ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 11, 2022

ಹೀಗೊಬ್ಬ ಓದುಗ ನ ಅಭಿಪ್ರಾಯ ಇಂದ್ರ ಭವನದ ಚೌ ಚೌ ಬಾತ್ ನಂತೆ

MANGALORE : Indra Bhavan at balmatta Karnataka , Mangaluru : 21/02/2018 : Hotel Indra Bhavan in Mangaluru. Photo: H_S_ Manjunath

 

ಇಂದು  ಸಂಜೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು . ನನ್ನ ಕೃತಿ ವೈದ್ಯರ ಚೌ ಚೌ ಬಾತ್ ಓದಿ ಮುಗಿಸಿದ್ದು ,ತುಂಬಾ ಮೆಚ್ಚಿ ಕೊಂಡೆ ಎಂಬ ತಾತ್ಪರ್ಯ . ಅದರಲ್ಲಿ ಹೆಸರು ಇರದ ಕಾರಣ ಧನ್ಯವಾದ ಸಮರ್ಪಿಸಿ ಅವರ ಪರಿಚಯ ಕೇಳಿದೆ .ಕೂಡಲೇ ಫೋನ್ ಬಂದು ತಾವು ಮಂಗಳೂರು ಇಂದ್ರ ಭವನದ ಮಾಲೀಕ ಪ್ರಕಾಶ ಉಡುಪ ,ನಿಮ್ಮ ಮೊದಲ ಪುಸ್ತಕ ಕೂಡಾ ಕೊಂಡು ಓದಿ ಮೆಚ್ಚಿ ಕೊಂಡಿದ್ದೇನೆ ಎಂದರು . ನನಗೆ ಆಶ್ಚರ್ಯ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು . ಆಶ್ಚರ್ಯ ,ಸ್ವಯಂ ಇಂಜಿನಿಯರ್ ಆಗಿದ್ದು ತಂದೆಯವರು ಸ್ಥಾಪಿಸಿದ ಜನಪ್ರಿಯ ಹೋಟೆಲ್ ನಡೆಸುತ್ತಿರುವ ವ್ಯಕ್ತಿಗೆ ನನ್ನಂತಹ ಅಜ್ಞಾತ ನ  ಪುಸ್ತಕ ಓದಲು ಸಮಯ,ವ್ಯವಧಾನ ಮತ್ತು ಆಸಕ್ತಿ ಹೇಗೆ ಬಂತು ?ಸಂತೋಷ ನನ್ನ ಮೆಚ್ಚಿನ ಹೋಟೆಲ್ ಇಂದ್ರ ಭವನ ವರು ಎಂದು . 

ಇಂದ್ರ ಭವನ ,ವಿಶ್ವ ಭವನ ಎಲ್ಲಾ ಮಂಗಳೂರಿನ ಐಕಾನ್ ಗಳು . ವಿಶ್ವ ಭವನ ಕೂಡಾ ಅವರೇ ನಡೆಸುತ್ತಿದ್ದರು . ಅಲ್ಲಿನ ಸಜ್ಜಿಗೆ ಬಜಿಲು ,ಬನ್ಸ್ ,ತುಪ್ಪಾ ದೋಸೆ ಪ್ರಸಿದ್ಧ . ನಮ್ಮ ಕಿಸೆಗೂ ಭಾರವಾಗದ ದರ ಪಟ್ಟಿ . ಹಿಂದೆ ಕಲೆಕ್ಟರ್ ಗೇಟ್  ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಾಜ ರಸ್ತೆ ಬದಿಯಲ್ಲಿ ಇದ್ದು , ಈಗ ಅಲ್ಲೇ ಮುಂದೆ ಆರ್ಯ ಸಮಾಜ ರಸ್ತೆ ಆರಂಭ ಆಗುವಲ್ಲಿ ಎಡ ಬದಿಯಲ್ಲಿ ಇದೆ . ಸ್ವಚ್ಛತೆ ಮತ್ತು ಸ್ವಾದ  ಎರಡು ಸಮ್ಮಿಳಿತ .  

  ನನ್ನ ಬರಹಗಳು ಸಾಹಿತ್ಯಿಕವಾಗಿ ಗುಣ ಮಟ್ಟ ದವು ಎಂಬ ನಂಬಿಕೆ ನನಗೆ ಇಲ್ಲ . ಅವು ನನ್ನ ಮನಸಿನಲ್ಲಿ ಹರಿದಾಡುವ ಯೋಚನೆಗಳ ಮೂರ್ತ ರೂಪ .ಹಿಂದೆ ನಮ್ಮ ಅಕ್ಕ ಪಕ್ಕದ ,ಗೆಳೆಯರ ,ಮತ್ತು ಕುಟುಂಬದ ಹಿರಿ ಕಿರಿಯರ ಬಳಿ ಹಂಚಿ ಕೊಳ್ಳುತ್ತಿದ್ದಂತಹ  ,ಮೆಲುಕು ಹಾಕಿ ಕೊಳ್ಳುತ್ತಿದ್ದಂತ ವಿಷಯಗಳು  .ಈಗ ಅದನ್ನು ಯಾರಲ್ಲಿ ಹೇಳಲಿ ?ಅದಕ್ಕೆ ಬರೆಯುತ್ತಿದ್ದೇನೆ .  ಅಪರಿಚಿತ ಮತ್ತು ಪರಿಚಿತರು ಮೆಚ್ಚುಗೆ ಸೂಚಿಸಿದಾಗ ಸಂತೋಷ ಆಗುತ್ತದೆ . ಮೊನ್ನೆ ಶನಿವಾರ ಬೆಂಗಳೂರಿಗೆ ರೈಲು ಹಿಡಿಯಲು ಪುತ್ತೂರು ರೈಲ್ವೆ ನಿಲ್ದಾಣ ದಲ್ಲಿ ಕಾಯುತ್ತಿದ್ದಾಗ ಪ್ರಗತಿ ಪರ ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ ಬಹಳ ಹೊತ್ತು ಕೃತಿಯಲ್ಲಿ ತಾನು ಮೆಚ್ಚಿದ ಅಂಶಗಳನ್ನು ಫೋನ್ ಮಾಡಿ ತಿಳಿಸಿ ಸಂತಸ ವ್ಯಕ್ತ ಪಡಿಸಿದರು . ನನ್ನ ಮಗ ಸೊಸೆ ಬೆಂಗಳೂರಿಗೆ ತಲುಪಿದ್ದು ,ಅವರನ್ನು ಮತ್ತು ನಮ್ಮ ಪುಟ್ಟ ಮೊಮ್ಮಗನನ್ನು ಮಾತನಾಡಿಸಿ ಸೋಮವಾರ ಪುನಃ ಆಸ್ಪತ್ರೆ ಕೆಲಸಕ್ಕೆ ಹಾಜರ್ ಆಗಿದ್ದೇನೆ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ