ಬೆಂಬಲಿಗರು

ಶನಿವಾರ, ಜುಲೈ 2, 2022

ಒಂದು ಚಿಂತನೆ

 ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ||
೧||

ಸೋಮೇಶ್ವರ ಶತಕದ ಮೇಲಿನ ಸಾಲುಗಳು ನನಗೆ ಬಹಳ ಇಷ್ಟ . ಅದರಲ್ಲೂ ಬಲ್ಲವರಿಂದ ಕಲ್ತುದು ಬಹಳ . ವೈದ್ಯಕೀಯ ವೃತ್ತಿಯಲ್ಲಿ ವಿದ್ಯಾರ್ಥಿ ಆಗಿದ್ದಾಗ ಅನಾಟಮಿ ,ಫಿಸಿಯೋಲಾಜಿ ಅಟೆಂಡರ್ ಗಳು ಎಷ್ಟೋ ಸಾಮಾನ್ಯ ಜ್ಞಾನದ ವಿಷಯ ಗಳನ್ನು ಅರುಹಿದ್ದರು .ಮುಂದೆ ಕ್ಲಿನಿಕಲ್ ವಿಭಾಗದಲ್ಲಿ ಅನುಭವಿ ನರ್ಸ್ ಗಳು ಇಂಜೆಕ್ಷನ್ ಕೊಡುವುದು,ಡ್ರೆಸ್ಸಿಂಗ್ ಮಾಡುವುದು ಇತ್ಯಾದಿ ,ಆಪರೇಷನ್ ಥೇಟರ್ ನಲ್ಲಿ  ವಾಶ್ ಮಾಡುವದು ,ಕತ್ತರಿ ಹಿಡಿದು ಕೊಳ್ಳುವುದು ,ಹೊಲಿಗೆ ಹಾಕುವ ವಿಧಾನ ಇತ್ಯಾದಿ ಮನವರಿಕೆ ಮಾಡಿಕೊಟ್ಟವರು . ಮೂಳೆ ವಿಭಾಗದ ಅಸಿಸ್ಟೆಂಟ್ ತಪ್ಪಿದ ಕೀಲು  ಸರಿಪಡಿಸುವದು ,ಇತ್ಯಾದಿ ಕಲಿಸಿ ಕೊಟ್ಟವರು . ಯಾವತ್ತೂ ನಮಗೆ  ಇವರಿಂದ ಎಂತ ಕಲಿಯುವುದು ಎಂಬ ಯೋಚನೆ ಬಂದೇ ಇಲ್ಲ . 

ಶಾಸ್ತ್ರಗಳ ಓದುವುದು ,ಮತ್ತು ಬೇರೆಯವರು ಹೇಳಿದ್ದನ್ನು ದೃಡೀಕರಿಸಿ ಕೊಳ್ಳುವದು ಬಹಳ ಮುಖ್ಯ .ಈಗ ಇಂಟರ್ನೆಟ್ ಬಂದು ಇದು ಸುಲಭ ಕೂಡಾ ಆಗಿದೆ .ಆದರೂ ಬಹಳ ಮಂದಿ  ಹಲವಂ ವಾಟ್ಸ್ಯಾಪ್ಪ್ ನಿಂ  ಕಂಡು ಅದರಿಂ ಬಂದದ್ದೇ ತೀರ್ಥ ಎಂದು ಸೇವಿಸುವುದು ಕಂಡು ದುಃಖ ಆಗುತ್ತದೆ . ಬಹಳ ಸಾರಿ ರೋಗಿ ಬಯಸಿದ್ದೂ ಹಾಲು ಎಂಬಂತೆ ವಾಟ್ಸಪ್ಪ್ ಗ್ರೂಪ್ ಸದಸ್ಯ ಬಯಸಿದ್ದೇ ಸದಸ್ಯರು ಸೃಷ್ಟಿಸಿ ಕೊಡುವಾಗ ಪಂಚಾಮೃತ ಎಂದು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ . ಇವರಲ್ಲಿ ಬಹಳ ಮಂದಿ ವೈಯುಕ್ತಿಕವಾಗಿ ಒಳ್ಳೆಯವರು ಮತ್ತು ವಿಶಾಲ ಮನಸ್ಕರು . ಆದರೆ ವಾಟ್ಸಪ್ಪ್ ಗುಂಪುಗಳು mob ಮೆಂಟಾಲಿಟಿ ತರಹ . ಕಂಡ ಕೂಡಲೇ ಜಯ ಜಯ ಎಂದು ಫಾರ್ವರ್ಡ್ ಮಾಡಿ ಕೃತಾರ್ಥ ರಾಗುವರು . ಫ್ಯಾಕ್ಟ್ ಚೆಕ್ ಮಾಡಲೂ ಹೋಗರು . ಸಮಾಜಕ್ಕೆ  ಇದರಿಂದ  ಆಗುವ ದುಷ್ಪರಿಣಾಮ ಬಹಳ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ