ಬೆಂಬಲಿಗರು

ಮಂಗಳವಾರ, ಜನವರಿ 31, 2023

ದಕ್ಷಿಣಾ ಮೂರ್ತಿ ನೆನಪು

                    Vintage Vignettes: Remembering V. Dakshinamoorthy - India Art Review 

ಮೊನ್ನೆ ಸಾಯಂಕಾಲ ಮಾತೃಭೂಮಿ ಮಲಯಾಳಂ ಚಾನೆಲ್ ನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು . ವಿದುಷಿ ಒಬ್ಬರು ಮಲಯಾಳಂ ಸಿನಿಮಾ ದ  ಪ್ರಸಿದ್ಧ ಸಂಗೀತ ನಿರ್ದೇಶಕ ದಿ . ದಕ್ಷಿಣಾ ಮೂರ್ತಿ ಅವರ ಜನಪ್ರಿಯ  ಹಾಡುಗಳ ಶಾಸ್ತ್ರೀಯ ಸಂಗೀತ ಹಿನ್ನಲೆ ಯ ಬಗ್ಗೆ  ಸಾದೋಹರಣ ಪ್ರಸ್ತುತ ಪಡಿಸುತ್ತಿದ್ದರು .ಹೆಚ್ಚಿನ ಗೀತೆಗಳು ನನಗೆ ಪರಿಚಿತವಾಗಿದ್ದು ಒಂದು ರಿವಿಶನ್ ಆದಂತೆ ಆಯಿತು . ದಕ್ಷಿಣಾ ಮೂರ್ತಿ ಶಾಸ್ತ್ರೀಯ ಸಂಗೀತ ಹಿನ್ನಲೆ ಯವರು ,ಸಹಜವಾಗಿಯೇ ಅವರ ಹಾಡುಗಳಲ್ಲಿಅದರ ಛಾಪು . ಪ್ರಸಿದ್ಧ ಕವಿ ಶ್ರೀಕುಮಾರನ್ ತಂಬಿ ಅವರ ಅನೇಕ ಗೀತೆಗಳಿಗೆ ಅವರು ಸ್ವರ ಹಾಕಿರುವರು . ಯೇಸುದಾಸ್ ಮತ್ತು ಅವರ ತಂದೆ ಆಗಸ್ಟಿನ್  ,ಇಳಯರಾಜ ಮುಂತಾದವರು ಇವರ ಗರಡಿಯಲ್ಲಿ ಪಳಗಿದವರು . 

ಆ ಕಾರ್ಯಕ್ರಮದಲ್ಲಿ ಎರಡು ಹಾಡುಗಳು ನನ್ನ ಇಷ್ಟದವು . 

ಒಂದು ಸಂಧ್ಯೆಕ್ಕೆಂದಿನು ಸಿಂಧೂರಮ್ (ರಚನೆ ಶ್ರೀಕುಮಾರನ್ ತಂಬಿ ).ಅದರ ಭಾವಾರ್ಥ ಹೀಗಿದೆ 

ಸಂಧ್ಯೆಗೆ ಏಕೆ ಸಿಂಧೂರ (ಸಾಯಂಕಾಲಕ್ಕೆ ಏಕೆ ಕುಂಕುಮ ಬೊಟ್ಟು )

ಬೆಳದಿಂಗಳಿಗೆ ಏಕೆ ವೈಡೂರ್ಯ 

ಕಾಡಿಗೇಕೆ  ಗೆಜ್ಜೆ 

ನನ್ನ ಕಣ್ಮಣಿ ನಿನಗೇಕೆ ಆಭರಣ ?(ನೀನೇ ಆಭರಣ ಎಂಬ ಅರ್ಥ )

ಮೇಲಿನ ಸಾಲುಗಳು ಪ್ರಿಯಕರನು ಪ್ರಿಯೆಯನ್ನು ಉದ್ದೇಶಿಸಿ ಹಾಡುವದು . ಆದರೂ ಆಭರಣದ ಬೇಡಿಕೆ ಇತ್ತ ಪತ್ನಿಯರಯನ್ನು ಸಮಾಧಾನ ಪಡಿಸಲೂ ಇದನ್ನು ಧಾರಾಳ ಬಳಸಿಕೊಳ್ಳ ಬಹುದು . 

ಇನ್ನೊಂದು ಹಾಡು

ಸ್ವಪ್ನ೦ ಗಳ್  ಸ್ವಪ್ನನ್ಗಳೇ ನಿಂಗಲ್ ಸ್ವರ್ಗ ಕುಮಾರಿಗಳಲ್ಲೇ ( ರಚನೆ ವಯಲಾರ್ ರಾಮ ವರ್ಮಾ )

ಇದರ ಭಾವಾರ್ಥ 

ಕನಸುಗಳೇ ನೀವು ಸ್ವರ್ಗ ಕುಮಾರಿಗಳು ಅಲ್ಲವೇ 

ನೀವು ಇಲ್ಲದ ಈ ಜಗವು ನಿಶ್ಚಲ ಶೂನ್ಯ 

ನೀವಿಲ್ಲದ ಜಗದಲಿ 

ದೇವರು ಮನುಜರು ,ಸೌಂದರ್ಯ ಸಂಕಲ್ಪ ಶಿಲೆಗಳು ,ಸುಗಂಧ  ಪುಷ್ಪಗಳು ಇಲ್ಲ 

ಸ್ವರ್ಗದಿಂದ ಇಳಿದು ಬಂಡ ಬಣ್ಣದ ಚಿಟ್ಟೆಗಳು 

ನನಗರಿವಿಲ್ಲದೆಯೇ ಮಾಡುವಿರಿ  ಕೆತ್ತನೆಯಿಲ್ಲದ ನನ್ನ ಮನದ ಬಾಗಿಲು ತೆರೆದು ಕಾಮನಬಿಲ್ಲಿನ ವರ್ಣಗಳ ಚಿತ್ರಣ . 

https://youtu.be/mVndpu2lu7o



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ