ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 14, 2022

ಮಾನವೀಯ ಕಳಕಳಿಯ ಮುತ್ಸದ್ಧಿ ವೈದ್ಯ

 

  ಆದರ್ಶ ವೈದ್ಯ ,ಅಧ್ಯಾಪಕನಾಗಿ  , ಮಾನವೀಯತೆ ಮತ್ತು ಸರಳತೆ  ಮೂರ್ತಿವೆತ್ತಂತಹ ವ್ಯಕ್ತಿತ್ವ  ಹೊಂದಿರುವ ಅಪರೂಪದ ಒಬ್ಬರು  ಡಾ ಚಕ್ರಪಾಣಿ . ಇವರ ವೈದ್ಯಕೀಯ ಜ್ಞಾನ ಭಂಡಾರ ಬಲು ದೊಡ್ಡ . ಚಿಕಿತ್ಸಾ ವಿಧಾನ ವೈಜ್ಞಾನಿಕ ಮತ್ತು  ನೀತಿ ಮೌಲ್ಯಗಳಿಗೆ ಬದ್ಧ . 

ಹಲವು ದಶಕಗಳಿಂದ ಮಂಗಳೂರು ಕೆ ಎಂ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲಿರುವ ಇವರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು .. ರೋಗಿಗಳಿಗೆ ಇವರ ಅಭಿಪ್ರಾಯ ವೇದ ವಾಕ್ಯ ಮತ್ತು ಇವರ ಸಾಂತ್ವನ  ಚೇತೋಹಾರಿ . 

ಡಾ ಚಕ್ರಪಾಣಿ ಅವರ ತಂದೆ ಡಾ ಮಹಾಬಲ ಭಟ್ ಅವರು ಸರಕಾರಿ ಸೇವೆಯಲ್ಲಿ ಇದ್ದು  ಜನಪ್ರಿಯ ವೈದ್ಯರಾಗಿದ್ದವರು ನಿವೃತ್ತಿ ನಂತರ ಹಲ ವರ್ಷ ಮಂಗಳೂರು  ಪಂಪ್ ವೆಲ್ ಬಳಿ ಕ್ಲಿನಿಕ್ ನಡೆಸುತಿದ್ದರು . 

ಡಾ ಚಕ್ರಪಾಣಿ ಖ್ಯಾತ ವೇಣು ವಾದಕ ದಿ   ಏನ್ ಗೋಪಾಲ ಕೃಷ್ಣ ಅಯ್ಯರ್  ಅವರ ಬಳಿ  ಅಧ್ಯಯನ ಮಾಡಿ ಒಳ್ಳೆಯ ವೇಣು ವಾದಕ ಎಂದು ಹೆಸರು ಗಳಿಸಿದವರು .. 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ