ಬೆಂಬಲಿಗರು

ಬುಧವಾರ, ಜೂನ್ 1, 2022

ನೋವನ್ನು ವೇದಾಂತ ಮಾಡುವ ಕೈವಲ್ಯ


ರೋಗಿಗಳ ಸಹನಾ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಇರುತ್ತದೆ . ಅದು ಅವರವರ ಪ್ರಕೃತಿ ,ಇದಕ್ಕೆ ಪೂರಕವಾಗಿ ದೇಹದಲ್ಲಿ ಹಲವು ರಾಸರಾಯನಿಕಗಳು ಬೇರೆ ಬೇರೆ ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಒಂದು ಕಾರಣ .ಕೆಲವರು ಸಣ್ಣ ನೋವು ಜ್ವರಕ್ಕೂ ಹೊಡಚಾಡಿದರೆ ಇನ್ನು ಕೆಲವರು ಹೆರಿಗೆ ನೋವು ಸಹಿತ ಭಾರೀ ನೋವನ್ನೂ ಸ್ಥಿತಪ್ರಜ್ಞರಾಗಿ ಮೌನವಾಗಿ ಸಹಿಸುವರು . 

ಜೀವವನದಲ್ಲಿ  ಎದುರಿಸುವ ಸಮಸ್ಯೆಗಳೂ ಹಾಗೆಯೇ . ಒಳ್ಳೆಯ ಸಾಹಿತ್ಯ ಮನುಷ್ಯನಿಗೆ ಪ್ರಕೃತಿ ದತ್ತವಲ್ಲದ ದಾರ್ಶನಿಕ ಮನಸು ಕೊಡುವುದರಿಂದ ಇಂತಹ ಕಷ್ಟಗಳ  ತೀವ್ರತೆ ಸಾಪೇಕ್ಷವಾಗಿ ಕಡಿಮೆ ಆಗುವುದು .ಸಂಗೀತ ಕಲೆ ಕೂಡಾ ಹಾಗೆಯೆ . 

 ಹಳೆಯ ಮಲಯಾಳಂ ಸಿನೆಮಾ' ಸರ್ಗಮ್ ' ನಲ್ಲಿ  ಕವಿ ಯೂಸುಫ್ ಅಲಿ ಕೆಚೇರಿ ಬರೆದ ಸಂಗೀತಮೇ ಅಮರ ಸಲ್ಲಾಪಮೆ ಎಂಬ  ಪ್ರಸಿದ್ಧ ಹಾಡು ಇದೆ . ಇದರ ಲ್ಲಿ  ವೇದನೆಯನ್ನು ಕೂಡಾ ವೇದಾಂತವನ್ನಾಗಿಸುವ ನಾದಾ ನುಸಂಧಾನ ಕೈವಲ್ಯವೇ ಸಂಗೀತ ಎಂದು ಕವಿ ವರ್ಣಿಸುತ್ತಾನೆ .ಅದೇ ಶಕ್ತಿ ಸಾಹಿತ್ಯ ಮತ್ತು ಕಲೆಗೂ ಇದೆ ಎಂಬುದು ಬಲ್ಲವರ ಅನುಭವ .

 https://youtu.be/nh1D6PFl8pI
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ