ಬೆಂಬಲಿಗರು

ಗುರುವಾರ, ನವೆಂಬರ್ 30, 2023

 ನಮಗೆ ಆಪ್ತರಾಗಿದ್ದ ರೈಲ್ವೇ ಇಲಾಖೆಯಲ್ಲಿ ಇಂಜಿನೀಯರ್ ಆಗಿದ್ದ  ಶ್ರೀ ನಾಗರಾಜಪ್ಪ ಕುಟುಂಬ ದ ಬಗ್ಗೆ ಹಿಂದೆ ಬರೆದಿದ್ದೆ . ಅವರ ಇಚ್ಛೆಯಂತೆ  ನಿಧನಾನಂತರ ಅವರ ಶರೀರವನ್ನು  ಮೆಡಿಕಲ್ ಕಾಲೇಜು ಗೆ ದಾನ ಮಾಡಿದರು . ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಊಟ ಹಾಕಿದರು . ಇಲ್ಲಿ ಗಮನಿಸ ಬೇಕಾದ ಅಂಶ ಕೊನೆಯ ವರೆಗೂ ಮಕ್ಕಳು ಅವರನ್ನು ಚೆನ್ನಾಗಿ ನೋಡಿಕೊಂಡರು ಮತ್ತು ಮಕ್ಕಳು ಒಂದು ನೆಲೆಗೆ ಬರುವ ವರೆಗೆ ಅವರು ಬದುಕಿದ್ದರು . 

            ಇದೇ ರೀತಿ ರೈಲ್ವೆಯ ನನ್ನ ಸಹೋದ್ಯೋಗಿ ವೈದ್ಯ ಮಿತ್ರ ಡಾ ಪ್ರಸನ್ನ ಕುಮಾರ್ (ರೈಲ್ವೆ ವೈದ್ಯಕೀಯ ಸೇವೆಯ ಅತ್ಯುನ್ನತ  ಹುದ್ದೆ ಅಲಂಕರಿಸಿ ತಿಂಗಳ ಹಿಂದೆ ನಿವೃತ್ತ ರಾಗಿರುವರು ) ತಮ್ಮ ತೀರ್ಥ ರೂಪ ರನ್ನು ಕೊನೆಯ ತನಕ ಚೆನ್ನಾಗಿ ನೋಡಿಕೊಂಡು ,ಅವರ ಪುಣ್ಯ ತಿಥಿಯಂದು ಆಶ್ರಮ ವಾಸಿಗಳಿಗೆ ಊಟ ಹಾಕಿ ಆಚರಿಸುತ್ತಲಿರುವರು . 

               ನಮ್ಮಲ್ಲಿ ಈಗ ಕೆಲವು ತಂದೆ ತಾಯಿಗಳು ನಿಧನಾನಂತರ ಹೊರೆಯಾಗುವುದು ಬೇಡ ಎಂದು ತಮ್ಮ ಶರೀರ ಮೆಡಿಕಲ್ ಕಾಲೇಜು ಗೆ ದಾನ ಬರೆಯುವರು ..ಬದುಕಿರುವಾಗ ಹೆತ್ತವರನ್ನು ಕಾರಣಾಂತರ ಗಳಿಂದ ಸರಿಯಾಗಿ ನೋಡಿಕೊಳ್ಳದವರೂ ನೋಡಿ ಕೊಂಡವರೂ  ಅವರ ಉತ್ತರ ಕ್ರಿಯೆ ಇತ್ಯಾದಿ ಗಳನ್ನು ವೈಭವೋಪೇತ ವಾಗಿ  ಆಚರಿಸುವರು . ಮಕ್ಕಳು ಹಲವರು ಇದ್ದರೆ ಪ್ರತಿಯೊಬ್ಬರೂ ತಮ್ಮ ವತಿಯಿಂದ ಭೋಜನಕ್ಕೆ  ವಿಶೇಷ ಸಿಹಿತಿಂಡಿ  ಏರ್ಪಾಡು ಮಾಡುವರು .ಇಂತಹ ಕೆಲವು ಊಟಕ್ಕೆ ನಾಲ್ಕೈದು ಸಿಹಿ ತಿಂಡಿ ಇರುವುದೂ ಉಂಟು ,ಈಗ ಹೆಚ್ಚಿನವರು ಎಳೆಯ ಪ್ರಾಯದಲ್ಲಿಯೇ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವಾಗ ಅತಿಥಿಗಳಿಗೆ ಇದು ಹೊರೆಯೇ . ಇಂತಹ ಆಚರಣೆ ನಿಜಕ್ಕೂ ಹಿರಿಯರ ಆತ್ಮಕ್ಕೆ ಶಾಂತಿ ತಂದಿತೇ ? ಸರ್ವ ಶಕ್ತನಾದ ಭಗವಂತ ಎಂದು ನಾವು ನಂಬುವುದಿದ್ದರೆ ಅವನಿಗೂ ಅದು ಇಷ್ಟವಾದೀತೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ