ಬೆಂಬಲಿಗರು

ಶನಿವಾರ, ಡಿಸೆಂಬರ್ 26, 2020

ಬಸ್ ಪುರಾಣ ವೂ ಬಾಬೂ ಭಾಯಿ ಜೆ ಪಟೇಲರೂ

                               ಬಸ್ ಪುರಾಣವೂ ಭಾಬೂ ಭಾಯ್ ಜೆ ಪಟೇಲರೂ

ಗಡಿ ಪ್ರದೇಶದಲ್ಲಿ ಓಡುವ ಮಲಬಾರ್ ಟ್ರಾವೆಲ್ಸ್ ಎಂಬ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ನೀವು ಪ್ರಯಾಣಿಸಿರ ಬಹುದು .ಇದರಲ್ಲಿ ಸೂಚನೆ ಗಳು ಮಲಯಾಳದಲ್ಲಿ ಇರುತ್ತವೆ .ನೀವು ಬಸ್ಸಿಗೆ ಏರಿ ಕುಳಿತು ಕೊಳ್ಳಲು ಆಲೋಚಿಸುತ್ತಿರುವಾಗ ಅದರ ಮೇಲೆ ಕಂಡಕ್ಟರ್ ,ಮುದರ್ನ ಪೌರರ್ (ಹಿರಿಯ ನಾಗರಿಕರು ),ಅಂಧರ್ (ಅಂಧರು ),ವಿಕಲಾಂಗರ್ (ಅಂಗ ವಿಕಲರು )ಮತ್ತು ಉಳಿದ ಹಾಲ ಸಾಲುಗಳು ಸ್ತ್ರೀಕಳ್ (ಮಹಿಳೆಯರು )ಎಂದು ಬರೆದಿದ್ದು  ಸಾಮಾನ್ಯ ವರ್ಗದ ಪುರುಷರು ಸೀಟಿಗೆ  ಹುಡುಕಾಡ ಬೇಕಾಗುವುದು .ಪುಣ್ಯಕ್ಕೆ ಲೋಕಲ್ ಬಸ್ ಗಳಲ್ಲಿ  ಎಂ ಎಲ್ ಎ ಸೀಟ್ ಇಲ್ಲ .ಮಹಿಳೆಯರ ಸೀಟ್ ಗಳು ಚಾಲಕರ ಹಿಂದೆ ಇವೆ .ಕೆಲವು ವರುಷಗಳ ಹಿಂದೆ   ಬಸ್ ಅವಘಡಗಳು ಮೇಲಿಂದ ಮೇಲೆ ಸಂಭವಿಸಿದಾಗ ಇದಕ್ಕೆ ಚಾಲಕನ ಸೀಟ್ ನ ಹಿಂದೆ ಮಹಿಳೆಯರು ಇರುವುದರಿಂದ ,ಆತ ರೋಡ್ ಮತ್ತು ಸುತ್ತ ಮುತ್ತ ನೋಡುವುದು ಬಿಟ್ಟು ಹಿಂದೆ ಕುಳಿತ  ಸುಂದರಿಯರತ್ತವೇ ಗಮನ ಹರಿಸುವುದು ಕಾರಣ ಎಂದು ಉನ್ನತ ಸಾರಿಗೆ ಅಧಿಕಾರಿ ಒರ್ವರು ಮಹಿಳೆಯರಿಗೆ ಮೀಸಲಿಟ್ಟ ಸೀಟ್ ಗಳನ್ನು  ಹಿಂದಿನ ನಾಲ್ಕು ಸಾಲಿಗೆ ಬದಲಿಸಿ ಆದೇಶ ಹೊರಡಿಸಿದರು .ಆದರೆ ಕುಲುಕಾಟ ತಡೆಯಲಾರದೇ ಸ್ತ್ರೀಯರು ನಮಗೆ ಅದು ಬೇಡ ಎಂದು ಪ್ರತಿಭಟಿಸಿದ ಪರಿಣಾಮ ಆ ಆದೇಶ ಹಿಂತೆಗೆಯಲ್ಪಟ್ಟಿತು .

    ಕರ್ನಾಟಕದ ದೂರ ಸಾರಿಗೆ ಬಸ್ ಗಳಲ್ಲಿ  ಈಗಲೂ ಎಂ ಎಲ್ ಎ ಸೀಟ್ ಎಂದು ಕಾದಿರಿಸಿ ಇಟ್ಟಿರುತ್ತಾರೆ .ಆದರೆ ಇತ್ತೀಚಿನ ದಿನಗಳಲ್ಲಿ  ದೇಶ ಪ್ರಗತಿ ಹೊಂದಿ ಜನ ಪ್ರತಿನಿಧಿಗಳು ಸಾಕಷ್ಟು ಸ್ಥಿತಿ ವಂತರು ಆಗಿರುವುದರಿಂದ ಅವರನ್ನು ಬಸ್ ನಲ್ಲಿ ಕಾಣುವುದು ಅಪರೂಪ .ಮೊನ್ನೆ ಮೊನ್ನೆ ವರೆಗೆ ಸ್ವಾತಂತ್ರ್ಯ ಹೋರಾಟ ಗಾರರಿಗೆ ಎಂಬ ಮೀಸಲಾತಿ ಇತ್ತು .

ಜನ ಪ್ರತಿನಿಧಿ ಬಸ್ ಎನ್ನುವಾಗ ಗುಜರಾತಿನ ಮುಖ್ಯ ಮಂತ್ರಿ ಆಗಿದ್ದ  ಗಾಂಧೀವಾದಿ  ಭಾಬೂ ಬಾಯ್ ಜೆ ಪಟೇಲ್ ನೆನಪಿಗೆ ಬರುವರು 


ಖ್ಯಾತ ಲೇಖಕ ಎಸ ಎಲ್ ಭೈರಪ್ಪನವರ ಆತ್ಮ ಚರಿತ್ರೆ ಭಿತ್ತಿ ಯಲ್ಲಿ ಅವರು ಗುಜರಾತಿನ ವಲ್ಲಭ ಭಾಯಿ ಪಟೇಲ್ ವಿಶ್ವವಿದ್ಯಾನಿಲಯಕ್ಕೆ

ತತ್ವ ಶಾಸ್ತ್ರ ಅಧ್ಯಾಪಕರಾಗಿ ಹೋದ ಪ್ರಸ್ತಾಪ ಬರುತ್ತದೆ.ಅವರನ್ನು ಆಯ್ಕೆ ಮಾಡಿದ ಸಮಿತಿಯ ಅದ್ಯಕ್ಷರಾಗಿದ್ದವರು ನಿವೃತ್ತ  ಐ ಸಿ ಎಸಅಧಿಕಾರಿ ಮತ್ತು ಮುಂದೆ ಕೇಂದ್ರದ ಅರ್ಥ ಸಚಿವರಾದ ಎಚ್ ಎಂ ಪಟೇಲ್ ಅವರು.ಆಗ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿದ್ದವರು  ಶ್ರೀ ಬಾಬು ಭಾಯಿ ಪಟೇಲ್ ಅವರು .ಇವರು ಗಾಂಧಿ ವಾದಿಯಾಗಿದ್ದುದಲ್ಲದೆ ಅಲ್ಲದೆ ಉತ್ತಮ ಆಢಳಿತಗಾರರು ಆಗಿದ್ದರೆಂದು ಭೈರಪ್ಪನವರು ಬರೆದಿರುವರು. ತತ್ವ್ಸ ಶಾಸ್ತ್ರ ವಿಭಾಗ ಆರಂಬಿಸಿ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿ ಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ.ಒಮ್ಮ ಹಾಸ್ಟೆಲ್ ನ ಕೆಲವು ಹುಡುಗರು ಊಟದ ಏಕತಾನತೆಯ ಬಗ್ಗೆ ಇವರಲ್ಲಿ ಪ್ರಸ್ತಾಪಿಸಿ ರಜಾ ದಿನಗಳಲ್ಲಿ ಭೂರಿಭೋಜನ  ಕೊಡಬೇಕೆಂಬ ಬೇಡಿಕೆ ಇತ್ತರು .ಅದಕ್ಕೆ ಅವರು'' ಭೂರಿ ಭೋಜನ ಗಳಿಂದ ಮೆಸ್ಸ್ ಬಿಲ್ ಅಧಿಕ ವಾಗುವುದು .ಎಷ್ಟೋವಿದ್ಯಾರ್ಥಿಗಳು ಸಾಲ ಸೋಲ ಮಾಡಿ ಕಲಿಯುತ್ತಿರುತ್ತಾರೆ.ನಮ್ಮ ಪ್ರಾಚೀ ನ ಗುರುಕುಲಗಳಲ್ಲಿ ರಾಜನ ಮಗನಾಗಲೀ ,ಶ್ರೀಮಂತವ್ಯಾಪಾರಿಯ ಮಗನಾಗಲೀ ,ಬಡಗಿ ಕಮ್ಮಾರ ದನಗಾಹಿಯ ಮಗನಾಗಲೀ ಎಲ್ಲರೂ ಒಂದೇ ತರಹದ ವಸ್ತ್ರ ಧರಿಸುತ್ತಿದ್ದರು.ಹತ್ತಿರದಊರಿಗೆ ಹೋಗಿ ಭವತಿ ಭಿಕ್ಷಾಂದೇಹಿ ಅಂತ ಬೇಡಿ ತರುತ್ತಿದ್ದರು .ಅವರ ಅನ್ನ ಅವರೇ ದುಡಿಯಬೇಕು.ಸಹನಾವವತು ಸಹನವ್ ಭುನಕ್ತು ಎಂದರೆ ಇದು ಅರ್ಥ.ನಮ್ಮ ಸಹಪಾಠಿಗಳು ಮಾಡುವ ಊಟ ನಮಗೆ ಬೇಡ ,ಬಡಾ ಖಾನ ಬೇಕೆಂದರೆ ಏನರ್ಥ'' ?ಎ೦ದ ರಂತೆ.

ಒಮ್ಮೆ ಕಾಳಿದಾಸ ಜಯಂತಿಯಂದು ಅವರು ಮಾಡಿದ ಆಶು ಭಾಷಣ ಸಂಸ್ಕೃತ ವಿದ್ವಾಂಸರು ಮಾಡಿದ್ದುದಕ್ಕಿಂತಲೂ ಅಮೋಘ ವಾಗಿತ್ತುಎಂದು ಭೈರಪ್ಪ ಅಭಿಪ್ರಾಯ ಪಡುತ್ತಾರೆ.

                                        List of Chief Minister of Gujarat with Bio and Timeline - Cool Gujarati |  All about Gujarat and Gujaratis

ಮುಂದೆ ಇದೆ ಭಾಬು ಭಾಯಿ ೧೯೭೭ ರಲ್ಲಿ ಗುಜರಾತಿನ  ಮಂತ್ರಿ  ಮತ್ತು  ಮುಖ್ಯ ಮಂತ್ರಿ ಗಳಾದರು. ಮಂತ್ರಿಗಳಾಗಿದ್ದಾಗ ಅವರ ವೇಷ ಭೂಷಣಸರಳ ಉಡುಪು ಕೈಯ್ಯಲ್ಲಿ ಒಂದು ಹತ್ತಿ ಬಟ್ಟೆಯ ಚೀಲ .ಅದಿಕೃತ ಪ್ರವಾಸ ವೇಳೆಯಲ್ಲಿ ಅವರುಪಯಣಿಸುತ್ತಲೇ ಊಟ ಉಪಹಾರ ಮುಗಿಸುತ್ತಿದ್ದರು .ಅದಕ್ಕಾಗಿ ಪ್ರವಾಸಿ ಬಂಗಲೆಗೆ ಹೋಗುತ್ತಿರಲಿಲ್ಲ .ಮಂತ್ರಿಯಾಗಿರುವಾಗ ತಮ್ಮ ಸಮಯ ವೆಲ್ಲ ಸಾರ್ವ ಜನಿಕರಿಗೆ ಮೀಸಲಿರಬೇಕೆಂಬುದು ಅವರ ನಂಬಿಕೆ.ಇನ್ನು ಸರಕಾರಿ ವೆಚ್ಚದಲ್ಲಿ ಐಶಾರಮಿ ಹೋಟೆಲುಗಳಿಗೆ (ಈಗಿನ ರಾಜಕಾರಿಣಿಗಳಂತೆ) ಹೋಗುವ ಮಾತೆಲ್ಲಿ?

 ಅವರು ಮಂತ್ರಿ ಯಾಗಿದ್ದಾಗ ವಾರಕ್ಕೆ ಒಮ್ಮೆ ಅಹಮದಾಬಾದ್ ನಿಂದ ತಮ್ಮ ಊರು  ನಾನ್ದ್ಯಾದ್ ಗೆ ಸರಕಾರೀ ಬಸ್ ನಲ್ಲಿ ಬರುತಿದ್ದರು.ತಮ್ಮ ಮನೆಗಿಂತ ನಾಕು ನೂರು  ಯಾರ್ಡ್ ಮೊದಲಿನ ಬಸ್ ಸ್ಟಾಪ್ ನಲ್ಲಿ ಇಳಿದು ನಡೆಯುತ್ತಿದ್ದರು.(ಅವರ ಮನೆ ರಸ್ತೆ ಬದಿಯಲ್ಲಿ ಇದ್ದರೂ  ಎಕ್ಸ್ ಪ್ರೆಸ್ ಬಸ್ ಸ್ಟಾಪ್ ಇರಲಿಲ್ಲ ) ಬೇಕೆಂದರೆ ಡ್ರೈವರ್ ಇವರ ಮನೆಯ ಮುಂದೆ ನಿಲ್ಲಿಸುತ್ತಿದ್ದ. ಇದರಲ್ಲಿ ಕಷ್ಟ ವಾಗುತ್ತಿದ್ದುದು ಆ ಭಾಗದ ರೆವೆನ್ಯೂ ವಿಭಾಗದ ಮುಖ್ಯನಿಗೆ .ಸಚಿವರು ತನ್ನ ಏರಿಯಾಕ್ಕೆಬರುವಾಗ ರಾಜ ಮರ್ಯಾದೆಗಳೊಂದಿಗೆ  ಸ್ವೀಕರಿಸುವುದು ಪ್ರೋಟೋಕಾಲ್ ಅಲ್ಲವೇ? ಆದರೆ ಭಾಬು ಭಾಯಿ ನೀವು ಬರುವ ಅವಶ್ಯಕತೆವಿಲ್ಲ :ನಾನು ನನ್ನ ಮನೆಗೆ ಹಿಂತಿರುಗುತ್ತಿದ್ದೇನೆ ಅಷ್ಟೆ ಎಂದರಂತೆ.

 

ಮೂಲ  ೧ ಭಿತ್ತಿ  ಲೇ ಎಸ ಎಲ್ ಭೈರಪ್ಪ

          ೨ The Insiders View by Javid Choudhury

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ