ಬೆಂಬಲಿಗರು

ಶನಿವಾರ, ಅಕ್ಟೋಬರ್ 15, 2022

ಧರ್ಮಕ್ಕೆ ಸಿಗುವ ಹೊಗಳಿಕೆ ಮತ್ತು ತೆಗಳಿಕೆ

  ಕೆಲವೊಮ್ಮೆ ನಮಗೆ ಯಾವುದೇ ಶ್ರಮ ಇಲ್ಲದೆ ಹೊಗಳಿಕೆ ಸಿಗುತ್ತದೆ .ಉದಾಹರಣೆಗೆ ಒಬ್ಬ ವ್ಯಕ್ತಿ ಜ್ವರ ಬಂದು ಸಮೀಪದ ವೈದ್ಯರ ಬಳಿ ಹೋಗುತ್ತಾನೆ .ಅವರು ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ .ಮೂರು ನಾಲ್ಕು ದಿನ ಕಳೆದರೂ ಜ್ವರ ಬಿಡುವದಿಲ್ಲ . ಸರಿ ,ನಮ್ಮ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಾನೆ .ನಾನು ಪರೀಕ್ಷೆ ಮಾಡುವಾಗಲೂ ದೊಡ್ಡ ಕಾಯಿಲೆ ಏನೂ ಕಾಣುವುದಿಲ್ಲ . ರೋಗಿಯ ಬಯಕೆಯಂತೆ ಒಂದು ಡ್ರಿಪ್ ಹಾಕಿ ಸಾಧಾರಣ ಜ್ವರದ ಮಾತ್ರೆ ಕೊಡುತ್ತೇನೆ . ಬಂಡ ಮರುದಿನ ಜ್ವರ ಬಿಡುತ್ತದೆ . ನನಗೆ ಎಲ್ಲಾ ಕ್ರೆಡಿಟ್ ಸಿಗುತ್ತದೆ .ಹಲವು ಜ್ವರಗಳು ವೈರಸ್ ಮೂಲದವು ಆಗಿದ್ದು  ಶಮನ ಆಗಲು ವಾರ ತೆಗೆದು ಕೊಳ್ಳ ಬಹುದು . ಕೆಲವರು  ಅಂದಾಜಿಗೆ ಆಂಟಿ ಬಯೋಟಿಕ್ ಕೊಡುವರು .ಉದ್ದೇಶ ಒಳ್ಳೆಯದೇ . ಇದೇ ರೀತಿ ಭೇದಿ ಗೆ  ಮುಖ್ಯ ಕಾರಣ ವೈರಸ್ .ಇದಕ್ಕೆ ಜಲ ಪುರಾಣ ಸಾಕು . ಹೊರಗಡೆ ಎಷ್ಟೋ ಮದ್ದು ತಿಂದು ಬಂದವರು ಆಸ್ಪತ್ರೆಗೆ ಬಂದು ಒಂದೇ ದಿನದಲ್ಲಿ ಯಾವುದೇ ಹೊಸ ಔಷಧಿ ಇಲ್ಲದೆ ಗುಣ ಮುಖರಾಗುವರು . ರೋಗಿಯು ನಮ್ಮನ್ನು ಹೊಗಳುವರು . ಪ್ರಸಿದ್ಧ ಉಷ್ಣ ಪ್ರದೇಶ ರೋಗ ಶಾಸ್ತ್ರದ  ಪಠ್ಯ ಪುಸ್ತಕ ಮ್ಯಾನ್ಸನ್ ಬಾರ್ ನಲ್ಲಿ ಈ ಪ್ರದೇಶಗಳಲ್ಲಿ ಟೈಫಾಯಿಡ್ ಎಂದು ಅಂದಾಜಿಗೆ ಚಿಕಿತ್ಸಲಾಗುವ   ಹಲವು ಕೇಸ್ ಗಳು  ಮುಂದುವರಿದ ವೈರಲ್ ಕಾಯಿಲೆಗಳು ಎಂದು ಉಲ್ಲೇಖಿಸಿದ್ದನ್ನು ಓದಿದ ನೆನಪು . ಇದೇ ರೀತಿ ಡೆಂಗೂ ಜ್ವರ ದವರು ಪ್ಲಾಟೇಲೆಟ್ ಕಡಿಮೆ ಎಂದು ಬೆಂಗಳೂರು ಮಂಗಳೂರು ಇತ್ಯಾದಿ ಊರುಗಳಿಂದಲೂ ,ಸುತ್ತು ಮುತ್ತಲ ಹಳ್ಳಿಗಳಿಂದಲೂ ಬರುತ್ತಾರೆ .ನಾನು ಅದಕ್ಕೆಂದು ಏನೂ ಕೊಡುವುದಿಲ್ಲ . ತನ್ನಿಂದ ತಾನೇ ಅದು ಸರಿ ಆಗುವುದು . ಕೆಲವರು ಅದು ನಮ್ಮ ಕೈ ಗುಣದಿಂದ ಎನ್ನುವರು .ಉಳಿದವರು ತಾವು ತಿಂದ ಕಿವಿ ಮತ್ತು ಪಪ್ಪಾಯಿ ಕಾರಣ ಎನ್ನುವರು . 

ಅಯಾಚಿತ ಅನರ್ಹ ಹೊಗಳಿಕೆ ಬಂದಾಗ ತೆಗಳಿಕೆ  ಬರದೇ ಇರುತ್ತದೆಯೇ .? ಸ್ತ್ರೀ ರೋಗ ತಜ್ಞೆಯರಿಗೆ ಇದು ಬರುವದು ಹೆಚ್ಚು .ಆಸ್ಪತ್ರೆಯಲ್ಲಿ ಇಂದು ಡಿಸ್ಚಾರ್ಜ್ ಆಗುವಾಗ ಸಿಹಿ ತಿಂಡಿ ಸಿಗುವುದು ಅವರಿಗೆ ಮಾತ್ರ. ಅದರಂತೆ ಅನೀರಿಕ್ಷಿತ  ರಕ್ತಸ್ರಾವ ,ಶಿಶು ವಿನ  ಅನಾರೋಗ್ಯ ಆದಾಗ ಅವರು ತೆಗೆಳಿಕೆ ಕೇಳ ಬೇಕಾಗುತ್ತದೆ . ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದು . ಇಲ್ಲಿಯ ವರೆಗೆ ಇಂದ್ರ ಚಂದ್ರ ,ಧನ್ವನ್ತರಿ ಎಂದು ಹೊಗಳುತ್ತಿದ್ದವರಿಗೆ ಇದ್ದಕ್ಕಿದ್ದಂತೆ  ವೈದ್ಯರು ರಾಕ್ಷಸರಂತೆ ಕಾಣುತ್ತಾರೆ . ಉಳಿದ ಸ್ಪೆಸಿಯಾಲಿಟಿ ಗಳಲ್ಲಿಯೂ ಇಂತಹ ಪ್ರಕರಣ ನಡೆಯುತ್ತಲಿರುತ್ತವೆ . ಕೆಲವೊಮ್ಮೆ ವೈದ್ಯರ ಕಡೆಯಿಂದ ಲೋಪ ಆಗಿರ ಬಹುದಾದರೂ , ಬಹಳ ಕಡೆ  ಅವರು ಧರ್ಮಕ್ಕೆ ಬೈಗಳು ತಿನ್ನುವರು . ವೈದ್ಯರೂ ಮನುಷ್ಯರೇ . ತಾವು ಚಿಕೆತ್ಸೆ ಮಾಡುವ ರೋಗಿಯು ನಿರೀಕ್ಷಿತ ಸ್ಪಂದನೆ ಕೊಡದಿದ್ದರೆ ಅವರ ಸ್ಟ್ರೆಸ್ ಕೂಡಾ ಹೆಚ್ಚುವದು ,ಮನಶಾಂತಿ ಕಡಿಮೆ ಆಗುವದು . 

ಕೆಲವೊಮ್ಮೆ ನಾನು ಕೆಲಸ ಮುಗಿಸಿ ಮನೆಗೆ ಹೋದಾಗ ಮುಖ ಮ್ಲಾನ ವಾಗಿ ಇರುವುದು .ಆಗ ಮನೆಯವರು  ಸಂಜೆ ಯ  ತಿಂಡಿ ಕಾಪಿ ಸರಿಯಾಗಿಲ್ಲ ಎಂದು ತಿಳಿದು ಕೊಂಡು ನಿಮಗೆ ಹೇಗೆ ಮಾಡಿ ಹಾಕಿದರೂ ಸರಿ ಆಗುವುದಿಲ್ಲ ಎನ್ನುವರು .ವಾಸ್ತವದಲ್ಲಿ ನಾನು ಆಸ್ಪತ್ರೆಯ ರೋಗಿಯ ಬಗ್ಗೆ ಚಿಂತಿಸುತ್ತ ಇರುವೆನು .ಆಸ್ಪತ್ರೆಯ ರೋಗಿಗಳ ಮಾಹಿತಿ ಮನೆಯಲ್ಲಿ ಹೇಳುವುದಿಲ್ಲ .. ಅದು ವೈದ್ಯ ನೀತಿಗೆ ವಿರುದ್ಧ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ