ಬೆಂಬಲಿಗರು

ಭಾನುವಾರ, ಅಕ್ಟೋಬರ್ 24, 2021

ಗುರುವಿನ ಗುಲಾಮ ನಾಗುವ ತನಕ

                      ಗುರುವಿನ ಗುಲಾಮ ನಾಗುವ ತನಕ 

ಹಿಂದೆ  ಬಹಳ ಅಧ್ಯಾಪಕರು ಪ್ರಾಧ್ಯಾಪಕರು ಎಲ್ಲಾ  ಬಲ್ಲವರು ಆಗಿದ್ದರು . ಅವರು ಹೇಳಿದ್ದನ್ನು ಪ್ರಶ್ನಿಸಿದರೆ ಸಹಿಸರು . ತಮಗೆ ತಿಳಿದಿಲ್ಲ ಎಂದು ಅವರ ಬಾಯಿಯಲ್ಲಿ ಬರುವುದು ಅಪರೂಪ . ಯಾವುದೇ ವಿಷಯದಲ್ಲಿ  ಹಲವು ಅಭಿಪ್ರಾಯ ಇದ್ದರೆ ಅವರು ಹೇಳಿದ್ದೇ ಅಂತಿಮ . 

ವೈದ್ಯಕೀಯ ಕಾಲೇಜು ಗಳಲ್ಲಿ ಇದು ಸಾಮಾನ್ಯವಾಗಿತ್ತು . ಪ್ರಾಧ್ಯಾಪಕರಿಗೆ ಅಂಜಿ ನಡೆಯ ಬೇಕಿತ್ತು .ಅವರ ಅವಕೃಪಗೆ ಒಳಗಾದರೆ ನೀವು ಪರೀಕ್ಷೆಯಲ್ಲಿ ಎಷ್ಟು ಒಳ್ಳೆಯದು ಮಾಡಿದರೂ ಉತ್ತೀರ್ಣ ಆಗುವುದಿಲ್ಲ . ವೈವಾ ಮತ್ತು ಪ್ರಾಕ್ಟಿಕಲ್ಸ್ ನಲ್ಲಿ  ಪರೀಕ್ಷಕರ ಜತೆ ಚರ್ಚೆಗೆ ಇಳಿಯುವುದು ಗಂಡಾಂತರ ಮೈ ಮೇಲೆ ಎಳೆದು ಕೊಂಡಂತೆ . 

ಜಸ್ಪಾಲ್ ಭಟ್ಟಿ ಅವರ ಧಾರವಾಹಿ ಹಿಂದೆ ದೂರ ದರ್ಶನ ದಲ್ಲಿ ಜನಪ್ರಿಯ ವಾಗಿತ್ತು .ಅದರಲ್ಲಿ ಪ್ರೊಫೆಸ್ಸರ್ ತನ್ನ ಮಾರ್ಗ ದರ್ಶನ ದಲ್ಲಿ  ಪಿ ಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಯ ಶೋಷಣೆ ಮಾಡುವುದನ್ನು ಚೆನ್ನಾಗಿ ಚಿತ್ರಿಸಿದ ನೆನಪು . ವಿದ್ಯಾರ್ಥಿ ತನ್ನ ಸಂಶೋಧನಾ ಕಾರ್ಯ ಬದಿಗಿಟ್ಟು ಪ್ರಾಧ್ಯಾಪಕರು ,ಅವರ ಕುಟುಂಬದವರ ಸೇವೆ ಮಾಡಿದರೆ ಮಾತ್ರ ಪಾಸ್ . ಅವರ ಮನೆ ಸಾಮಾನು ತರುವುದು ,ನಾಯಿಯನ್ನು  ವಾಕಿಂಗ್ ಕರೆದು ಕೊಂಡು ಹೋಗುವುದು ಇತ್ಯಾದಿ . 

 ಇತ್ತೀಚೆಗೆ ವಾತಾವರಣ ಸ್ವಲ್ಪ ಬದಲಾಗಿದೆ ; ಆದರೂ   (ನನ್ನನ್ನೂ ಸೇರಿ )ನಮ್ಮಲ್ಲಿ  ಯಾರಾದರೂ ಕಿರಿಯರು ಪ್ರಶ್ನೆ ಕೇಳಿದರೆ ನನಗೆ ತಿಳಿಯದು ಎಂದು ಒಪ್ಪಿ ಕೊಳ್ಳುವ ಪ್ರಾಜ್ಞರು ಕಡಿಮೆಯೇ ಎಂದು ಹೇಳ ಬೇಕು . 

 https://youtu.be/JCy9BfqMw2c

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ