ಬೆಂಬಲಿಗರು

ಸೋಮವಾರ, ಜೂನ್ 6, 2022

ವಿದ್ಯಾಭೂಷಣ


ನಿನ್ನೆ  ಟಿ ವಿ ಯಲ್ಲಿ ಉಡುಪಿಯಿಂದ  ವಿದ್ಯಾಭೂಷಣ ಅವರ ಸಂಗೀತ ಲೈವ್ ಆಗಿ  ಬರುತ್ತಿತ್ತು .ಭಾರೀ ಸೆಖೆ (ದಕ್ಷಿಣ ಕನ್ನಡದ್ದು "ಶೆಖೆ "ಎಂದು ವಿದ್ಯಾಭೂಷಣ ರೇ ಕಚೇರಿ ನಡುವೆ  ಮುಖ ಒರಸಿ ಕೊಂಡು ಹೇಳಿದರು )ನಡುವೆಯೂ ತುಂಬಿದ ಸಭಾಂಗಣ ,ಕೊನೆಯ ವರೆಗೂ . ವಿದ್ಯಾಭೂಷಣ ಅವರ  ಸಾಹಿತ್ಯ ಶುದ್ದಿ ,ಮತ್ತು  ಯುಕ್ತ ಉಗಾಭೋಗ ದೊಂದಿಗೆ ಕೀರ್ತನೆ ಪ್ರಸ್ತುತಿ ,ಮತ್ತು ಅವರ ಧ್ವನಿಯಲ್ಲಿಯೇ  ಇರುವ ದೈವೀಕತೆ   ಮತ್ತು ಎಲ್ಲಕ್ಕೂ ಕಳಶವಿಟ್ಟಂತೆ ಅವರ ಸರಳತೆ  ಇದು ಅವರ ಆಕರ್ಷಣೆಯ ಗುಟ್ಟು . 

 ನಿನ್ನೆಯ ಕಚೇರಿಯಲ್ಲಿ ಶ್ರೀ ಪ್ರಾದೇಶ್  ಆಚಾರ್ ಅವರ ವಯೊಲಿನ್  ಬಹಳ ಖುಷಿ ಕೊಟ್ಟಿತು . ಅವರ ನಗು ಮುಖ ,ಗಾಯಕ ಮತ್ತು ಸಾಹಿತ್ಯದ ಮನೋಧರ್ಮ ದ  ಚಂದ ಅನುಸರಣೆ  ಚೇತೋಹಾರಿ . ಬಹಳ ಪ್ರತಿಭಾವಂತ ರಾದ ಈ  ಯುವಕನಿಗೆ ಒಳ್ಳೆಯ ಭವಿಷ್ಯ ಇದೆ . 

ನನ್ನ ಮದುವೆ ಆದ ವರ್ಷ ,ಮನೆಯವರು ಸುಬ್ರಹ್ಮಣ್ಯ ಕ್ಕೆ ಹೋಗುವ ಆಸೆ ವ್ಯಕ್ತ ಪಡಿಸಿದ್ದರಿಂದ ಒಂದು ಸಂಜೆ ಅಲ್ಲಿಗೆ ಹೋಗಿದ್ದೆವು . ಆಗಿನ್ನೂ ವಿದ್ಯಾಭೂಷಣ ಅವರು ಮಠ ದಲ್ಲಿ  ಸ್ವಾಮಿಗಳಾಗಿ ಇದ್ದರು .ಗಾಯಕರಾಗಿ ಪ್ರಸಿದ್ದಿ ಪಡೆದಿದ್ದರು .ಸುಬ್ರಹ್ಮಣ್ಯ ದರ್ಶನ ಆದ ಮೇಲೆ ವಿದ್ಯಾಭೂಷಣ ರನ್ನು ಕಾಣುವ ಆಸೆ ವ್ಯಕ್ತ ಪಡಿಸಿದಾಗ ಒಡನೆಯೇ ಒಪ್ಪಿಗೆ ಸಿಕ್ಕಿ ಕಂಡು ಮಾತನಾಡಿಸಿದೆವು .ಅವರ ನೈಜ ಸರಳತೆ ಗೆ ಮಾರು ಹೋದೆವು .ಅಂದು ಏಕಾದಶಿ ಆಗಿದ್ದುದರಿಂದ ನಮಗೆ ಊಟ ಹಾಕಲು ಆಗುವುದಿಲ್ಲವಲ್ಲಾ ಎಂದು ಬೇಸರ ಪಟ್ಟು ಕೊಂಡರು . 

ಹಿಂದೆ ಹೆಚ್ಚಾಗಿ ಅವರಿಗೆ ಎಂ ಎಸ ಗೋವಿಂದಸ್ವಾಮಿ ವಯೊಲಿನ್ ನಲ್ಲಿ ಮತ್ತು  ದಿ ಎಂ ಆರ್ ಸಾಯಿನಾಥ್(ಇವರೂ ಇವರ ಮಕ್ಕಳೂ ನನ್ನ ಆಪ್ತರು ) ಮೃದಂಗ ದಲ್ಲಿ ಸಾಥ್ ಕೊಡುತ್ತಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ