ಬೆಂಬಲಿಗರು

ಬುಧವಾರ, ಮೇ 26, 2021

ಕಣವಿ ಬೆನ್ನು ಹತ್ತಿ

 


Where literary flag flies high | Deccan Heraldಚೆನ್ನವೀರ ಕಣವಿ   ಯವರ  ಲೇಖನ ಸಂಗ್ರಹ ಸಾಹಿತ್ಯ ಸಮಾಹಿತ   ಎರಡನೇ ಓದು ಮುಗಿಸಿದೆ .ಅವರ ಕಾವ್ಯ ,ಗದ್ಯ ಮತ್ತು ನಗು ಬೆಳದಿಂಗಳ ಹಾಗೆ . ಸದಾ ತಂಪನ್ನು ಈಯುತ್ತವೆ ;ಮತ್ತು ಈಗಿನ ಸಂದಿಗ್ದ ಪರಿಸ್ಥಿತಿಯಲ್ಲಿ ಅಪ್ಯಾಯಮಾನ . ಅವರು ಪ್ರಸಿದ್ಧ ಕವನ ವಿಶ್ವ ವಿನೂತನ ನಮ್ಮ ನಾಡಗೀತೆಗಳಲ್ಲಿ ಒಂದು ,ಧಾರವಾಡ ಆಕಾಶವಾಣಿಯಲ್ಲಿ ಆಗಾಗ ಬರುತ್ತಿದ್ದು ಜನಪ್ರಿಯ .   

 https://youtu.be/CC3TVtrgGno

ಸಾಹಿತ್ಯ ಸಮಾಹಿತದ ಮೊದಲನೇ ಲೇಖನ ಮಾಸ್ತಿ :ನಾನು ಕಂಡಂತೆ . ೧೯೫೬ ರ ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವಕ್ಕೆ ಮಾಸ್ತಿ ಯಾವರನ್ನೂ  ವಚನ ಪಿತಾಮಹ ಫ ಗು ಹಳ ಕಟ್ಟಿಯವರನ್ನೂ ಕರೆಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು . ಈ ವಿಶ್ವವಿದ್ಯಾಲಯ ದಿಂದ ಗೌ ಡಾ ಪಡೆದ ಮೊದಲಿಗರು . ದಂತ ಕತೆ ಡಾ ಡಿ ಸಿ ಪಾವಟೆ ಆಗ ಉಪಕುಲಪತಿ ..ಘಟಿಕೋತ್ಸವ ಭಾಷಣ ಮಾಡುವ ಗೌರವ ಮಾಸ್ತಿಯವರಿಗೆ ಕೊಡಮಾಡಿದ್ದು ಅದನ್ನು ಅವರು ಕನ್ನಡದಲ್ಲಿಯೇ ಮಾಡಿದರು . 

"ಇದುವರೆಗೆ ಬರಿಯ ಶ್ರೀಮಾನ್ ಎಂದು ಕರೆದು ಕೊಂಡು ಇನ್ನು ಮುಂದೆ ಡಾಕ್ಟರ್ ಶ್ರೀಮಾನ್ ಎಂದು ಕರೆದುಕೊಳ್ಳಬಹುದಾಯಿತು ಎಂಬ ಭಾವನೆಯಿಂದ ನನಗೆ ಸಂತೋಷವಾಗಿದೆಯೆಂದು ಹೇಳಲಾರೆ .ಆದರೆ ನನ್ನ ತಾಯಿನಾಡು ನನ್ನ ಭಾಷಾ ಸೇವೆಯನ್ನು ಎಷ್ಟುಮಟ್ಟಿಗಾದರೂ ಮೆಚ್ಚಿ ಕೊಂಡಿತು ಎಂಬ ಭಾವನೆಯಿಂದ ಸಂತೋಷ ತುಂಬಿದೆ .ನಮ್ಮ ವಿಶ್ವ ವಿದ್ಯಾಲಯಗಳು ಇಂತಹ ಮೆಚ್ಚಿಗೆ ತೋರಿಸುವಲ್ಲಿ ನಮ್ಮ ಜನತೆಯ ಅಧಿಕೃತ ಪ್ರತಿನಿಧಿಗಳಾಗುತ್ತವೆ "ಎಂದು ಸಂತೋಷಕ್ಕೆ ಕಾರಣವನ್ನು ನಿವೇದಿಸಿದ ಮಾಸ್ತಿ ಯವರು "ಕನ್ನಡ ಜನತೆಯ ಜೀವನದಲ್ಲಿ ಕನ್ನಡದ ಸ್ಥಾನ ಯಾವುದಾಗಿರಬೇಕು ?ಕೇಳಬೇಕೇ ?ಇಂಗ್ಲಿಷ್ ಜನರ ಜೀವನದಲ್ಲಿ ಇಂಗ್ಲಿಷ್ ಭಾಷೆಗೆ ಯಾವುದೋ ,ಫ್ರೆಂಚ್ ಜನರ ಜೀವನದಲ್ಲಿ ಫ್ರೆಂಚ್ ಭಾಷೆಯ ಸ್ಥಾನ ಕನ್ನಡ ಭಾಷೆಗೆ ಇರಬೇಕು .ಈಗ ಈ ಸ್ಥಾನದ ಎಷ್ಟು ಹತ್ತಿರ ತಲುಪಿದ್ದೇವೆ ?"

ಇದು ಮಾಸ್ತಿಯವರ ೨೨ ಪುಟಗಳ ಭಾಷಣದ ಆರಂಭ .. 

ಮಾಸ್ತಿಯವರ ಜತೆ ಡಾಕ್ಟರೇಟ್ ಸ್ವೀಕರಿಸಿದ ಫ ಗು ಹಳಕಟ್ಟಿ ಯವರನ್ನು ವಚನ ಪಿತಾಮಹ ಎಂದು ಕರೆಯುತ್ತಾರೆ .

ಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ವಿಜಯಪುರ ಕ್ಕೆ ಬಂದಿಳಿದಾಗ ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನೋಡುವಿರಾ?” ಅದಕ್ಕೆ ನಕ್ಕು ಬಿ.ಎಂ.ಶ್ರೀ ಅವರು ಉತ್ತರಿಸಿದರಂತೆ “ಮೊದಲು ನಾನು ವಚನಗುಮ್ಮಟವನ್ನು ನೋಡಬೇಕಾಗಿದೆ” ಎಂದು. ಆ ವಚನ ಗುಮ್ಮಟವೇ ವಚನ ಪಿತಾಮಹರೆಂದು ಖ್ಯಾತನಾಮರಾದ ರಾವಬಹದ್ಧೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು. 

ತಮ್ಮ ತನು ಮನ ಧನ ವನ್ನೆಲ್ಲ ಶರಣ ಸಾಹಿತ್ಯ ಸಂಗ್ರಹ ಮತ್ತು ಪ್ರಕಟಣೆ ಮತ್ತು ಸಮಾಜಮುಖಿ ಸಂಸ್ಥೆ ಗಳಲ್ಲಿ ತೊಡಗಿಸಿದ ಅವರು ಜೇವನದಲ್ಲಿ ಕಾರ್ಪಣ್ಯ ಎದುರಿಸ ಬೇಕಾಯಿತು .ಕವಿ ಸಿದ್ದಲಿಂಗ ಪಟ್ಟಣ ಶೆಟ್ಟಿಯವರ ಮಾತುಗಳಲ್ಲಿ ಅವರ ಬಗ್ಗೆ ಕೇಳಿರಿ 

 https://youtu.be/UBBlS8IYGsQ

ಮೈಸೂರು ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ವಿಜಯಪುರ ಕ್ಕೆ ಹೋದಾಗ ಹಳಕಟ್ಟಿಯವರ ಮನೆಗೆ ಹೋಗಿ ಹೂ-ಹಣ್ಣು ಸಮರ್ಪಿಸಿ ನಮಸ್ಕರಿಸಿ ಬಂದರಂತೆ. ರಾಜ್ಯಪಾಲರ ಈ ವರ್ತನೆ ಹಳಕಟ್ಟಿಯವರ ವ್ಯಕ್ತಿತ್ವ ಅರಿಯದ ಸರಕಾರಿ ಅಧಿಕಾರಿಗಳಿಗೆ ದಂಗು ಬಡಿಸಿತು. ಸತ್ಯವಂತರಿಗಿದು ಕಷ್ಟಕಾಲವಯ್ಯ ಎಂದು ದಾಸರು ಹೇಳಿದಂತೆ ಶರಣರಿಗೆ ಕಷ್ಟ ನಿರಂತರ ಭಾದಿಸತೊಡಗಿದವು. 

 20ನೇ ಶತಮಾನದ ಶರಣ ಡಾ. ಫ.ಗು. ಹಳಕಟ್ಟಿ - Varthabharati

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ