ಬೆಂಬಲಿಗರು

ಭಾನುವಾರ, ಡಿಸೆಂಬರ್ 31, 2023

 


  ಬಿ ಎ  ಸಾಲೆಟೋರ್ ಎಂದು ಪ್ರಸಿದ್ಧರಾದ   ಡಾ ಭಾಸ್ಕರ ಆನಂದ ಸಾಲೆತ್ತೂರು  ೧೯೦೨ ರಲ್ಲಿ ವಿಟ್ಲ ಸಮೀಪ ಸಾಲೆತ್ತೂರಿನಲ್ಲಿ ಜನಿಸಿದರು ,ಮಂಗಳೂರು ,ಚೆನ್ನೈ ಮತ್ತು ಮುಂಬೈ ಯಲ್ಲಿ ವಿದ್ಯಾಭ್ಯಾಸ "ವಿಜಯನಗರ ಸಾಮ್ರಾಜ್ಯದಲ್ಲಿನ ಸಾಮಾಜಿಕ ಮತ್ತು  ರಾಜಕೀಯ ಜೀವನ "ಎಂಬ ಪ್ರಭುದ್ದ  ಅಧ್ಯಯನ ಕ್ಕೆ ಲಂಡನ್ ವಿಶ್ವ ವಿದ್ಯಾಲಯ ದಿಂದ  ಇತಿಹಾಸದಲ್ಲಿ ಡಾಕ್ಟರೇಟ್ . .ವಿಜಯನಗರ ಅರಸರು ಮೂಲತಃ ಕನ್ನಡಿಗರು ಎಂದು ಸಾಧಿಸಿದ ಹೆಗ್ಗಳಿಕೆ .ಮುಂದೆ ಜರ್ಮನ್ ವಿಶ್ವವಿದ್ಯಾಲಯ ಒಂದರಿಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಎರಡನೇ ಡಾಕ್ಟರೇಟ್ ,
ವೃತ್ತಿ ಜೀವನ ವನ್ನು ಮುಂಬೈಯ ಪರ್ಷು ರಾಮ್ ಬಾವೂ ಕಾಲೇಜು ನಲ್ಲಿ ಆರಂಭಿಸಿ ,ಅಹಮದಾ ಬಾದ್ ವಿಶ್ವ ವಿದ್ಯಾಲಯ  ಅಧ್ಯಾಪನ .:ನಂತರ ಬಾಂಬೆ ವಿದ್ಯಾ ಇಲಾಖೆ (ಇದರಲ್ಲಿ ಡಿ ಸಿ ಪಾವಟೆ ಕೂಡಾ ಸೇವೆ ಸಲ್ಲಿಸಿದ್ದರು ),ಮುಂದೆ ರಾಷ್ಟ್ರೀಯ ಪತ್ರಾಗಾರ ದ ನಿರ್ದೇಶಕ . ೧೯೬೦ ರಲ್ಲಿ ನಿವೃತ್ತಿ ನಂತರ ಕರ್ನಾಟಕ ವಿಶ್ವ ವಿದ್ಯಾಲಯ ಇತಿಹಾಸ ವಿಭಾಗ   ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸ್ಸರ್ ಮತ್ತು ಮುಖ್ಯಸ್ಥ . ಮುಂದೆ ಅಲ್ಲಿಯೇ ಕನ್ನಡ ಸಂಶೋಧನಾ ಕೇಂದ್ರದ ಮುಖ್ಯಸ್ಥ . ಪ್ರಸಿದ್ಧ ಇತಿಹಾಸಜ್ಞ ರಾದ ಪ್ರೊ ಜಿ ಎಸ್ ದೀಕ್ಷಿತ್ ಮತ್ತು ಸೂರ್ಯನಾಥ ಕಾಮತ್ ಇವರ ಗರಡಿಯಲ್ಲಿ ಬೆಳಗಿದ ಪ್ರತಿಭೆಗಳು . 
೧೯೬೩ ರಲ್ಲಿ ತಮ್ಮ ೬೧ ನೇ ವಯಸಿನಲ್ಲಿ ನಿಧನರಾದರು . 
 ಹಿಂದಿನ ಶತಮಾನಗಳ ವಿದೇಶಿಯರು ,ದೇಶಪ್ರೇಮ ಇತ್ಯಾದಿ ಬಗ್ಗೆ ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ ಅವರ  ಅಭಿಪ್ರಾಯ ಗಮನಾರ್ಹ . 
"ಚರಿತ್ರೆಯಲ್ಲಿ ನಾವು ಇಂದಿನ ವಿದ್ಯಮಾನಗಳಿಂದ ಪೂರ್ವಾಗ್ರಹ  ಪೀಡಿತರಾಗಿ ವಿದೇಶಿ ಎಂಬುದರ ವ್ಯಾಖ್ಯೆ ಮಾಡುತ್ತಿದ್ದೇವೆ . ಶತ ಶತಮಾನ ಗಳಿಂದ ಬಾಹ್ಯ   ಪ್ರಭಾವಗಳಿಗೆ   ನಮ್ಮ ಇತಿಹಾಸ  ಒಳಗಾಗಿದೆ .ಇದರಿಂದ ಸಾಮಾಜಿಕ ಪರಿಶುದ್ಧತೆ ಎಂಬುದು ಒಂದು ಮಿಥ್ಯೆ ಮತ್ತು ನಮ್ಮ ಅಧ್ಯಯನದಲ್ಲಿ ಅದಕ್ಕೆ ಸ್ಥಾನ ವಿಲ್ಲ, ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ನೂರಕ್ಕೆ ನೂರು ಒಂದು ವಿಭಾಗದಿಂದ ಬಂದುದು ಎಂದು ಇಲ್ಲ ,ಆದುದರಿಂದ ನಮ್ಮ ಹಿರಿಯರು ಎಲ್ಲರಿಂದ ಮತ್ತು ಎಲ್ಲದರಿಂದ ಒಳ್ಳೆಯದನ್ನು ತೆರೆದ ಮನಸಿನಲ್ಲಿ ಸ್ವೀಕರಿಸಿದಂತೆ ನಾವೂ ಹೃದಯ ವೈಶಾಲ್ಯದಿಂದ  ಸಹನೆ ಮತ್ತು ಸಹ ಬಾಳ್ವೆಯನ್ನು ನಮ್ಮದಾಗಿರಿಸಿ ಕೊಳ್ಳುವುದು ಇಂದಿನ ಅವಶ್ಯಕತೆ "



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ