ಬೆಂಬಲಿಗರು

ಸೋಮವಾರ, ಫೆಬ್ರವರಿ 6, 2017

ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್

ನೃಪತುಂಗನು ಕನ್ನಡಿಗರ ಹಿರಿಮೆಯ ಕುರಿತು ಬರೆದ ಪ್ರಸಿದ್ದ  ವಾಕ್ಯ .ಯಾವುದೇ ವಿಷಯದಲ್ಲಿ ಹೆಚ್ಚು ಓದಿಕೊಳ್ಳುವ  ಅವಶ್ಯ

ಇಲ್ಲದೆ  ಕಾವ್ಯ ರಚನೆ  ಮಾಡಲು  ಬೇಕಾದ  ಜ್ಞಾನ ಭಂಡಾರ ಇವರಲ್ಲಿ ಇತ್ತು ಎಂಬುದು ಭಾವಾರ್ಥ .ಕುಮಾರ ವ್ಯಾಸ

ನಂತೂ ಹಲಗೆ ಬಳಪವ ಹಿಡಿಯದೆ ಉಪಯೋಗಿಸಿದ ಪದವನ್ನು ಪುನಃ ಬಳಸದೆ  ಕಾವ್ಯ ರಚನೆ ಮಾಡಿದೆನೆಂದು ಹೆಮ್ಮೆ

ಪಡುತ್ತಾನೆ .

ಆದರೆ  ಈಗೀಗ  ಕನ್ನಡಿಗರು  ನೃಪತುಂಗನ  ಮಾತಿನ ಶಬ್ದಾರ್ಥ ಕ್ಕೆ  ಅನುಗುಣವಾಗಿ ನಡೆದು ಕೊಳ್ಳುತ್ತಿರುವ ಸಂದೇಹ

ಬರುತ್ತಿದೆ .ಯಾವುದೇ ವಿಷಯ ಇರಲಿ  ದೃಶ್ಯ ಮತ್ತು ಮುದ್ರಣ ಮಾಧ್ಯಮ ,ಸಭೆ ಸಮಾರಂಭ ಇರಲಿ  ಕುರಿತೋದದೆಯೇ

ಮಾತನಾಡುವ ಇಲ್ಲವೇ ಬರೆಯುವವರ  ಸಂಖ್ಯೆ  ಹೆಚ್ಚುತ್ತಿದೆ .ಓದದೆಯೇ ಡಿಗ್ರಿ  (ಎಂ ಬಿ ಬಿ ಎಸ ಸೇರಿ ),ಡಾಕ್ಟರೇಟ್


ಪಡೆವರ್.ಸಕಲ ಬಲ್ಲವರೂ ಎಲ್ಲಾ ಸಭೆಗಲ್ಲಿ  ಇರಲೇ ಬೇಕಾದ  ಸರ್ವಾಂತರ್ಯಾಮಿ ಜನ ಪ್ರತಿನಿಧಿಗಳು

ಯಾವುದೇ ವಿಷಯದ ಬಗ್ಗೆ  ಪೂರ್ವ ತಯಾರಿ ಇಲ್ಲದೆ  ಮಾತನಾಡ ಬಲ್ಲರು .

                                               ಇದಕ್ಕೆ  ಕೆಲವು ಅಪವಾದ ಇವೆ .ಕೆಲವು ವರ್ಷಗಳ ಹಿಂದೆ ಮಂಜೇಶ್ವರ ಗೋವಿಂದ ಪೈ

ಗಳ  ಸ್ಮಾರಕ  ಗಿಳಿವಿಂಡು  ವಿಗೆ  ಅಡಿಗಲ್ಲು  ಹಾಕುವ  ಕಾರ್ಯಕ್ರಮಕ್ಕೆ  ಹೋಗಿದ್ದೆ .(ಇತ್ತೀಚಿಗೆ ಅದರ ಉದ್ಘಾಟನೆಯೂ

ನಡೆಯಿತು).ಈ  ಸಮಾರಂಭದಲ್ಲಿ  ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು  ಕೇರಳ ರಾಜ್ಯದ  ಆಗಿನ ಶಿಕ್ಷಣ ಸಚಿವ

ಎಂ ಎ  ಬೇಬಿ  ಹಾಜರಿದ್ದರು  .ಇಬ್ಬರೂ  ಗೋವಿಂದ ಪೈಗಳ  ಸಾಹಿತ್ಯದ  ಅಧ್ಯಯನ  ಮಾಡಿ  ಬಂದಿದ್ದರು .ಎಂ ಎ ಬೇಬಿ

 ಪೈ ಸಾಹಿತ್ಯದ ಬಗ್ಗೆ  ಮಲಯಾಳಂ ಬಾಷೆಯಲ್ಲಿ ನೀಡಿದ  ಪಾಂಡಿತ್ಯ ಪೂರ್ಣ ಭಾಷಣ  ಕನ್ನಡಿಗನಾದ ನನಗೇ ಹೊಸ

ಬೆಳಕನ್ನು ನೀಡಿತು .೧೯೭೯ರ  ಧರ್ಮಸ್ಥಳ  ಸಾಹಿತ್ಯ ಸಮ್ಮೇಳನದಲ್ಲಿ  ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಮಾಡಿದ

ಬಾಷಣ  (ಬಹು ಪಾಲು ಅಶು ಭಾಷಣ ) ಪಾಂಡಿತ್ಯ ಪೂರ್ಣ ವಾಗಿತ್ತು .ಈಗಿನ ಜನ ಪ್ರತಿನಿಧಿಗಳಲ್ಲಿ  ವೈ ಎಸ ವಿ ದತ್ತ .

ಎಚ್  ವಿಶ್ವನಾಥ  ಮತ್ತು ಬಿ ಎಲ್ ಶಂಕರ್ ಯಾವುದೇ  ವಿಷಯ  ವನ್ನು  (,ಸಾಹಿತ್ಯವೂ ಸೇರಿ ) ಅಧ್ಯಯನ ಮಾಡಿ

ಮಾತನಾಡುವರು .

ಕುರಿತೋದಯೇ  ಮಾತನಾಡುವುದು ಜನಪ್ರತಿನಿಧಿ ಗಳು  ಮಾತ್ರ ಎಂದು ತಿಳಿಯುವುದು ಬೇಡ.ಪ್ರಾಧ್ಯಾಪಕರು

ವೈದ್ಯರು  ,ವಕೀಲರು ಮತ್ತು  ಮನೆಯಲ್ಲಿ  ಹಿರಿಯರು  ಇದಕ್ಕೆ  ಹೊರತಲ್ಲ .ಮಕ್ಕಳು ಕೇಳಿದ ಪ್ರಶ್ನೆಗಳಿಗೆ  ಉತ್ತರ

ತಿಳಿಯದಿದ್ದಲ್ಲಿ ಓದಿ ತಿಳಿಸುವೆ ಅಥವ  ತಿಳಿದವರನ್ನು   ಕೇಳಿ ತಿಳಿಸುವೆ ಎನ್ನುವ  ವ್ಯವಧಾನ ನಮ್ಮಲ್ಲಿ ಕಮ್ಮಿ  .ತೋಚಿದ

ಉತ್ತರ ನೀಡುವುದೇ ಹೆಚ್ಚು




s

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ