ಬೆಂಬಲಿಗರು

ಸೋಮವಾರ, ಜುಲೈ 10, 2023

 



ನಾವು ಪ್ರತಿಯೊಬ್ಬರು ತಮ್ಮ ಅಧ್ಯಯನ ಮತ್ತು ಜೀವನಾನುಭವ ದಿಂದ ಒಂದೊಂದು ವಿಚಾರಧಾರೆ ಯನ್ನು ಹೊಂದಿರುತ್ತೇವೆ ಯಾದರೂ ಹಲವಾರು ಕಾರಣಗಳಿಂದ ಅದನ್ನು ನೂರಕ್ಕೆ ನೂರು ಅದನ್ನುನಿತ್ಯ ಜೀವನದಲ್ಲಿ ಆಚರಿಸಲು ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತೇವೆ . ಕುಟುಂಬ ಮತ್ತು ಸಾಮಾಜಿಕ ಕಾರಣಗಳಿಂದ ಹಲವು ಕಾಂಪ್ರೊಮೈಸ್ ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ . ಇನ್ನು ಹಲವರು ಮನಸಾರೆ ಆಡುವುದೊಂದು ಮಾಡುವುದೊಂದು ಮಾಡುತ್ತಿರುತ್ತಾರೆ ;ಅದು ಆಷಾಢಭೂತಿ ತನ . ಇವೆಲ್ಲಕ್ಕೂ ಮೀರಿ ಅಪರೂಪಕ್ಕ್ಕೆ ಕೈಬೆರಳು ಎಣಿಕೆಯಲ್ಲಿ ಒಬ್ಬರು ಇದ್ದಾರೆ .ಅಂತಹವರ ಪೈಕಿ ಒಬ್ಬರು ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು . 

ನಿನ್ನೆ ಅವರು ತಮ್ಮ ಪೋಸ್ಟ್ ನಲ್ಲಿ  ಒಂದು ಮಾತು ಬರೆದಿರುವರು . "ತಾವು ಪ್ರಕೃತಿ ಮತ್ತು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವನು ." ಈ ವಿಷಯವನ್ನು ಅಕ್ಷರಶಃ ಜೀವನದಲ್ಲಿ ಪಾಲಿಸಿದವರು . ಬಸವಣ್ಣದವರ ಕಾಯಕವೇ ಕೈಲಾಸ . ಈಯೆರಡರಲ್ಲಿ ಚ್ಯುತಿ ಕಂಡರೆ ಕೂಡಲೇ ತಮ್ಮ ಅಸಂತೋಷ ವ್ಯಕ್ತ ಪಡಿಸುವರು . ನನಗೇ ಹಲವು ಬಾರಿ ತಾವು ಸರಕಾರಿ ನೌಕರಿಯಲ್ಲಿ ಇದ್ದು ಅನಾವಶ್ಯಕ ಅಪಾಯ ಎಳೆದು ಕೊಳ್ಳುತ್ತೋದ್ದರೋ ಎಂದು .ಆದರೆ ಅವರ ಅಭಿಪ್ರಾಯಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದರೆ ಅವರಲ್ಲಿ ಜಾತಿ ,ಪಕ್ಷ ಅಥವಾ ಲಿಂಗ ತಾರತಮ್ಯ ದ ಪೂರ್ವಾಗ್ರಹ ಗಳು ಕಾಣಿಸದೆ ವಿವೇಕಾನಂದ ,ಕುವೆಂಪು ಮತ್ತು ಎಚ್ ನರಸಿಂಹಯ್ಯ ನವರ ದಾರಿ ಯಲ್ಲಿ ನಡೆಯಯುವರಂತೆ ಕಾಣಿಸುತ್ತಾರೆ . 

ಈ ಉಪಾಧ್ಯಾಯ ಸರ್ ನೇಮ್ ಅನ್ನು ತಮಗೆ ಸಮರ್ಥವಾಗಿ ಅನ್ವರ್ಥ ಮಾಡಿಕೊಂಡವರು . (ನಾನು ಕಂಡಂತೆ ಮತ್ತು ಗೋಪಾಲ ಕೃಷ್ಣರು ಮೂಢನಂಬಿಕೆ ಎಂದು ಹೇಳಬಹುದಾದಂತೆ ಈ ಸರ್ ನೇಮ್ ಇರುವವರು ಬಹಳ ಮಂದಿ ಜೆನೆಟಿಕಲಿ ಬುದ್ದಿವಂತರು ).. ಇವರು ಒಳ್ಳೆಯ ಅಧ್ಯಾಪಕರು ಇರಬೇಕಾದಂತೆ ಸದಾ ಕಲಿಯುವುದಕ್ಕೆ ತೆರೆದು ಕೊಂಡು ಇರುವವರು . ಸುತ್ತ ಮುತ್ತ ಸಾಹಿತ್ಯ,ಸಾಂಸ್ಕೃತಿಕ  ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ   ಇವರು  ಹಾಜರಿ .ರಾಮಕೃಷ್ಣ ಮಿಷನ್ ನವರು ಸ್ವಚ್ಛ ಪುತ್ತೂರು ಅಭಿಯಾನ ನಡೆಸಿದಾಗ ತಾವೂ ಪೊರಕೆ ಹಿಡಿದು ಗುಡಿಸುವದು ನಾನೇ ಕಣ್ಣಾರೆ ಕಂಡಿದ್ದೇನೆ . ಮೃದು ಭಾಷಿ ಮತ್ತು ಹೊರನೋಟಕ್ಕೆ ಸಂಕೋಚ ಸ್ವಭಾವದವರಂತೆ ಕಾಣುವ ಇವರು ಮೊದಲೇ ತಿಳಿಸಿದಂತೆ ಒಂದು ರೀತಿಯಲ್ಲಿ ಖಡಾಖಡಿ . ಇವರ ಮನೆಯ ಹತ್ತಿರ ಇದ್ದ ಶಿವರಾಮ ಕಾರಂತರ ಗಾಳಿ ಬೀಸಿರ ಬಹುದು . 

ಒಟ್ಟಿನಲ್ಲಿ ಉಪಧ್ಯಾಯರನ್ನು ಕಂಡರೆ ನನಗೆ ಅಭಿಮಾನ ,ಸಂತೋಷ ಮತ್ತು ಸ್ವಲ್ಪ ಮಟ್ಟಿನ ಅಸೂಯೆ .ಅಸೂಯೆ ಮನಸು ಒಪ್ಪುವಂತೆ ನಡೆ ನುಡಿ ಬಾಳು ಅವರಂತೆ ನನಗೆ ನಡೆಸಲು ಆಗುತ್ತಿಲ್ಲವಲ್ಲ ಎಂದು . 

ಅರುವತ್ತು ತುಂಬಿದ ಇವರಿಗೆ ಶುಭಾಶಯಗಳು .ನಿವೃತ್ತಿ ನಂತರ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲಿ ಇನ್ನೂ ಸಕ್ರಿಯವಾಗಿ ಕಾಣಿಸಲಿ . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ