ಬೆಂಬಲಿಗರು

ಶುಕ್ರವಾರ, ಜೂನ್ 3, 2022

ತಂದ ಪಾಪ ಕೊರೆದು ಪರಿಹಾರ

'ಹಲಸಿನ ಹಣ್ಣಿನ ಮೇಲೆ ಪ್ರೀತಿ ಜತೆಗೆ ಅಂಟು  ಮಯಣದ ಭೀತಿ "ಇದು ನನ್ನ ಗಾದೆ . ಮಿತ್ರರು ಪ್ರೀತಿಯಿಂದ ಒಂದು ಹಲಸಿನ ಹಣ್ಣು ಕೊಟ್ಟಿದ್ದರು . ನನ್ನ ಪತ್ನಿಯ ಒಂದು ಕಂಡೀಶನ್ ಇದೆ ;ಹಣ್ಣು ಎಷ್ಟು ಬೇಕಾದರೂ ಇರಲಿ ಅದನ್ನು ಕೊರೆಯಲು ಸೇರಬೇಕು .ನಾನೂ ಹೇಗೂ ವಿವಿದೋದ್ದೇಶ ಸಹಕಾರಿ ಸಂಘದ ಹಾಗೆ ಎಲ್ಲದಕ್ಕೂ ತಯಾರು . 

ಹಿಂದೆ ಹುಟ್ಟೂರಿನಲ್ಲಿ ಹಲಸಿನ ಹಣ್ಣು ಕೊರೆದು ಕಡಿಯಿಂದ ಬೇರೆ ಮಾಡಲು ಬೇಕಾದಷ್ಟು ಮಕ್ಕಳ ಸೈನ್ಯ ಇರುತ್ತಿತ್ತು . ಕೆಲವರು ತುಂಡು ಮಾಡಲು ,ಕೆಲವರು ಸ್ವಚ್ಚ ಮಾಡಲು ಮತ್ತು ಇನ್ನು ಒಬ್ಬಿಬ್ಬರು ಹಾಳೆಯಲ್ಲಿ ಅದನ್ನು ಬಾಳು ಅಥವಾ ಮಚ್ಚು ವಿನಿನಿಂದ ಕೊಚ್ಚಲು. ಇನ್ನು ಕೆಲವರು ಬಾಳೆ ಎಲೆಯಲ್ಲಿ ಹಣ್ಣು ಮತ್ತು ಅಕ್ಕಿ ಹಿಟ್ಟು ಕಲಸಿ ಮಡಿಸುವರು  .ಹಲಸಿನ ಹಣ್ಣಿನ ಸೀಸನ್ ನಲ್ಲಿ ಸೊಳ್ಳೆಗಳು ಕೂಡಾ ಇರುತ್ತಿದ್ದು ನಮ್ಮ ಕೈ ಮಯಣ ಮಾಯವಾಗುವ ವರೆಗೆ ಕಾದು ಬಂದು ಬೆನ್ನಿಗೆ ಕಚ್ಚುತ್ತಿದ್ದವು . ನಾವು ಮರು ಆಕ್ರಮಣ ಮಾಡುವಂತಿಲ್ಲ . ರಥ ಉರುಳಿದ ಕರ್ಣನ ಮೇಲೆ ಅರ್ಜುನ ಧಾಳಿ ಮಾಡಿದಂತೆ .ಇಲ್ಲಿ ಯುದ್ಧ ಧರ್ಮ ಇಲ್ಲ . ಯಾರಾದರೂ ಹಲಸಿನ ಹಣ್ಣಿಗೆ ಕೈ ಹಾಕದೇ ಇದ್ದವರು ಇದ್ದರೆ ಸೊಳ್ಳೆ ಹೊಡೆಯಲು ಹೇಳುತ್ತಿದ್ದು ಅವರು ಬೇಕೆಂದೇ ಜೋರಾಗಿ ಬಡಿಯುವರು . ಈಗ ಮೊಬೈಲ್ ರಿಂಗ್ ಆದರೆ ಮುಟ್ಟುವಂತಿಲ್ಲ 

ಹಲಸಿನ ಮಯಣವನ್ನು ಒಂದು ಕೋಲಿನ ತುದಿಯಲ್ಲಿ ಉಂಡೆ ಮಾಡಿ  ಬಡವರ ಫೆವಿಕಾಲ್ ನಂತೆ ಬಳಸುತ್ತಿದ್ದರು . ಬೇಳೆ ಮುಂದೆ ಖರ್ಚಿಗೆ ,ಬಾರ್ಟರ್ ವ್ಯವಹಾರಕ್ಕೆ ಶೇಖರಣೆ ,ರೆಚ್ಚೆ  ಹಟ್ಟಿಗೆ ಹಾಕಿದರೆ ದನಗಳು ಮೆಲ್ಲುತ್ತಿದ್ದವು . 

ಈಗ ಪೇಟೆಯಲ್ಲಿ ಈ ರೆಚ್ಛೆ ಇತ್ಯಾದಿ ಗಳನ್ನು  ಡಿಸ್ಪೋಸ್ ಮಾಡುವುದೇ ದೊಡ್ಡ ಚಿಂತೆ . 

ಇಷ್ಟೆಲ್ಲಾ ಪಟ್ಟ  ಕಷ್ಟ  ಅಟ್ಟಿನಳಗೆ ಯಲ್ಲಿ ಹಲಸಿನ ಹಣ್ಣಿನ ಕೊಟ್ಟಿಗೆ ಅಥವಾ ಕಡುಬು ಬೇಯುವಾಗ ಬರುವ ಪರಿಮಳ ದೊಡನೆ ಆವಿಯಾಗಿ ಹೋಗುವದು . 

 Why Jackfruit Might Save the World

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ