ಬೆಂಬಲಿಗರು

ಭಾನುವಾರ, ಫೆಬ್ರವರಿ 5, 2017

ಹೈ ಕೋರ್ಟ್ ಬೆಂಚ್ ಮತ್ತು ಅಗ್ಗ ಆಂಟಿಬಯೋಟಿಕ್ ಲಭ್ಯತೆ

ಉತ್ತರ ಕರ್ನಾಟಕದಲ್ಲಿ  ಹೈ ಕೋರ್ಟ್ನ ಒಂದು  ಬೆಂಚ್ ಸ್ಥಾಪನೆ ಆಗಬೇಕೆಂದು ಉಗ್ರ ಹೋರಾಟ ನಡೆಯಿತು .ಉತ್ತರ  

ಕರ್ನಾಟಕದಲ್ಲಿ  ಎಷ್ಟೊಂದು ಸಮಸ್ಯೆಗಳಿದ್ದವು .ನೀರಾವರಿ ,ವಿದ್ಯಾ ಸಂಸ್ಥೆಗಳು ಮತ್ತು  ಆಸ್ಪತ್ರೆ ಇವುಗಳಿಗಾಗಿ  ಹೋರಾಟ

ಮೊದಲ  ಆದ್ಯತೆ .ಹೈ ಕೋರ್ಟ್ ಬೆಂಚ್ ಯಾಕೆ ? ಇಲ್ಲಿ ಖಟ್ಲೆಗಳು  ಜಾಸ್ತಿ  ಎಂದೇ ? ಕರಾವಳಿ ಮತ್ತು ಹೈದರಾಬಾದ್

ಕರ್ನಾಟಕದ ಮಂದಿ ಇಲ್ಲಿನ  ಜನರಷ್ಟು  ಕಾನೂನು  ಗಳ  ಸರಿ ವ್ಯಾಖ್ಯಾನ  ಬಯಸುತ್ತಿಲ್ಲವೇ ? ಏನೇ ಇರಲಿ  ನನ್ನ

ಚಿಂತೆ  ಅದಲ್ಲ .ಹೈ ಕೋರ್ಟ್ ಬೆಂಚ್ ನೆರೆಯಲ್ಲಿ  ಬಂದೊಡನೆ  ಮಾತುಕತೆಯಲ್ಲಿ  ಬಗೆಹರಿಸ ಬಹುದಾದ ಅಥವಾ ಹಾಗೆಯೇ

ಅವಗಣಿಸಿ ಬಿಡ ಬಹುದಾದ  ವಿಚಾರಗಳೂ  ಹೈ ಕೋರ್ಟ್ ಗೆ  ಅಪೀಲ್  ಹೋಗುವ ಸಾಧ್ಯತೆಗಳು ಹೆಚ್ಚು .ಇದರಿಂದ ಯಾರಿಗೆ

ಲಾಭ ? ಸಾಹಿತಿ ಚಂಪಾ ಹೇಳುತ್ತಿರುತ್ತಾರೆ ,ನನ್ನ ಧಾರವಾಡ ಮನೆಯ ಬಳಿ ಪೋಲಿಸ್ ಸ್ಟೇಷನ್ .ಇದರಿಂದ ನಮಗೆ ಕಳ್ಳರ

ಭಯವಿರಲಿಲ್ಲ  ಆದರೆ  ಪೋಲಿಸರದೇ ಭಯ  ಎಂದು .ನ್ಯಾಯಾಲಯ ಸಮೀಪ  ಆದಷ್ಟು   ಕಟ್ಲೆಗಳು  ಉದ್ದ  ಎಳೆಯಲ್ಪಡುವ

ಭಯ .


                       ಮೆಡಿಕಲ್ ರೆಪ್ರೆಸೆಂಟೇಟಿವ್ ಬಂದು  ಡಾಕ್ಟ್ರೆ  ನಿಮಗೊಂದು ಸಂತಸದ ಸುದ್ದಿ .ಇದುವರೆಗೆ  ಗಗನ ಕುಸುಮ

ಆಗಿದ್ದ  ನಮ್ಮ  ಈ ಆಂಟಿಬಯೋಟಿಕ್ ಬೆಲೆ  ಈಗ  ಬಹಳ  ಕಮ್ಮಿಯಾಗಿದೆ .ನೀವು  ಇನ್ನು  ಭಯವಿಲ್ಲದೆ  ಬರೆಯಬಹುದು .

ಎಂದು  ಹೇಳಿದಾಗ  ನನಗೆ ಸಂತಸ ಆಗುವುದಿಲ್ಲ . ಯಾಕೆಂದರೆ  ಈಗಾಗಲೇ ಅನಾವಶ್ಯಕ ವಾಗಿ  ಸಾಮಾನ್ಯ ಶೀತ ಜ್ವರ

ಇತ್ಯಾದಿ  ಕಾಯಿಲೆಗಳಿಗೆ  ಇವುಗಳನ್ನು  ಸೇವಿಸಿ  ಬೇಕಾದ ಸಮಯದಲ್ಲಿ  ಪರಿಣಾಮ ಬೀರದಂತೆ ಆಗಿವೆ.ಅಗ್ಗದ

ಆಂಟಿಬಯೋಟಿಕ್ಗಳು ಔಷಧಿ ಅಂಗಡಿಗಳಲ್ಲಿ  ಡಾಕ್ಟರ್ ಅವರ  ಚೀಟಿ ಇಲ್ಲದೆಯೂ ಸಿಗುತ್ತಿವೆ. ಮಗುವಿಗೆ  ಒಂದು ದಿನದ

ವೈರಲ್  ಜ್ವರ ಇದ್ದರೂ ಅಮೊಕ್ಷ್ಯ್ಕಿಲ್ಲಿನ್ , ಸೆಫಿಕ್ಷಿಮ್  ಅಂತಹ ಆಂಟಿಬಯೋಟಿಕ್ ಹೆತ್ತವರು  ಕೊಡುತ್ತಾರೆ .ಇದರಿಂದ

ಮಗುವಿನ   ಧಾರಣಾ ಶಕ್ತಿ  ಇನ್ನೂ ಕುಗ್ಗುವುದು .ಅಲ್ಲದೆ  ಔಷಧಿ ಕ್ರಮೇಣ ತನ್ನ  ಹರಿತ  ಕಳೆದು ಕೊಳ್ಳುವುದು .ಕೆಲವು

ಔಷಧಿಗಳು  ಇನ್ನೂ ಸ್ವಲ್ಪ ತುಟ್ಟಿಯಾಗಿ ಇರುವುದರಿಂದ  ಅವುಗಳನ್ನು  ಉಪಯೋಗಿಸಲು  ಯೋಚಿಸುವರು .ಅವುಗಳೂ

ಅಗ್ಗವಾದರೆ    ದುರುಪಯೋಗ  ಆಗುವ ಸಾಧ್ಯತೆ  ಜಾಸ್ತಿ .ಎಂದು  ಔಷಧಿ  ಅಗ್ಗವಾಗಿದೆ ಎಂದು  ರೆಪ್ರೆಸೆಂಟೇಟಿವ್ ಹೇಳಿದಾಗ

ಅವನು  ನಿರೀಕ್ಷಿಸಿದ   ಸಂತೋಷದ  ಪ್ರತಿಕ್ರಿಯೆ ನನ್ನಿಂದ  ಬರುವುದಿಲ್ಲ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ