ಬೆಂಬಲಿಗರು

ಶನಿವಾರ, ಫೆಬ್ರವರಿ 4, 2017

ಸಂಗೀತ ಮತ್ತು ದೇವರು

ಹಿರಣ್ಯಕಶಿಪು ಪ್ರಹ್ಲಾದನನ್ನು  ತೋರಿಸು ನಿನ್ನ  ದೇವರನು , ಅಲ್ಲಿರುವನೋ ಇಲ್ಲಿರುವನೋ ,ಕಂಬದಲ್ಲಿ ಇರುವನೋ  ಎಂದು

ಕೇಳಿದಾಗ  ಬಾಲಕನ ಮನದಲ್ಲಿ  ಯಾವ  ಉತ್ತರಗಳು ಹೊಳೆದವೋ ತಿಳಿದಿಲ್ಲ .ಆದರೆ ನಮ್ಮ ಜೀವನದಲ್ಲಿ  ಹಲವು ಬಾರಿ

ನಮ್ಮ  ಮನಸಿನಲ್ಲಿ   ಹಿರಣ್ಯಕಶಿಪು ಹಾದು  ಹೋಗುವುದುಂಟು .


     ಮುಂಜಾವು  ,ಹಕ್ಕಿಗಳ ಇಂಚರ ,ಮಂದ ಮಾರುತ ಕೆಲವೊಮ್ಮೆ ನಮಗೆ ದೈವೀ ಶಕ್ತಿಯ ಸಾಕಾರ  ಎಂದೆನಿಸುವುದು .

ಗಾಳಿಯಲ್ಲಿ  ತೇಲಿ ಬರುತ್ತಿರುವ  ಸುಮಧುರ  ಶ್ರುತಿ ಬದ್ಧ  ಸಂಗೀತ  ಹಲವು  ಬಾರಿ  ಭಗವಂತನ  ಸ್ವರೂಪ . .


ತ್ಯಾಗರಾಜರು   ನಾದಾ ತನುಮನಿಸಂ ಶಂಕರಂ ಎಂದಿದ್ದಾರೆ .ಎಂದರೆ ಶಿವನ ತನು ಮನ ಎಲ್ಲಾ ಸಂಗೀತವೆ .ಭಕ್ತಿಯಿಂದ

ಸಂಗೀತವನ್ನು  ಹಾಡಬೇಕು.ಎಂದರೆ ಸಂಗೀತದ ಮೇಲೆ ಭಕ್ತಿ .ಸಂಗೀತ ಜ್ಞಾನಮು  ಭಕ್ತಿ ವಿನಾ ಎಂದಿದ್ದಾರೆ ತ್ಯಾಗರಾಜರು .


ಇಲ್ಲಿ ಭಕ್ತಿಯಿಲ್ಲದೆ  ಡಂಬಾಚಾರ ದ ಸಂಗೀತದಲ್ಲಿ  ದೈವ ಶಕ್ತಿ ಇಲ್ಲಾ ಎಂದು ಅರ್ಥ .ತಾಳ ಮೇಳಗಳಿದ್ದು  ಪ್ರೇಮವಿಲ್ಲದ ಗಾನ

ಕೇಳನೋ ಹರಿ ತಾಳನೋ ಎಂದು ಪುರಂದರದಾಸರು ಹೇಳಿದ್ದಾರೆ.

ತನ್ಮಯತೆ ಮತ್ತು ಭಕ್ತಿ ಕೂಡಿದ ಗಾನ ದೇವರು .


ಅಂತೆಯೇ   ತನ್ಮಯತೆಯಿಂದ  ಮೈಮುರಿದು  ಮಾಡುವ  ಕೆಲಸದಲ್ಲಿಯೂ  ದೇವರು  ಇರುವನು .ಬಸವಣ್ಣ ಕಾಯಕವೇ

ಕೈಲಾಸ  ಎಂದದ್ದೂ  ಇದನ್ನೇ .ದುಡಿಮೆಯಿಲ್ಲದೆ  ಉಂಡು  ಕಂಡ ದೇವರನು  ಗುಡಿಯಲ್ಲಿ  ಹುಡುಕಿದರೆ  ಎಲ್ಲಿ ಸಿಗುವನು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ