ಬೆಂಬಲಿಗರು

ಮಂಗಳವಾರ, ಫೆಬ್ರವರಿ 7, 2017

ನೀರೊಳಗಿರ್ದೂ ಬೆಮರ್ತನ್

ರನ್ನನ ಗದಾ ಯುದ್ದ ಕಾವ್ಯದ ಸಾಲು  ,ಭೀಮನ ಮಾತುಗಳನ್ನು ಕೇಳಿ ದ್ವೈಪಾಯನದ ಸರೋವರದಲ್ಲಿ

ಧುರ್ಯೋಧನ ನೀರೊಳಗಿದ್ದೂ ಬೆವರಿದನು .ಹೆದರಿ ಬೆವ ರಿದನೋ ,ಕೋಪದಿ ಬೆವರಿದನೋ ?ಒಟ್ಟಿನಲ್ಲಿ ಕೌರವನ

ಸಿಂಪೆತೆಟಿಕ್ ನರಮಂಡಲ  ಕ್ರಿಯಾಶೀಲವಾಗುವ ಪರಿಸ್ಥಿತಿ ಉಂಟಾಗಿತ್ತು .


               ನಮ್ಮ ಶರೀರದ  ನರ ವ್ಯವಸ್ಥೆಯಲ್ಲಿ ನಮ್ಮ ನಿಯಂತ್ರಣದಲ್ಲಿ ಇರುವ ನರಗಳು  ಮತ್ತು ಸ್ವಾಯತ್ತ ನರಗಳು ಎಂಬ

ಮುಖ್ಯ ಪ್ರಭೇಧಗಳು .ಅಧೀನ ನರಗಳ ಮೇಲೆ ನಮಗೆ ಹತೋಟಿ ಇದೆ .ಉದಾ ಕೈ ಎತ್ತ ಬೇಕೆಂದು ನಮಗೆ ತೋರಿದಾಗ

ನಾವು ಎತ್ತಬಹುದು .ಆದರೆ  ಸ್ವಾಯತ್ತ ನರಮಂಡಲ ನಮ್ಮ ಅಧೀನ ದಲ್ಲಿ ಇಲ್ಲ .ಸ್ವಾಯತ್ತ ವ್ಯವಸ್ತೆಯಲ್ಲಿ  ಎರಡು ಗುಂಪುಗಳು


ಒಂದು   ಸಿಂಪತೆಟಿಕ್ ಮತ್ತು ಇನ್ನೊಂದು ಪಾರಾಸಿಂಪತೆಟಿಕ್. ಸಿಂಪತೆಟಿಕ್ ವ್ಯವಸ್ತೆಯು  ಜೀವಕ್ಕೆ ಅಪಾಯ ಬಂದಾಗ

ಎದುರಿಸಲು ಅಥವಾ ಓಡಿ ರಕ್ಷಣೆ ಪಡೆಯಲು  ತಯಾರಿ ಮಾಡುವ ವ್ಯವಸ್ತೆ .ಇನ್ನು  ಪಾರಾಸಿಂಪತೆಟಿಕ್ ವಿಶ್ರಾಂತಿ ,ಆಹಾರ

ಸೇವನೆ ,ಪಚನ ಮತ್ತು  ವಂಶ ವೃದ್ದಿ ಕಾರ್ಯದಲ್ಲಿ  ಮುಖ್ಯ ಪಾತ್ರ ನಿರ್ವಹಿಸುವುದು .ಇವೆರಡು ಬೇರೆ ಬೇರೆ ಆದರೂ

ಒಂದಕ್ಕೊಂದು  ಪೂರಕ.

                              ಇನ್ನು ಬೆವರಿಗೆ ಬರೋಣ .ನಮ್ಮ ಶರೀರದಲ್ಲಿ  ಸ್ಥಿರ ಉಷ್ಣತೆ ಕಾಪಾಡಿ ಕೂಂಡು ಬರುವ ವ್ಯವಸ್ತೆ

ಇದೆ .ಬಿಲ್ಟ್ ಇನ್ ಸ್ಟೆಬಿಲೈಸರ್ ತರಹ .ಶರೀರದ ತಾಪ ಹೆಚ್ಚಾದ ಹಾಗೆ ಮೆದುಳಿನ ಹೈಪೋ ತಲಾಮಸ್ ಎಂಬ ಭಾಗ

ಅದನ್ನು ಗ್ರಹಿಸಿ  ಬೆವರ ಗ್ರಂಥಿ ಗಳನ್ನು ಸಿಂಪತೆಟಿಕ್ ನರಗಳ ಮೂಲಕ ಪ್ರಚೋದಿಸಿ  ಹೆಚ್ಚು ಹೆಚ್ಚು  ಬೆವರು

ಉತ್ಪಾದಿಸುವಂತೆ ಮಾಡುತ್ತದೆ .ಬೆವರ ಹನಿ ಆವಿಯಾಗುವ ಪ್ರಕ್ರಿಯೆಯಲ್ಲಿ  ಚರ್ಮದ  ಉಷ್ಣಾಂಶ ಕುಸಿದು ಶರೀರದ

ಶಾಖದ ನಿಯಂತ್ರಣ ಆಗುವುದು .ಭಯದ ,ಉದ್ವೇಗದ ,ಅಪಾಯದ ಸಂಧರ್ಭದಲ್ಲಿ  ಕೂಡ  ಸಿಂಪತೆಟಿಕ್ ನರಗಳು

 ಪ್ರಚೋದನೆ ಗೊಂಡು ಬೆವರುವುದು .ಹೃದಾಯಾಘಾತ,ಸಕ್ಕರೆ ಕಾಯಿಲೆಯವರಲ್ಲಿ  ಸಕ್ಕರೆ ಅಂಶ ತೀವ್ರ ಕುಸಿದರೆ ಕೂಡ

ಬೆವರುವುದು .ಕೆಲವರಿಗೆ  ಮುಖ್ಯವಾಗಿ  ಸಕ್ಕರೆ ಕಾಯಿಲೆ ರೋಗಿಗಳಿಗೆ  ಬೆವರುವಿಕೆ ಮಾತ್ರ ಹೃದಾಯಾಘಾತದ ಲಕ್ಷಣ

ವಾಗಿರುವುದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ