ಬೆಂಬಲಿಗರು

ಶನಿವಾರ, ಫೆಬ್ರವರಿ 13, 2016

ಸರ್ ರಾಬರ್ಟ್ ಹಚಿಸನ್ ನ ಅಣಿ ಮುತ್ತುಗಗಳು

ಇದು ಈ ಬ್ಲಾಗ್ ನ  ಇನ್ನೂರನೇ  ಲೇಖನ .ಇದುವರೆಗೆ ಓದಿ ಪ್ರೋತ್ಸಾಹಿಸಿದ  

ಓದುಗರಿಗೆ ನಮಸ್ಕಾರಗಳು .ಜ್ಞಾನ ಸಾಗರದಲ್ಲಿ ನನ್ನ ತಿಳುವಳಿಕೆ ಒಂದು ಬಿಂದು .

ವಿಜ್ಞಾನ ಇಷ್ಟು ಮುಂದುವರಿದರೂ  ಆರೋಗ್ಯ ಅನಾರೋಗ್ಯ ಗಳ ಬಗ್ಗೆ ಬಹಳಷ್ಟು 


ಮೂಡ ನಂಬಿಕೆಗಳು ತಪ್ಪು ಅಭಿಪ್ರಾಯಗಳು ಇನ್ನೂ ಚಾಲ್ತಿಯಲ್ಲಿ ಇರುವುದು ಬಹಳ 

ಬೇಸರದ ವಿಚಾರ .ದುರದೃಷ್ಟವಶಾತ್ ಇವನ್ನು ತಿಳಿ ಗೊಳಿಸುವ ಶಕ್ತಿ ಇರುವ 

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ತಪ್ಪು ನಂಬಿಕೆಗಳನ್ನು ಹರಡುತ್ತಿವೆ .


 ಇನ್ನು ಇಂದಿನ ವಿಚಾರ .ಅಧುನಿಕ ವೈದ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ  ರೋಗಿಗಳ 

 ಪರೀಕ್ಷಾ ವಿಧಾನ ಹೇಳಿ ಕೊಡುವ ಒಂದು ಬೈಬಲ್  ಹಚಿಸನ್ ನ ಕ್ಲಿನಿಕಲ್ 

ವಿಧಾನಗಳು ,ಶತಮಾನದಷ್ಟು ಹಿಂದೆ ರಚಿತವಾದ ಈ ಹೊತ್ತಿಗೆ  ಅನೇಕ ಬಾರಿ 

ಪರಿಷ್ಕರಣೆ ಗೊಂಡು ಈಗಲೂ ವೈದ್ಯ ವಿದ್ಯಾರ್ಥಿಯ  ಅವಿಭಾಜ್ಯ ಅಂಗವಾಗಿ 

ಉಳಿದಿರುವುದು ಇದರ ಶ್ರೇಷ್ಠತೆಗೆ  ಸಾಕ್ಷಿ .

                    


ಹಚಿಸನ್  ದೇವರಲ್ಲಿ  ಈ ರೀತಿ ಪ್ರಾರ್ಥಿಸುತ್ತಾನೆ .

ಅನಾರೋಗ್ಯ ವಿಲ್ಲದವರನ್ನು  ಅವರಷ್ಟಕ್ಕೆ ಬಿಡದಿರುವ (ಅನವಶ್ಯಕ ಚಿಕಿತ್ಸೆ ನೀಡುವ)

ಹೊಸತರ ಬಗ್ಗೆ ಅತೀವ ಮೋಹ ಮತ್ತು ಹಳೆಯದೆಲ್ಲ ಪಾಳು ಎಂಬ   ಅಸಡ್ಡೆ 

 ತೋರುವ   .ಜ್ಞಾನವನ್ನು ವಿವೇಕದ ಮುಂದೆ , ವಿಜ್ಞಾನವನ್ನು ಕಲೆಯ ಮುಂದೆ ,

ಮತ್ತು  ಬುದ್ದಿಮತ್ತೆಯನ್ನು   ಸಾಮಾನ್ಯ ಜ್ಞಾನ ದ ಮುಂದೆ ಇಡುವ ,ರೋಗಿಗಳನ್ನು 

ಮನುಜರಾಗಿ ಎಣಿಸದೆ ಕೇಸ್ ಎಂದು ನೋಡುವ ,ಮತ್ತು  ನಮ್ಮ ಚಿಕಿತ್ಸೆಯು 

ರೋಗವನ್ನು  ಬಳಲುವುದಕ್ಕಿಂತಲೂ ಅಸಹನೀಯವಾಗದಂತೆ  ಮಾಡುವ 

ಮನೋಸ್ಥಿತಿಯಿಂದ ನಮ್ಮನ್ನು ರಕ್ಷಿಸು ದೇವಾ .

ಇವರ ಇನ್ನು ಕೆಲವು ನುಡಿ ಮುತ್ತುಗಳು 

"ಅತಿ ಬುದ್ಧಿವಂತಿಕೆಯು ವೈದ್ಯ ಶಾಸ್ತ್ರದಲ್ಲಿ  ಅನಾವಶ್ಯಕವಲ್ಲದೆ ಅಪಾಯಕಾರಿ 

ಕೂಡ"

"ಪೂರ್ಣ ಆರೋಗ್ಯವು ಮರೀಚಿಕೆ , ಅದರ ಅನ್ವೇಷಣೆಯಲ್ಲಿ ಹೋದಷ್ಟೂ 
ದೂರ ಓಡುವುದು  ."

"ರೋಗ ನಿಧಾನದಲ್ಲಿ ಊಹೆಗೆ ಎಡೆಕೊಟ್ಟರೆ  ಕೆಟ್ಟೆ "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ