್ಲಿ ವಿಚಾರಿಸಲು ಕೋವಿಡ್ ನಿಂದ ಸ್ವಲ್ಪ ವ್ಯತ್ಯಯ ಆಗುವುದು ಬಿಟ್ಟರೆ ಈ ಸೇವೆ ನಡೆಯುತ್ತಿದೆ ಎಂದರು . ರಾಬಿನ್ ಹುಡ್ ಇಂಗ್ಲಾಂಡ್ ನಲ್ಲಿ ದಂತ ಕತೆ,ಸಿರಿವಂತರನ್ನು  ದೋಚಿ  ಬಡ ಬಗ್ಗರಲ್ಲಿ ಹಂಚುತ್ತಿದ್ದ ವೀರ .ನಮ್ಮ ರಾಜ್ಯದ ಗುಡಿಬಂಡೆ ಬೈರೇ ಗೌಡ ,ಕೇರಳದ  ಕಾಯಂ ಕುಳಮ್  ಕೊಚ್ಚುಣ್ಣಿ ಹೆಚ್ಚು ಕಡಿಮೆ ಇಂತಹವರೇ.

ಆರು ವರ್ಷಗಳ ಹಿಂದೆ ಮುಂಬೈಗೆ ಒಂದು ಕಾರ್ಯಕ್ರಮ ನಿಮಿತ್ತ ಹೋದವನು ಮರಳುವಾಗ 

 ರಾತ್ರಿ  ಹತ್ತೂವರೆ ರೈಲು ಮೂರು ಗಂಟೆ ವಿಳಂಬ ವಿದ್ದುದರಿಂದ  ಅಸಹನೆಯಿಂದ 

ಕಾಯುತ್ತಿದ್ದೆ .ಸ್ಟೇಷನ್ ಪರಿಸರದಲ್ಲಿ  ಪ್ರಯಾಣಿಕರು ,ನಿರ್ಗತಿಕರು ,ಭಿಕ್ಷುಕರು 

 ಇತ್ಯಾದಿ   ಎಲ್ಲೆಂದರಲ್ಲಿ ಜಾಗ ಮಾಡಿಕೊಂಡು ಮಲಗಿದ್ದರು . ಸುಮಾರು ಒಂದು 

ಗಂಟೆ ಸಮಯ ಒಂದು ವ್ಯಾನ್ ಬಂದು ಸ್ಟೇಷನ್ ಪೂರ್ವ ಭಾಗದಲ್ಲಿ ನಿಂತಿತು ,

ಕೂಡಲೇ ಮಲಗಿದ್ದವರು ಹಲವರು ಎದ್ದು ಕ್ಯೂ ನಿಂತರು .ಕೆಲವರ ಕೈಯ್ಯಲ್ಲಿ ತಟ್ಟೆ .

ಗಲಾಟೆ ಇಲ್ಲ ,ಗೊಂದಲ ಇಲ್ಲ.ಮುಂಬೈ ಇಲ್ಲದಿದ್ದರೂ ಕ್ಯೂ ಗೆ ಹೆಸರಾದ ನಗರ .

 ( ಇಲ್ಲಿಯ ಜನಸಂಖ್ಯೆ ಯೂ ಇದಕ್ಕೆ ಕಾರಣ ಇರಬಹುದು .ಗೊಂದಲದ 

ನಡುವೆಯೂ ಒಂದು ಶಿಸ್ತು ಇಲ್ಲಿಯ ಜೀವನವನ್ನು ಸಹನೀಯವಾಗಿ ಮಾಡಿದೆ .)

   ವ್ಯಾನ್ ನಿಂದ ಇಳಿದ ಯುವಕರು ಎಲ್ಲರಿಗೂ ಆಹಾರ ವಿತರಣೆ ಮಾಡಿ 

ಯಾವುದೇ ಗೌಜಿ ಗದ್ದಲ ಇಲ್ಲದೆ ಮರಳಿದರು .ಉಂಡವರು ಸಂತೃಪ್ತಿಯಿಂದ ನಿದ್ದೆಗೆ 

ಜಾರಿದರು .ಅಷ್ಟರಲ್ಲಿ ನನ್ನ ಟ್ರೈನೂ ಆಗಮಿಸಿತು .ಗಣೇಶ ಹಬ್ಬವಾದ್ದರಿಂದ ರಶ್ 

ಇತ್ತು .ಕಾದಿರಿಸದ ಬೋಗಿ ಗೆ  ಹತ್ತಲು ಜನ ತಾವೇ ಕ್ಯೂ ಹಚ್ಚಿದರು .ಅಲ್ಲೂ ಒಂದು 

ಶಿಸ್ತು .

ಟ್ರೈನ್ ಏರಿದವನಿಗೆ  ಅಲ್ಲಿ ಅನ್ನ ದಾನವ ಮಾಡುತ್ತಿದ್ದವರ ದೃಶ್ಯ 

.ದಾನವರಾಗುತ್ತಿರುವ ಮನುಜರ ನಡುವೆ ಅನ್ನ ದಾನವ ಮಾಡುವ ಮನುಜರಾರು ?

ವಿಚಾರಿಸಿದಾಗ ತಿಳಿಯಿತು .ಇವರೇ ಅಧುನಿಕ ರಾಬಿನ್ ಹುಡ್ ಗಳು .ಆದರೆ  

ಇವರು ಇರುವವರನ್ನು ಲೂಟಿ ಮಾಡಿ ಇಲ್ಲದವರಿಗೆ ಕೊಡುವವರಲ್ಲ .ಇದ್ದವರಿಂದ 

ಮಿಕ್ಕದ್ದನ್ನು ಇಲ್ಲದವರಿಗೆ ಹಂಚುವವರು .ದೆಹಲಿ ನಗರದಲ್ಲಿ ಕೆಲವು ಸಹೃದಯೀ

ಯುವಕರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಹೋಟೆಲ್ ಕಲ್ಯಾಣ ಮಂಟಪಗಳಲ್ಲಿ 

ಮಿಕ್ಕ ಆಹಾರ ಸಂಗ್ರಹಿಸಿ  ನಿಗದಿತ ಜಾಗಗಳಲ್ಲಿ ಅದನ್ನು ಹಂಚುವರು .ಇದರ 

ಮುಂಬೈ ಶಾಖೆಯ ಕಾರ್ಯವನ್ನೇ ನಾನು ಕಂಡದ್ದು .ಆಹಾರ ಅಲ್ಲದೆ ಚಳಿಗಾಲದಲ್ಲಿ 

ಕಂಬಳಿ ಹಂಚುವ ಕೆಲಸವನ್ನೂ ಮಾಡುವರಂತೆ .

ಈ ಸಂಸ್ಥೆಯ ಶಾಖೆಗಳು ಪಾಕಿಸ್ತಾನ ಸೇರಿ ವಿದೇಶದ ಕೆಲ ದೇಶಗಳಲ್ಲಿ ಕೂಡಾ ಹರಡಿದ್ದು ಇದ್ದು ಪರಸ್ಪರ ಮೈತ್ರಿ ಮಾಡಿ ಕೊಂಡಿವೆ .

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ 

ಕೈಲಾಸ ಬಿನ್ನಾಣವಕ್ಕು ಸರ್ವಜ್ಞ 

ಅವರ ಜಾಲತಾಣ ದಿಂದ ಆರಿಸಿದ ನುಡಿಮುತ್ತುಗಳು
.೧  ಉಪವಾಸದಿಂದ ಸಾಯುವವರ ಸಂಖ್ಯೆ ಕ್ಷಯ ,ಏಡ್ಸ್  ಮತ್ತು ಮಲೇರಿಯಾ 

ಕಾಯಿಲೆಗಳಿಂದ ಒಟ್ಟಾಗಿ ಸಾಯುವವರಿಗಿಂತ ಹೆಚ್ಚು .

೨.ಜಗತ್ತಿನಲ್ಲಿ ತಯಾರಿಸಿದ ಆಹಾರದಲ್ಲ್ಲಿ ಮೂರನೇ ಒಂದು  ಸೇವಿಸಲ್ಪಡುವುದೇ 

ಇಲ್ಲ .

೩.೮೨% ಉಪವಾಸ ವಿರುವವರು ಆಹಾರ ಮಿಗತೆ ಇರುವ ನಾಡಿನಲ್ಲಿಯೇ 

ಇರುವರು 

೪ ಜಗತ್ತಿನಲ್ಲಿ ಹತ್ತು ಸೆಕುಂಡುಗಳಿಗೆ ಒಂದು ಮಗು ಉಪವಾಸದಿಂದ ಸಾಯುತ್ತಿದೆ .

ಇವರ ಬಗ್ಗೆ ಹೆಚ್ಚು ಮಾಹಿತಿಗೆ www. robinhoodarmy.com  ಗೆ ಲಾಗ್ ಮಾಡಿರಿ 
         

 ಇಂತಹ ರಾಬಿನ್ ಹುಡ್ ಗಳ ಸಂತತಿ ಸಾವಿರವಾಗಲಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ