ಬೆಂಬಲಿಗರು

ಬುಧವಾರ, ಜೂನ್ 29, 2022


 ನಮ್ಮಲ್ಲಿ ಅನೇಕರು ಏನಾದರೂ ಸಾಧಿಸಬೇಕು ಎಂಬ ಉತ್ಸಾಹದೊಡನೆ  ಸರಕಾರಿ ಸೇವೆ ಸೇರುತ್ತೇವೆ . ಅಲ್ಪ ಸಮಯದಲ್ಲಿ ಅಲ್ಲಿನ ಜಡ ಗಟ್ಟಿದ  ಕೆಲಸ ಸಂಸ್ಕೃತಿಯಲ್ಲಿ ನಾವೂ ಒಂದಾಗಿ ಹೋಗುತ್ತೇವೆ .' ಇಲ್ಲಿ ಏನೂ ಹೊಸತು ಮಾಡಲು ಸಾಧ್ಯವಿಲ್ಲ . ನಮ್ಮ ಸಂಬಳ ಸಾರಿಗೆ ಪ್ರಮೋಷನ್ ಸರಿಯಾಗಿ ಬಂದರೆ ಸಾಕು .' ಎಂಬ ಭಾವ ಬರುತ್ತದೆ . ಬೆರಳೆಣಿಕೆಯವರು ರಾಜೀನಾಮೆ ಕೊಟ್ಟು ಹೋಗುತ್ತಾರೆ ಅಥವಾ ತಮ್ಮ ಹುದ್ದೆಗೆ ಸೀಮಿತ ಪರಿಧಿಯಯಲ್ಲಿ ಹೊಸ ಅರ್ಥ ಕೊಟ್ಟು , ಮಾಡ ಬಹುದಾದ ಸಮಾಜಮುಖಿ ಕೆಲಸ ಹುಡುಕುತ್ತಾರೆ . ಎರಡನೇ ವರ್ಗದವರು ನಮ್ಮ ಜಿಲ್ಲೆಯ ಪ್ರಸ್ತುತ  ಸೀನಿಯರ್ ಪೋಸ್ಟಲ್ ಸೂಪರಿಂಟೆಂಡೆಂಟ್ ಅಗಿರುವ ತರುಣ ಅಧಿಕಾರಿ ಶ್ರೀಹರ್ಷ ನೆಟ್ಟಾರ್ ಅವರು .ತಮ್ಮ ಖಾಸಗಿ ಸಾಫ್ಟ್ ವೇರ್ ಕೆಲಸ ಬಿಟ್ಟು ಕೇಂದ್ರ ಲೋಕ ಸೇವ ಆಯೋಗ ಪರೀಕ್ಷೆ ಉತ್ತೀರ್ಣ ರಾಗಿ ಅಂಚೆ ಇಲಾಖೆ ಸೇರಿದವರು .

ಈಗ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅಂಚೆ ಮೂಲಕ ಜನನ ಮರಣ  ಸರ್ಟಿಫಿಕೇಟ್ ಮನೆಗೇ ತಲುಪಿಸುವ ಯೋಜನೆ ಆರಂಬಿಸಿದ್ದು ಜನರು ಇದಕ್ಕಾಗಿ ಅಲೆದಾಡ ಬೇಕಿಲ್ಲ . ನಗರ ಸಭೆ ,ಕಾರ್ಪೊರೇಷನ್ ನವರಿಗೂ ತಲೆ ನೋವು ಆಗದಂತೆ ಅಂಚೆ ತಲುಪಿದ ಮೇಲೆ ಹಣ ಕೊಡುವ ವ್ಯವಸ್ಥೆ ಮಾಡಿದ್ದಾರೆ .

ಇಂತಹ ಅನೇಕ ನೂತನ ಯೋಜನೆಗಳು ಇವರ ಕಾರ್ಯವಧಿಯಲ್ಲಿ ಮೂಡಿ ಬರಲಿ .ಜನರ ಜೀವ ನಾಡಿ ಯಾಗಿದ್ದ ಅಂಚೆ ಇಲಾಖೆ ಸೇವೆಯ ಹೊಸ ಆಯಾಮಗಳನ್ನು ಕಂಡು ಕೊಳ್ಳಲಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ