ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 7, 2022

ಒಂದು ಅವಲೋಕನ

ಮೊನ್ನೆ ಒಂದು ಕ್ಷೇತ್ರದಲ್ಲಿ ಬಂಧುಗಳ ವೈಕುಂಠ ಸಮಾರಾಧನೆಗೆ ಹೋಗಿದ್ದೆ,ಅಲ್ಲಿ ಎರಡು ಕಟ್ಟಡ ಅಥವಾ ಹಾಲ್ ನಲ್ಲಿ ತಲಾ ಮೂರು ಬೇರೆ ಕಾರ್ಯಕ್ರಮಗಳಿದ್ದು ಜನರು ತುಂಬಿದ್ದರು . ವೈಕುಂಠ ಸಮಾರಾಧನೆ ,ವರ್ಷಾಬ್ದಿಕ ಶ್ರಾರ್ಧ ,ಮತ್ತು ವಾರ್ಷಿಕ ಪುಣ್ಯ ತಿಥಿ ಹೀಗೆ . ಈಗ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟ ಎಂದು ಕ್ಷೇತ್ರಗಳಲ್ಲಿ ಮಾಡುತ್ತಾರೆ . 

ಇಲ್ಲಿ ಒಬ್ಬ ಹಿರಿಯರು ಮಾತನಾಡುತ್ತಾ ಹೇಳಿದರು 'ಇತ್ತೀಚಿಗೆ ಮಂಗಳ ಕಾರ್ಯ ಎಂದು ಕರೆಯಲ್ಪಡುವ ಮದುವೆ ,ಮುಂಜಿ ಇತ್ಯಾದಿಗಳಿಗಿಂತ ಅಪರ ಕ್ರಿಯೆ ಎಂದು ಕರೆಯಲ್ಪಡುವ ಕಾರ್ಯಕ್ರಮಗಳಲ್ಲಿ  ಹಾಜರಾಗುವುದೇ ಹೆಚ್ಚು ಎಂದು ಹೇಳಿದರು .ನನಗೂ ಅದು ಸರಿ ಎಂದು ತೋರುತ್ತಿದೆ . ಕಾರಣ ಊಹೆಗೆ ಬಿಟ್ಟದ್ದು . ಎಲ್ಲಾ ಕಡೆಯಲ್ಲಿ ಕಾಣುವಂತೆ ಇಂತಹ ಕಾರ್ಯಕ್ರಮಗಲ್ಲಿ ಕೂಡಾ ಯುವಕರು ಮತ್ತು ಮಕ್ಕಳ ಹಾಜರಾತಿ ಕಡಿಮೆ . ಹಿರಿಯ ನಾಗರಿಕರೇ ಎಲ್ಲೆಲ್ಲೂ ಕಾಣ ಸಿಗುತ್ತಾರೆ . 

ಹಿರಿಯರು ಇನ್ನೂ ಒಂದು ಮಾತು ಹೇಳಿದರು .ಇಂತಹ ಸಾಮೂಹಿಕ ಆಚರಣೆ ಒಂದು ರೀತಿಯಲ್ಲಿ ಈಕ್ವಾ ಲೈಸರ್ ಅಥವಾ ಸಮಾನತೆ ಉಂಟು ಮಾಡುವಂತಹದು ಎಂದು . ಒಪ್ಪತಕ್ಕದ್ದು .  

ನಮ್ಮ ಪುರೋಹಿತರು ಸ್ವಲ್ಪ ಹಾಸ್ಯ ಪ್ರಕೃತಿ ಯವರು . ಮದುವೆ ,ಪೂಜೆ ಇತ್ಯಾದಿ ಕಾರ್ಯಕ್ರಮ ಗಳಿಗೆ ಹೋಗಲು ಇದ್ದರೆ "ಇಂದು ಒಂದು ಸಿವಿಲ್ ಕೇಸ್ ಇದ್ದು "ಎಂದೂ ಬೊಜ್ಜ ಇತ್ಯಾದಿ ಕಾರ್ಯಕ್ರಮ ಇದ್ದರೆ "ಇಂದು ಒಂದು ಕ್ರಿಮಿನಲ್ ಕೇಸ್ "ಎಂದೂ ಸೂಚ್ಯವಾಗಿ ಹೇಳುತ್ತಿದ್ದರು . ಇದನ್ನು ಅಪಹಾಸ್ಯ ಎಂದು ಭಾವಿಸ ಬಾರದು . ಮೃತ ಪಟ್ಟ ವ್ಯಕ್ತಿಗೆ ಹಲವು ಮಕ್ಕಳು ಇದ್ದರೆ ಇಂತಹ ಕಾರ್ಯಕ್ರಮ ಮುಗಿಯುವಾಗ ಪುರೋಹಿತರು ಸೋತು ಹೈರಾಣಾಗುತ್ತಾರೆ .. ಅಲ್ಲದೆ ಮಂಗಳ ಕಾರ್ಯಕ್ಕೆ ಆದರೂ ಬರಲಾಗುವುದಿಲ್ಲ ಎಂದು ಹೇಳ ಬಹುದು  ಅಪರಕ್ರಿಯೆಗೆ ಆಗುವುದಿಲ್ಲ ಅಂದು ಅನ್ನುವರು . ಯಾರಾದರೂ ಮೃತ ಪಟ್ಟಾಗ ಬಂಧು ಬಾಂಧವರು ಒಟ್ಟು ಸೇರಿ ಅವರ ಕುಟುಂಬದವರಿಗೆ ಸಾಂತ್ವನ ಹೇಳುವುದಲ್ಲದೆ ನಾವೆಲ್ಲಾ ಇದ್ದೇವೆ ಎಂದು ಪ್ರಕಟಿಸುವ ಉದ್ದೇಶ ಈ ಕಾರ್ಯಕ್ರಮಗಳದ್ದು ಎಂದು ಭಾವಿಸಿದ್ದೇನೆ. ಹಿಂದೆ ಮದುವೆ ಮತ್ತು ವೈಕುಂಠ ಸಮಾರಾಧನೆ ಎರಡೂ ಇರಿ ವರ್ಸಿಬಲ್  ಪ್ರಾಸೆಸ್ (irreversible)ಆಗಿದ್ದರೆ ಈಗ ಎರಡನೆಯದ್ದು ಮಾತ್ರ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ