ಬೆಂಬಲಿಗರು

ಭಾನುವಾರ, ಜುಲೈ 10, 2022

          

                                              

ದಶಕಗಳ ಹಿಂದೆ ನಾನು ಪುತ್ತೂರಿಗೆ ಬಂದು ನೆಲಸಿದ ಕೆಲವು ದಿನಗಳಲ್ಲಿ ಅನಿರೀಕ್ಷಿತವಾಗಿ ಒಂದು ಪೋಸ್ಟ್ ಕಾರ್ಡ್ ;ಜತೆಗೆ ಒಂದು ' ಕಗ್ಗೋಕ್ತಿ ಸಂಪದ 'ಎಂಬ ಒಂದು ಪುಸ್ತಕ ಅಂಚೆಯಲ್ಲಿ ಬಂದಿತು . ಅದು ಹಿರಿಯರಾದ ಕುಲ್ಯಾಡಿ ಮಾಧವ ಪೈ ಅವರದು .ನಾನು ಅವರ ಹೆಸರು ಕೇಳಿದ್ದೆ .ಕಂಡು ಬಲ್ಲವನಲ್ಲ . 

ಪ್ರಸಿದ್ಧ ಜವುಳಿ ವ್ಯಾಪಾರಿ ಕುಲ್ಯಾಡಿಕಾರ್ಸ್ ನಡೆಸುತ್ತಿದ್ದ ಶ್ರೀ ಮಾಧವ ಪೈ ಸಾಹಿತ್ಯ ಪ್ರಿಯರೂ ,ಬರಹಗಾರರೂ ಆಗಿದ್ದು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿದ್ದರು ಎಂಬುದು ಆಮೇಲೆ ಗೊತ್ತಾಯಿತು . ಕಾಂತಾವರ ವರ್ಧಮಾನ ಪೀಠದ ಅಧ್ಯಕ್ಷರೂ ಆಗಿದ್ದರು .  ವಾಣಿಜ್ಯ ಚಟುವಟಿಕೆ ನಡುವೆ ಬಿಡುವು ಮಾಡಿಕೊಂಡು ಕನ್ನಡದ ಕಾಯಕ ನಡೆಸುತ್ತಿದ್ದ ಹಿರಿಯ ಮುತ್ಸದ್ದಿ . 

ಅವರಿಗೆ ಕೃತಜ್ಞತಾ ಪೂರ್ವಕ ಪತ್ರ ಬರೆದೆ .ಅವರನ್ನು ಮುಖತಾ ಕಾಣುವ ಅಸೆ ನೆರವೇರಲಿಲ್ಲ .ಇದಾಗಿ ಆರು ತಿಂಗಳಲ್ಲಿ ಅವರು ತೀರಿ ಕೊಂಡ ವಾರ್ತೆ ಪತ್ರಿಕೆಗಳಲ್ಲಿ ಓದಿದೆ . 

ಇಂದಿಗೂ  ವೈಯುಕ್ತಿಕ ಪರಿಚಯವಿಲ್ಲದ ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೆಕ್ಕಿ ತಮ್ಮ ಕೃತಿಯನ್ನು ಹೇಗೆ ಕಳುಹಿಸಿದರು ?ಎಂದು ನನಗೆ ತಿಳಿದಿಲ್ಲ . ಆದರೆ ಆ ಮಹಾ ಚೇತನಕ್ಕೆ ನೂರು ನೂರು ಶರಣು 

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ