ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 30, 2022

ಒಂದು ಹಾಡಿನ ನೆನಪು

ಹಿಂದೊಮ್ಮೆ ಮಲಯಾಳಂ ಚಿತ್ರ ಗೀತೆ ಕಾವ್ಯ ಪುಸ್ತಕಮಲ್ಲೋ ಜೀವಿತಮ್ ಎಂಬ ನನ್ನ ಇಷ್ಟದ ಹಾಡು ನಿಮ್ಮೊಡನೆ ಹಂಚಿ ಕೊಂಡಿದ್ದೆ . ಇದರ ಭಾವಾರ್ಥ 

ಜೀವನ ಒಂದು ಕಾವ್ಯ ಪುಸ್ತಕ ,ಇದರಲ್ಲಿ ಲೆಕ್ಕ ಬರೆಯಲು ಹಾಳೆಗಳು ಇಲ್ಲ ,ಇದರ ಒಂದೊಂದು ರಸನಿಮಿಷ ಆಸ್ವಾದಿಸಬೇಕು , ಮೂರ್ಖರು ಮಾತ್ರ ಇದರಲ್ಲಿ ಕೂಡಿ ಕಳೆಯುವ ಲೆಕ್ಕ ಬರೆಯುವರು . ಜೀವವೆಂಬ ಬೆಳಕಿನಲ್ಲಿ ಇದರ ರಸಾಸ್ವಾದ ಮಾಡಬೇಕು ,ಒಮ್ಮೆ ಆ ಬೆಳಕು ಆರಿದರೆ ಎಲ್ಲಾ ಶೂನ್ಯ ಅಂಧಕಾರ .

ಇಂದು ಜಿ ಎಸ್ ಶಿವರುದ್ರಪ್ಪ ಅವರ ಹಣತೆ ಕವಿತೆ ಮತ್ತೆ ಓದುವಾಗ ಯಾಕೋ ಈ ಗೀತೆ ಮತ್ತೆ ನೆನಪಾಯಿತು .ಅದರ ಸಾಲುಗಳು ಹೀಗೆ ಇವೆ .

 

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ