ಬೆಂಬಲಿಗರು

ಶುಕ್ರವಾರ, ಆಗಸ್ಟ್ 4, 2023

ಮಕ್ಕಳು ನಮ್ಮಿಂದ ಬಂದವರು ನಮ್ಮವರಲ್ಲ 

ರೋಗ ನಿಧಾನದಲ್ಲಿ ಕುಟುಂಬದ ಇತಿಹಾಸ ಎಂದು ಇದೆ . ಮದುವೆ ಯಾದ ಗಂಡು ಹೆಣ್ಣು ಬಂದಾಗ ಮಕ್ಕಳ ಸಂಖ್ಯೆ ವಯಸ್ಸು ಅರೋಗ್ಯ ವಿಚಾರಿಸುತ್ತೇವೆ . ವಾರಗಳ ಹಿಂದೆ ಒಬ್ಬ ತಾಯಿ (ಮಾಸ್ತಿ ಯವರು ಬಳಸುವಂತೆ -ಹೆರದಿದ್ದರೂ ಅವರು ಮಾತೆಯರೇ )ಗೆ ಮಕ್ಕಳು ಎಷ್ಟು ಎಂದು ವಿಚಾರಿಸಲು ಆಕೆಯ  ಮುಖ ಮ್ಲಾನವಾಗಿ ಕಣ್ಣಲ್ಲಿ ನೀರು ಬಂತು  .ಮದುವೆಯಾಗಿ ವರುಷ ಹತ್ತು ಆದರೂ ಮಕ್ಕಳಿಲ್ಲ ಎಂದು .ಅವರಿಗೆ ಸಮಾಧಾನ ಹೇಳಿದೆ . 

ಮಲಯಾಳ ದಲ್ಲಿ ಸತ್ಯನ್ ಅಂತಿ ಕಾಡ್ ಅವರ ಪ್ರಸಿದ್ಧ ಚಲಚಿತ್ರ ಸಂದೇಶಂ ನಲ್ಲಿ ನಿವೃತ್ತ ರೈಲ್ವೆ ನೌಕರ  ತಿಲಕನ್ ತಾನು ಕಷ್ಟ ಪಟ್ಟು  ವಿದ್ಯಾಭ್ಯಾಸ ಕೊಡಿಸಿದ ಮಕ್ಕಳು ಯಾವುದೇ ಕೆಲಸ ಮಾಡದೇ ರಾಜಕೀಯ ಎಂದು ಕಾಲ ಧನ ಹರಣ ಮಾಡಿಕೊಂಡು ,  ಇಳಿ ವಯಸಿನಲ್ಲಿ ತಮಗೆ ಆಗದೇ ಇರುವಾಗ ಮಕ್ಕಳಿಲ್ಲ ಎಂದು ಕೊರಗು ತ್ತಿದ್ದ ಪ್ರಾಣ ಮಿತ್ರ ಅಧ್ಯಾಪಕ ದಂಪತಿಗಳಿಗೆ "ನಿಮಗೆ ಮಕ್ಕಳಿಲ್ಲ ಎಂಬ ಕೊರಗು ಮಾತ್ರ ಎಂದು ಸಮಾಧಾನ ಮಾಡಿಕೊಳ್ಳಿ ,ನನಗೆ ಇರುವಂತಹ ಮಕ್ಕಳು ಆಗುವುದಕ್ಕಿಂತ ಅದುವೇ ಮೇಲು  , '  ಎಂದು ಹೇಳುವ ಸಂಭಾಷಣೆ ಇದೆ . 

 ಮಕ್ಕಳು ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ನೋಡಿ ಕೊಳ್ಳದೇ ಇರುವಾಗ ಇದು ಸರಿ ಎಂದು ತೋರುವುದು ಸಹಜ .ಆದರೆ ಮಕ್ಕಳಾಟಿಕೆ ಆನಂದಿಸುವುದೇ ಒಂದು ಭಾಗ್ಯ ;ಅದಕ್ಕೆ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ ಎಂದು ಒಂದು ವಾದ . ಖಲೀಲ್ ಗಿಬ್ರಾನ್ ಹೇಳಿದಂತೆ ನಮ್ಮ ಮಕ್ಕಳು ನಮ್ಮ ಮೂಲಕ ಬಂದವರೇ ಹೊರತು ನಮ್ಮವರಲ್ಲ . ತಲೆಮಾರು ಗಳು ದಾಟಿದಂತೆ ಹಿರಿಯರ ಜವಾಬ್ದಾರಿ ವಹಿಸಿ ಕೊಳ್ಳಬೇಕು ಎಂಬ ಮನೋಧರ್ಮ ಮಾಯವಾಗುತ್ತಿದೆ . ವೃದ್ಧರನ್ನು ಅರೆ ವೃದ್ದರು ಅರೆ ಮನಸಿಂದ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಇದೆ .ಇದಕ್ಕೊಂದು ದಾರಿ ಸಮಾಜ ಕಂಡು ಕೊಳ್ಳ ಬೇಕಾದ ಅನಿವಾರ್ಯತೆ ಇದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ