ಬೆಂಬಲಿಗರು

ಶುಕ್ರವಾರ, ಅಕ್ಟೋಬರ್ 14, 2022

ದಾನ ವಿಧಾನಗಳು

ದಾನಿಗಳಲ್ಲಿ ಹಲವು ವಿಧ .ಕೆಲವರು ತಾವು ಕೊಡುವುದು  ಕಿಂಚಿತ್ ಆದರೂ ಊರೆಲ್ಲಾ ಜಾಹೀರು ಮಾಡಿ ಜನ ತಿಳಿಯ ಬೇಕು ಎಂದು ಬಯಸುವರು . ಈಗಂತೂ ಫೋಟೋ ,ವೀಡಿಯೋ ಮತ್ತು ಪ್ಲೆಕ್ಸ್ ಗಳು ಇದಕ್ಕೆ ಸುಲಭ ಸಹಾಯ ದಾರಿಗಳು . ಇವರಲ್ಲಿ ಕೆಲವರು ದಾನ ಪುಣ್ಯವನ್ನು ಬೇರೆ ರೀತಿ ನಗದೀ ಕರಿಸುವ ಆಸೆ ಉಳ್ಳವರು . 

ಇನ್ನು ಕೆಲವರು ದೊಡ್ಡ ಮೊತ್ತದ ಸಹಾಯ ಮಾಡಿ ಪ್ರಚಾರ ಮಾಡುವರು .ತಮ್ಮಂತೆ ಉಳಿದವರೂ ಮಾಡಲಿ ಎಂಬ ಉದ್ದೇಶ ಇರಬಹುದು . ಸಾರ್ವಜನಿಕ ಹಣ ಒಂದು ಕಡೆ ಲೂಟಿ ಮಾಡಿ ಇನ್ನೊಂದು ಕಡೆ ಬಹಿರಂಗವಾಗಿ ದಾನ ಶೂರ ಎನಿಸಿ ಕೊಂದವರು ಕೂಡಾ ಸಮಾಜದಲ್ಲಿ ಸಲ್ಲುವರು .

ಇನ್ನು ಹಲವರು ತಾವು ಒಂದು ಕೈಯ್ಯಿಂದ ಕೊಟ್ಟುದು ಇನ್ನೊಂದು ಕೈಗೆ ತಿಳಿಯ ಬಾರದು ಎಂಬ ಸಿದ್ದಾಂತ ಪಾಲಿಸುವವರು . ಇಲ್ಲಿ ದಾನ ಕೊಳ್ಳುವವನ ವೈಯುಕ್ತಿಕ ಪ್ರತಿಷ್ಠೆ ಗೆ ಕುಂದು ಬರ ಬಾರದು ಎಂದ ಸದುದ್ದೇಶ ಇದೆ .

ಪ್ರೊ ಹಿರಿಯಣ್ಣ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಇದ್ದವರು .ಇವರು ತತ್ವ ಶಾಸ್ತ್ರ ತರಗತಿಗಳನ್ನೂ ತೆಗೆದು ಕೊಳ್ಳುತ್ತಿದ್ದು ಬಹಳ ಪ್ರಸಿದ್ದ ,ಅವರ ನೋಟ್ಸ್ ಗಳು ಪುಸ್ತಕ ರೂಪದಲ್ಲಿ ಬಂದಿವೆ .ಎಸ್ ರಾಧಾಕೃಷ್ಣನ್ ಅವರ ಸಮಕಾಲೀನ ರಾಗಿದ್ದವರು.

ಡಿ ವಿ ಜಿ ಯವರು  ಜ್ನಾಪಕ ಚಿತ್ರ ಶಾಲೆಯಲ್ಲಿ ಅವರ ಬಗ್ಗೆ ಹೀಗೆ ಬರೆಯುತ್ತಾರೆ .

ಹತ್ತಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.ಅದು ಸಂತೋಷ ಪೂರ್ವಕವಾದ ಸಹಾಯ .ಆದರೆ ಒಂದು ವಿಶೇಷ .ಸಹಾಯ ತೆಗೆದು ಕೊಂಡ ಯಾರೂ ಅದನ್ನು ಮತ್ತೊಬ್ಬರಿಗೆ ಉಸುರ ಕೂಡದು .ಇದು ಕಟ್ಟಾಜ್ನೆ .ನನಗೆ ತಿಳಿದ ಒಬ್ಬ ಸಂಸ್ಕೃತ ವಿದ್ಯಾರ್ಥಿ ಎಂ ಎ ಸಂಸ್ಕೃತ ಓದುತ್ತಿದ್ದ .ಆತನ ಹೆಸರು ಹರಿ ಎಂದು ಇಟ್ಟು ಕೊಳ್ಳೋಣ .ಆತನಿಗೆ ಹಿರಿಯಣ್ಣನವರು ಗುಪ್ತವಾಗಿ ಮಾಸಾಶನ ಕೊಡುತ್ತಿದರು .ಅವನ ಸಹಪಾಠಿ ಯೊಬ್ಬ ಕಷ್ಟದಲ್ಲಿ ಇದ್ದಾಗ ಅದನ್ನು ಹರಿಯೊಡನೆ ಹೇಳಿಕೊಂಡನು .ಹರಿ ತಾನು ಹಿರಿಯಣ್ಣ ನವರಿಂದ ಪಡೆಯುತ್ತಿದ್ದ ಸಹಾಯವನ್ನು ಹೇಳಿ ಆ ಉದಾರಿಗಳನ್ನು ಆಶ್ರಯಿಸುವಂತೆ ಸಲಹೆ ಕೊಟ್ಟ .ಈ ಎರಡನೆಯ ವಿದ್ಯಾರ್ಥಿ ಹಿರಿಯಣ್ಣನವರಲ್ಲಿಗೆ ಹೋಗಿ ತನ್ನ ಕತೆಯನ್ನು ಹೇಳಿಕೊಂಡ .ಹಿರಿಯಣ್ಣನವರು ಆತನಿಗೂ ಸಹಾಯ ಕೊಡುವುದಾಗಿ ಭರವಸೆ ಕೊಟ್ಟು ಹಾಗೆಯೇ ನಡೆಸಿ ಕೊಂಡರು.

ಹರಿಗಾದರೋ ಅಂದಿನಿಂದ ಮೂರು ತಿಂಗಳ ಮಾಸಾಶನ ಕೊಡಬೇಕಾದದ್ದು ಉಳಿದಿತ್ತು .ಇನ್ನು ಮುಂದಿನ ಮೂರು ತಿಂಗಳ ಮೊಬಲಗನ್ನು ಒಟ್ಟಿಗೆ ಪೊಟ್ಟಣ ಕಟ್ಟಿ ಹರಿ ಬಂದಾಗ ಆತನ ಕೈಗೆ ಇತ್ತರು.ಆತ ಅದನ್ನು ಬಿಚ್ಚಿ ನೋಡಿ ಆಶ್ಚರ್ಯ ಸೂಚಿಸಲು ಹಿರಿಯಣ್ಣ 'ನೀವು ಈ ಸಂಗತಿಯನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದೆ .ನೀವು ಹೇಳಿ ಬಿಟ್ಟಿರಿ .ಒಳ್ಳೆಯದು ,ಇಲ್ಲಿಗೆ ನಾನು ಕೊಟ್ಟ ಮಾತು ನಡೆದಿದೆಯಲ್ಲಾ "ಎಂದರು .

 M. Hiriyanna.jpgBuy Outlines Of Indian Philosophy Book Online at Low Prices in India |  Outlines Of Indian Philosophy Reviews & Ratings - Amazon.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ