ಬೆಂಬಲಿಗರು

ಗುರುವಾರ, ಜೂನ್ 3, 2021

ಮಲೇರಿಯಾ ಜೀವನ ಚರಿತ್ರೆ

   ಮಲೇರಿಯಾ ಜೀವನ ಚಕ್ರ ಅಥವಾ ಚರಿತ್ರೆ 


ಪ್ರಕೃತಿಯ ಸೃಷ್ಟಿ ಬಹು ವಿಚಿತ್ರ . ಮನುಷ್ಯ ನ ದೇಹದಲ್ಲಿ ಸಂಕೀರ್ಣವಾದ   ರೋಗ ನಿರೋಧಕ  ವ್ಯವಸ್ಥೆ ಇಟ್ಟಿದೆ  .ಅದೇ ಸಮಯ ಅವನನ್ನು ಹಣಿಯಲು ಬೇಕಾದ ಪ್ರಬಲ ಆಯುಧ ಗಳು ಉಳ್ಳ ರೋಗಾಣುಗಳನ್ನೂ . 

ಉದಾಹರಣೆಗೆ ಇಂದು ನಾವು ಮಲೇರಿಯಾ ಕಾಯಿಲೆಯನ್ನು ಪರಿಗಣಿಸುವ . ಹಿಂದೆ ನಾವು ಕೊಕ್ಕೆ ಹುಳದ ಬಗ್ಗೆ  ತಿಳಿದಿದ್ದೇವೆ . ಅದು ಏಕ ಪ್ರಾಣಿ ವೃತಸ್ತ  . ಮನುಷ್ಯ ಓರ್ವ ಇದ್ದರೆ ಸಾಕು ಅದರ ಬಾಲ್ಯ ,ಯೌವನ ,ಸಂತಾನೋತ್ಪತ್ತಿ  ನಮ್ಮೊಳಗೇ ನಡೆದು ಮುಗಿಯುವುದು .ಅದರ ಮೊಟ್ಟೆ ಮಣ್ಣಿನಲ್ಲಿ ಸ್ವಲ್ಪಕಾಲ ಬೆಳೆದು ಬೆಳವಣಿಗೆ ಕಂಡು ಮತ್ತೆ ಮನುಷ್ಯನ ಶರೀರ ಸೇರಿ .ಪುನರಪಿ ಜನನಂ ಪುನರಪಿ ಮರಣಂ ಪುನರಪಿ ನರನ ಜಠರೇ (ಕರುಳೇ )ಶಯನಂ . 

ಆದರೆ ಮಲೇರಿಯಾ ಜೀವನ ಚರಿತ್ರೆ ಹಾಗಲ್ಲ ; ಇನ್ನೂ ರೋಚಕ .. 

ಈ ಪರೋಪಜೀವಿ ಗೆ  ಎರಡು ಆತಿಥೇಯರು ಬೇಕೇ ಬೇಕು . ಒಂದು ನಿರ್ಣಾಯಕ -ಹೆಣ್ಣು ಅನೋಫಿಲಿಸ್ ಸೊಳ್ಳೆ ಮತ್ತೊಂದು ಮಧ್ಯವರ್ತಿ -ಮನುಷ್ಯ . ಗಂಡು ಸೊಳ್ಳೆ ಅಹಿಂಸಾ ವಾದಿ ,ನಮ್ಮ ಸುದ್ದಿಗೆ ಬರದು ,ಸಾಧು .ಸಸ್ಯಾಹಾರಿ .ಹೆಣ್ಣು ಸೊಳ್ಳೆ ರಕ್ತ ಪಿಪಾಸು , ಅದರ ರೆಕ್ಕೆಯ ಚಲನೆ ಉಚಿತವಾದ ಸಂಗೀತ ಉಂಟು ಮಾಡುವುದು . ನಮ್ಮನ್ನು ಕಚ್ಚಿದಾಗ ಅದರ ಲಾಲಾರಸದಲ್ಲಿ  ಇರುವ ರಾಸಾಯನಿಕಗಳು ರಕ್ತ ಕೂಡಲೇ ಹೆಪ್ಪುಗಟ್ಟದಂತೆ ಮಾಡಿ ಹೆಚ್ಚು ರಕ್ತ ಅದಕ್ಕೆ ಸಿಗುವಂತೆ ಮಾಡುವವು . ಬದಲಿಗೆ ಸೊಳ್ಳೆಯ ಬಾಯಿಯ ಮೂಲಕ ಮಲೇರಿಯಾ ರೋಗಾಣು  ಪ್ಲಾಸ್ಮೋಡಿಯಂ ನಮ್ಮ ಶರೀರ ಸೇರುವುದು ;ಕಡಿತದ ವ್ಯಾಪಾರ . ಸೊಳ್ಳೆಯನ್ನು  ಮಲೇರಿಯ ಕಾಡುವುದಿಲ್ಲ 

  ಸೊಳ್ಳೆ ಮಲೇರಿಯ ರೋಗಾಣುವಿನ ನಿರ್ಣಾಯಕ ಅತಿಥೇಯ ಎಂದೆವಲ್ಲ .ಅದರ ಅರ್ಥ ಅದರ ವೈವಾಹಿಕ ಜೀವನ ಮತ್ತು ಸಂತಾನೋತ್ಪತ್ತಿ ಹೆಣ್ಣು ಅನೋಫಿಲಿಸ್ ಸೊಳ್ಳೆಯ ಒಳಗೇ ನಡೆಯುವದು . ಸ್ವಲ್ಪ ಬೆಳೆದ ಮರಿಗಳು ಮನುಷ್ಯನ ಶರೀರ ರಕ್ತದ ಮೂಲಕ ಸೇರಿ ,ಅದರ ಬ್ರಹ್ಮಚಾರಿ ಜೀವನ ಅಲ್ಲಿ ನಡೆಯುವದು . ಮೊದಲು ಲಿವರ್ ಸೇರಿ ಅಲ್ಲಿ ಕೆಲವು ಹಂತದ ಬೆಳವಣಿಗೆ ,ಆಮೇಲೆ  ಎಳೆಯ ಕೆಂಪು ರಕ್ತ ಕಣಗಳ ಮೇಲೆ ಧಾಳಿ ,ಅಲ್ಲಿ ಅತಿಥಿಯಾಗಿ ಸೇವೆ ಸಲ್ಲಿಸಿ ಬೆಳವಣಿಗೆ ಹೊಂದಿ ಪುರಾಣದ ವಾತಾಪಿಯಂತೆ  ಅತಿಥೇಯನ (ಅಂದರೆ ಕೆಂಪು ರಕ್ತ ಕಣಗಳ )ಶರೀರ ಛೇದಿಸಿ ಹೊರ ಬರುವವು .ಕೆಲವು ಪುನಃ ಲಿವರ್ ಯಾತ್ರೆ ಕೈಗೊಂಡರೆ ಮತ್ತೆ ಹಲವು ಪುನಃ ಕೆಂಪು ರಕ್ತ ಕಣ ಸೇರಿ ಕಾರ್ಯಕ್ರಮ ಮುಂದು ವರಿಸುವವು .  ರೋಗಾಣು ಮತ್ತು ನಶಿಸುತ್ತಿರುವ ರಕ್ತ ಕಣಗಳಿಂದ ಉಂಟಾದ ವಸ್ತುಗಳು ಜ್ವರ ಕಾರಕಗಳು .ಈ ತರಹ ಉಂಟಾದ ಮರಿಗಳು ಬೆಳೆದು ಕೆಲವು ಗಂಡು ಮತ್ತು ಕೆಲವು ಹೆಣ್ಣು ಆಗಿ ,ಸೊಳ್ಳೆಯ ಕಡಿತಕ್ಕೆ ಕಾದು ,ಮುಂದೆ ಅದರ ಶರೀರದಲ್ಲಿ ವಿವಾಹ ,ಮಧುಚಂದ್ರ ಮತ್ತು ಸಂತಾನೋತ್ಪತ್ತಿ ನಡೆಸುವವು . ಮುಂದಿನ ಹಂತದ ಜೀವನ ಮನುಷ್ಯ ಶರೀರದಲ್ಲಿ

   ನಮ್ಮ ಊರಿನಲ್ಲಿ ವೈ ವಾಕ್ಸ್ ಮತ್ತು ಫಾಲ್ಸಿಫಾರಂ ಎಂಬ ಎರಡು ತರಹದ ಮಲೇರಿಯ ಕಾಯಿಲೆ ರೋಗಾಣುಗಳು ಕಾಡುತ್ತಿವೆ ,ಇದರಲ್ಲಿ  ಫಾಲ್ಸಿಫಾರಂ ಸ್ವಲ್ಪ ಅಪಾಯಕಾರಿ .ಅದು ಮೆದುಳು ,ಮೂತ್ರಪಿಂಡ ಇತ್ಯಾದಿಗಳಿಗೆ ಹಾನಿ ಮಾಡುವದು ಹೆಚ್ಚು . ಮಲೇರಿಯ ಲಿವರನ್ನು ಕಾಡುವುದರಿಂದ ಮತ್ತು ಕೆಂಪು ರಕ್ತಕಣಗಳನ್ನು ನಾಶ ಮಾಡುವದುದರಿಂದ ಮಲೇರಿಯಾ ದಲ್ಲಿ ಹಳದಿ ಕಾಮಾಲೆ ಬರ ಬಹುದು .ಇದನ್ನು ಕಾಮಾಲೆ ರೋಗ ಹಳ್ಳಿ ಮದ್ದು ಮಾಡುವೆವು ಎಂದು ಕುಳಿತರೆ ಪ್ರಾಣಾಪಾಯ ಆದೀತು . 

   ನೋಡಿ ಪ್ರಕೃತಿಯ ವಿಚಿತ್ರ ಆಟ .ನಾವು ಬಾರಿಯ ದಾಳದ ಪಗಡೆಯಾಳುಗಳು . 


EID_lec17_slide8-largehttps://youtu.be/A2-XTlHBf_4

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ