ಬೆಂಬಲಿಗರು

ಶುಕ್ರವಾರ, ಜೂನ್ 3, 2022

ಒಂದು ವಿಚಾರ

ಜೀವಂತ ವ್ಯಕ್ತಿಯ ಅಂಗಾಂಶ ವನ್ನು   ಹೊರ ತೆಗೆದು ರೋಗ ಪತ್ತೆಗಾಗಿ ವೈಜ್ಞಾನಿಕ ಪರೀಕ್ಷಣೆಗೆ ಒಳ ಪಡಿಸುವುದನ್ನು ಬಯಾಪ್ಸಿ  ಎನ್ನುತ್ತಾರೆ . ಮರಣಾ ನಂತರ ಮಾಡುವುದಕ್ಕೆ ಅಟಾಪ್ಸಿ ಎನ್ನುವರು . ವೈದ್ಯಕೀಯ ಕ್ಷೇತ್ರದಲ್ಲಿ  ರೋಗಗಳ ಬಗ್ಗೆ ಅಧ್ಯಯನ ದಲ್ಲಿ ಅಟಾಪ್ಸಿ  ಮುಖ್ಯ ಸ್ಥಾನ ವಹಿಸಿದೆ .ನಮ್ಮ ದೇಶದಲ್ಲಿ ಮಾತ್ರ ಇದು ಇನ್ನು ವ್ಯಾಪಕವಾಗಿ ಇಲ್ಲ .ರೋಗಿಯ ಸಂಬಂದಿಕರ ವಿರೋಧ ಮತ್ತು ವೈದ್ಯಕೀಯ ರಂಗದವರ ಅನಾಸ್ಥೆ  ಎರಡೂ ಕಾರಣ . 

ಹಠಾತ್ ಯಾರು ಮರಣ ಹೊಂದಿದರೂ ಹೃದಯಾಘಾತ ಎಂದು ಕರೆದು ಕೈ ತೊಳೆದು ಬಿಡುತ್ತೇವೆ . ಆದರೆ ಸಂಭವಿಸುತ್ತಿರುವ ,ಅದೂ ಸಾಯುವ ವಯಸ್ಸಲ್ಲ ಎನ್ನುವ ಮರಣಗಳ ಕಾರಣ ವ್ಯಕ್ತಿಯ ಅಂತ್ಯ ಕ್ರಿಯೆಯೊಡನೆ ಅಂತ್ಯ ಕಾಣುವುದು ದುರ್ದೈವ್ಯ ,ಅಲ್ಲದೆ ವೈಜ್ಞಾನಿಕ ಪ್ರಗತಿಗೆ ಮಾರಕ . 

ರೋಗಿಯ ಸಂಬಂದಿಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನುರಿತ ಮರಣೋತ್ತರ ಪರೀಕ್ಷಾ ತಜ್ಞರ ತಯಾರಿ ನಮ್ಮ ದೇಶದಲ್ಲಿ ಬಹಳ ಅವಶ್ಯ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ