ಬೆಂಬಲಿಗರು

ಶನಿವಾರ, ಜನವರಿ 28, 2023

ಸಂಜೀವಿನಿ ಸಿಂಡ್ರೋಮ್

 ನಮ್ಮ ಫಿಸಿಯೋಲಾಜಿ ಪ್ರೊಫೆಸರ್ ಡಾ ನಾರಾಯಣ ಶೆಟ್ಟಿ ಪರೀಕ್ಷೆ ಪೇಪರ್ ಕೊಡುವಾಗ 'ವಿದ್ಯಾರ್ಥಿಗಳು ಬಹುಮಂದಿ ಹನುಮಾನ್ ಸಂಜೀವಿನಿ ಸಿಂಡ್ರೋಮ್ "ಕಾಯಿಲೆಯಿಂದ ಬಳಲುವರು "ಎಂದು ಹೇಳುತ್ತಿದ್ದರು . ಪ್ರಶ್ನೆಗೆ  ತಿಳಿದೋ ತಿಳಿಯದೆಯೋ ನೇರ ಉತ್ತರ ಬರೆಯದೆ ಪುಟಗಟ್ಟಲೆ ಗೀಚುವರು .ಪರೀಕ್ಷಕರು ಅದರಲ್ಲಿ ಸರಿ ಉತ್ತರ ಎಲ್ಲಿ ಇದೆ ಇದೆ ಎಂದು ತಾಳ್ಮೆಯಿಂದ ಹುಡುಕಿ ತೆಗೆದು ಮಾರ್ಕ್ ಕೊಡಬೇಕಾಗುವುದು . 

ಆಸ್ಪತ್ರೆಯಲ್ಲಿ ಕೂಡಾ ಇದು ಆಗಾಗ ಕಾಣಿಸಿ ಕೊಳ್ಳುತ್ತದೆ . ತಮ್ಮ ವೈದ್ಯಕೀಯ ದಾಖಲೆ ಕೇಳಿದಾಗ ರೋಗಿಗಳು ಅಥವಾ ಜತೆಗೆ ಬಂದವರು ಒಂದಿಷ್ಟು ಕಾಗದದ ರಾಶಿಯನ್ನು ನಮ್ಮ ಮೇಜಿನ ಮೇಲೆ ಸುರುವಿ ಬಿಡುವರು .ಅದರಲ್ಲಿ ರೇಷನ್ ಕಾರ್ಡ್ ,ಜೀನಸು ಅಂಗಡಿ ಪಟ್ಟಿ ..ಕೋರ್ಟ್ ವಾಯಿದೆ ನೋಟೀಸ್ ,ಹಿಂದಿನ ಆಸ್ಪತ್ರೆಯ ಬಿಲ್ಲುಗಳು ಇತ್ಯಾದಿಗಳ ನಡುವೆ ಕಷ್ಟ ಪಟ್ಟು ಸಮಯ ವ್ಯಯಿಸಿ ಹುಡುಕಾಡಿದರೆ ನಮಗೆ ಬೇಕಾದ ಪೇಪರ್ ಸಿಕ್ಕಿದರೆ ಪುಣ್ಯ . ಹಾಗೆಯೇ ಇನ್ನು ಕೆಲವರು ತಾವು ಸೇವಿಸುತ್ತಿರುವ ಔಷಧಿಗಳನ್ನೆಲ್ಲಾ ರಾಶಿ ಹಾಕುವುದೂ ಉಂಟು . 

ಇಂದ್ರಜಿತ್ ನ ಬಾಣದಿಂದ ಪ್ರಜ್ಞಾ ಹೀನ ನಾದ  ಲಕ್ಶ್ಮಣ ನನ್ನು ಗುಣಪಡಿಸಲು  ವಾನರ ವೈದ್ಯ ಸುಷೇನ ಸಂಜೀವಿನಿ ಮೂಲಿಕೆ ತರಲು ಹೇಳಿದಾಗ ಹನುಮಂತ ಪರ್ವತದಲ್ಲಿ ಅದನ್ನು ಹುಡುಕಿಕೊಂಡು ಕುಳಿತು ಕೊಳ್ಳುವದು ಯಾರು ಎಂದು ಪರ್ವತವನ್ನೇ ಹೊತ್ತು ತಂದು ಕೊಟ್ಟನೆಂದು ರಾಮಾಯಣದ ಕತೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ