ಬೆಂಬಲಿಗರು

ಶನಿವಾರ, ಮೇ 2, 2015

ವರ ರೂಪದ ಶಾಪ


This is the excellent foppery of the world, that,
when we are sick in fortune,--often the surfeit
of our own behavior,--we make guilty of our
disasters the sun, the moon, and the stars: as
if we were villains by necessity; fools by
heavenly compulsion; knaves, thieves, and
treachers, by spherical predominance; drunkards,
liars, and adulterers, by an enforced obedience of
planetary influence; and all that we are evil in,
by a divine thrusting on: an admirable evasion
of whoremaster man, to lay his goatish
disposition to the charge of a star.”
William Shakespeare, King Lear


“When we are born, we cry that we are come to this great stage of fools.”
ರಾಮಪ್ಪನದು ಸಂತೃಪ್ತ ಕುಟುಂಬ .ಹೆಂಡತಿ ಮೂರು ಮಕ್ಕಳು .ಭೂ ಸುಧಾರಣೆ 

ಕಾನೂನಿನಡಿ ಸಿಕ್ಕಿದ ಮೂರು ಎಕರೆ ಭೂಮಿ .ಸ್ವಯಂ ದುಡಿದು ಸಂತೋಷದಿಂದ

ಕಾಲಾಪನೆ ಆಗುತ್ತಿತ್ತು.ಅಷ್ಟರಲ್ಲಿ  ಅವನ ಜಮೀನಿನ ಬಳಿ ಹೊಸ ಮಾರುಕಟ್ಟೆಗೆ 

ಹೋಗುವ  ಹೊಸ ರಸ್ತೆ ನಿರ್ಮಾಣದ ಯೋಜನೆ ಬಂದು ರಸ್ತೆಗಾಗಿ ವಶ ಪಡಿಸಿ 

ಕೊಂಡ  ಭೂಮಿಗೆ ಸರಕಾರದಿಂದ  ಭಾರೀ ಪರಿಹಾರ ಸಿಕ್ಕಿತು .ತನಗಿಂತ 

ಅದೃಷ್ಟ ಶಾಲಿ ಯಾರೂ ಇಲ್ಲ ಎಂದು ಕೊಂಡ.ರಸ್ತೆಯ ಯೋಜನೆಗಿಂತ ದೂರ 

ಇದ್ದ ಅವನ ತಮ್ಮಂದಿರು  ಇವನ ಭಾಗ್ಯ ಕಂಡು ಕೈ ಕೈ ಹಿಸುಕಿಕೊಂಡರು.

ಸರಕಾರದಿಂದ ಬಂದ ಹಣದಿಂದ  ರಸ್ತೆ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ 

ಬಾಡಿಗೆಗೆ ಕೊಟ್ಟ .ತಾನು ಶ್ರೀಮಂತ ನಾದುದರಿಂದ  ಮಕ್ಕಳಿಗೆ  ದೊಡ್ಡವರ 

ಮನೆಯ ಹೆಣ್ಣು ಮಕ್ಕಳನ್ನೇ ತಂದ . ಅರೋಗ್ಯ ಸರಿ ಇರುವಾಗಲೇ ಮಕ್ಕಳಿಗೆ 

ಅಸ್ತಿ ಹಂಚಿ ಕೊಟ್ಟು  ತಾನು ಎಷ್ಟು ಅದೃಷ್ಟ ವಂತ ಇನ್ನು  ಸುಖಿ ವಿಶ್ರಾಂತ ಜೀವನ 

ಎಂದು ಕೊಳ್ಳುವಷ್ಟರಲ್ಲಿ ರೋಗ ಗ್ರಸ್ತ ನಾಗಿ ಹಾಸಿಗೆ ಹಿಡಿದ . ಅದು ವರೆಗೆ 

ಚೆನ್ನಾಗಿ ನೋಡಿ ಕೊಳ್ಳುತ್ತಿದ್ದ ಮಕ್ಕಳು ಉಪೇಕ್ಷೆ ಮಾಡ ತೊಡಗಿದರು .ದೊಡ್ಡ 

ಶ್ರೀಮಂತ ಕುಟುಂಬದಿಂದ ಬಂದ ಸೊಸೆಯರು ತಮಗೆ ನೋಡಿ ಕೊಳ್ಳಲು  ಆಗದು 

 ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಗಂಡಂದಿರಿಗೆ ದುಂಬಾಲು ಬಿದ್ದರು .ಸರಿ ಮನೆ 

ಹಿಂಸೆ ಯ ತಾಣ ಆಯಿತು .ಇವರ ಸ್ಥಿತಿ ತಿಳಿದ  ತಮ್ಮ ಬಂದು ತನ್ನ ಗುಡಿಸಲಿಗೆ 

ಕರೆದು ಕೊಂಡು ಹೋಗಿ ಉಪಚಾರ ಮಾಡಿದ . ರಾಮಪ್ಪ ಈಗ ಯೋಚಿಸುತ್ತಿದ್ದಾನೆ 

ಯಾವುದು ಅದೃಷ್ಟ ? ಯಾವುದು ಭಾಗ್ಯ ?

(ನೈಜ ಸಂಗತಿ ಆಧಾರಿತ )

1 ಕಾಮೆಂಟ್‌: