ಬೆಂಬಲಿಗರು

ಬುಧವಾರ, ಫೆಬ್ರವರಿ 8, 2017

ವಾಲಿ ಸುಗ್ರೀವ ಕಾಳಗ ಮತ್ತು ಕ್ಯಾನ್ಸರ್ ಚಿಕಿತ್ಸೆ

ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಬರುತ್ತದೆ .ಸೀತಾನ್ವೇಶಿ ರಾಮ ಲಕ್ಸ್ಮಣ 

ರಿಗೆ  ಕಿಷ್ಕಿಂಧೆಯಲ್ಲಿ ಸುಗ್ರೀವ ನ ಪರಿಚಯ ಆಗುತ್ತದೆ .ಅಣ್ಣ ವಾಲಿ 

ಬಲಾತ್ಕಾರವಾಗಿ ತನ್ನನ್ನು ರಾಜ್ಯಬಾಹಿರ ಮಾಡಿದ ವಿಚಾರ ರಾಮನಿಗೆ ತಿಳಿಸಿ 

ತನ್ನ  ಸಹಾಯಕ್ಕೆ ಬರುವಂತೆ ಇದಕ್ಕೆ ಪ್ರತಿಯಾಗಿ ಸೀತೆಯನ್ನು ಹುಡುಕುವ 

ಕಾರ್ಯದಲ್ಲಿ  ತಾನೂ ತನ್ನ ಸಹಚರ ಕಪಿಗಳು  ಸಹಕರಿಸುವುದಾಗಿ ಒಪ್ಪಂದ 

 ಸುಗ್ರೀವ  ಮಾಡಿಕೊಂಡನು.ಅದರ ಪ್ರಕಾರ  ಸುಗ್ರೀವ ಕಾಲು ಕೆರೆದು ಅಣ್ಣನನ್ನು 

ಯುದ್ದಕ್ಕೆ ಕರೆಯುತ್ತಾನೆ .ರಾಮ ಮರೆಯಲ್ಲಿ ನಿಂತು  ವಾಲಿ ಮೇಲೆ  ಬಾಣ 

ಪ್ರಯೋಗ ಮಾಡಬೇಕೆನ್ನುವಾಗ  ಅಣ್ಣ ತಮ್ಮಂದಿರು ಒಂದೇ ತರಹ ಇದ್ದಾರೆ .

ಇದರಲ್ಲಿ ಯಾರು ವಾಲಿ ಯಾರು ಸುಗ್ರೀವ ಎಂದು ಸಂಶಯದಿಂದ ಎಂದು 

ಸುಮ್ಮನಿದ್ದು ಸುಗ್ರೀವ ಪೆಟ್ಟು ತಿಂದು ಕೋಪದಿಂದ ಹಿಂದೆ ಬರುತ್ತಾನೆ .ಅದಕ್ಕೆ 

ಉಪಾಯವಾಗಿ  ಇನ್ನೊಂದು ಸಾರಿ ಯುದ್ದಕ್ಕೆ ಹೋಗುವಾಗ  ಸುಗ್ರೀವನ ಕೊರಳಿಗೆ 

ತುಳಸಿ ಮಾಲೆ ಹಾಕಿ ಕಳುಹಿಸುವನು .ಈ ಬಾರಿ  ಮಾಲಾರಹಿತ ವಾಲಿ 

ರಾಮಬಾಣಕ್ಕೆ ಗುರಿಯಾಗುವನು .

               ಕ್ಯಾನ್ಸರ್ ರೋಗಕ್ಕೆ  ಉಪಯೋಗಿಸುವ ಔಷಧಿಗಳಿಗೂ ಇದೇ ಸಮಸ್ಯೆ .

ಯಾವುದು ಅರ್ಭುಧ ರೋಗ ಪೀಡಿತ ಜೀವಕೋಶ ,ಯಾವುದು ಆರೋಗ್ಯವಂತ 

ಕೋಶ ಎಂಬ ಜಿಜ್ಞಾಸೆ ಕನ್ಫ್ಯೂಷನ್ .ಅದಕ್ಕೆ ಈಗ ವೈಜ್ಞಾನಿಕವಾಗಿ ಈ 

ಜೀವಕೋಶಗಳಿಗೆ ಗುರುತಿನ  ಮಾರ್ಕರ್ ಗಳನ್ನು ಕೊಟ್ಟು ಅದಕ್ಕೆ ಅನುಗುಣ

ವಾದ ಔಷಧಿ ಗಳನ್ನು ಸಿದ್ದ್ದ ಪಡಿಸಿದ್ದಾರೆ .ಇವನ್ನು ಮಾನೋಕ್ಲೋನಲ್ ಆಂಟಿ

ಬಾಡಿಸ್ (ಪ್ರತಿವಿಷ)ಎನ್ನುವರು .ಹಲವು ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ 

ಇವು ಕ್ರಾಂತಿಯನ್ನೇ ಉಂಟು ಮಾಡಿವೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ