ಬೆಂಬಲಿಗರು

ಬುಧವಾರ, ಜುಲೈ 27, 2022

ಒಂದು ನೆನಪು

                                              



 

 1978 ರಲ್ಲಿ ಶಿವರಾಮ ಕಾರಂತರಿಗೆ ಜ್ನಾನಪೀಠ ಪ್ರಶಸ್ತಿ ಬಂದು ಕನ್ನಡಿಗರಿಗೆಲ್ಲ ಸಂತೋಷ .ನಾನು ಆಗ ಕೆ ಎಂ ಸಿ ಹುಬ್ಬಳ್ಳಿ ಯಲ್ಲಿ ವಿದ್ಯಾರ್ಥಿ .ರಾಜ್ಯದ ಎಲ್ಲಾ ಕಡೆಯಂತೆ ಹುಬ್ಬಳ್ಳಿ ಧಾರವಾಡ ದಲ್ಲಿಯೂ ಕಾರಂತರ ಭಾಷಣ ,ಸನ್ಮಾನ ಕಾರ್ಯಕ್ರಮ ಅದ್ದೂರಿಯಂತೆ ಏರ್ಪಡಿಸಿದ್ದರು . ನಮ್ಮ ಕಾಲೇಜಿನ ಕನ್ನಡ ಸಂಘದ ಪರವಾಗಿ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮಲ್ಲಿ ಬರ ಬಹುದೋ ಎಂದು ಕಾರಂತರಲ್ಲಿ ಕೇಳಿ ಕೊಳ್ಳಲು ,ಎಲ್ಲಾ ಕಾರ್ಯಕ್ರಮ ಕು ಶಿ ಹರಿದಾಸ ಭಟ್ಟರೇ ಏರ್ಪಡಿಸುವುದು ,ಅವರನ್ನು ಸಂಪರ್ಕಿಸುವಂತೆ ಕೇಳಿದರು .ಪ್ರವಾಸ ದುದ್ದಕ್ಕೂ  ಹರಿದಾಸ ಭಟ್ ಕಾರಂತರ ಜತೆಗೆ ಇದ್ದರು .ಸರಿ ,ಅವರನ್ನು ಕಾಣಲು ಲ್ಯಾಮಿಂಗ್ಟನ್ ರಸ್ತೆಯ ಒಂದು ಸಾಮಾನ್ಯ ಹೋಟೆಲ್ ನಲ್ಲಿದ್ದ ಅವರನ್ನು ಕಾಣಲು ಹೋದೆವು .ಅವರು ಅಲ್ಲಿಯೇ ಪಕ್ಕದ ಕೋಣೆಯಲ್ಲಿ ತಂಗಿದ್ದ ಕರ್ನಾಟಕ ಬ್ಯಾಂಕ್ ಛೇರ್ಮನ್  ಶ್ರೀ ಕೆ ಎಸ ಏನ್ ಅಡಿಗರ ಜತೆ ಏನೋ ಗಹನವಾದ ಚಿಂತನೆಯಲ್ಲಿ ಇದ್ದವರು ನಮ್ಮ ಕೋರಿಕೆಯನ್ನು ಈಡೇರಿಸಲು ತಮ್ಮ ಅಶಕ್ತತೆ ವ್ಯಕ್ತ ಪಡಿಸಿದರು . 

ಆದರೆ ನನಗೆ ಆಶ್ಚರ್ಯ ಒಬ್ಬ ಬ್ಯಾಂಕಿನ ಅಧ್ಯಕ್ಷ  ಅಧಿಕೃತ ಕಾರ್ಯ ನಿಮಿತ್ತ ಪರವೂರಿಗೆ ಬಂದಾಗ ಸಾಧಾರಣ ಹೋಟೆಲ್ ನಲ್ಲಿ ಉಳಿದು ಕೊಂಡಿದ್ದು ,ಸುತ್ತ ಮುತ್ತ ವಂದಿ ಮಾಗಧರು ಇಲ್ಲ, ಸರಳ ಖಾದಿ ಉಡುಗೆ . ಅವರಿಗೆ ಬೇಕಿದ್ದಲ್ಲಿ  ಪ್ರವಾಸಿ ಬಂಗ್ಲೆಯೋ ,ವಿಲಾಸಿ ವಸತಿ ಗೃಹಕ್ಕೋ ಹೋಗ ಬಹುದಿತ್ತ್ತು ..ಒಂದು ಕಾಲಕ್ಕೆ ಎಂ ಎಲ್ ಸಿ ಕೂಡಾ ಆಗಿ ಇದ್ದವರು . ಸಾರ್ವಜನಿಕ ಕೆಲಸದಲ್ಲಿ  ಆಡಂಬರ ಕ್ಕೆ ವೆಚ್ಚ ಮಾಡ ಬಾರದು ಎಂಬ ಉದ್ದೇಶ ಇರ ಬೇಕು .  ಅಂತಿದ್ದರು ಅಂದಿನ ನಾಯಕರು .ಸರಳ ಬದುಕು ಹಿರಿಯ ಬಾಳು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ