ಬೆಂಬಲಿಗರು

ಸೋಮವಾರ, ಫೆಬ್ರವರಿ 22, 2021

ಶೌಚ ವಿಚಾರಗಳು

                               ಶೌಚ  ವಿಚಾರಗಳು 

ಮೊನ್ನೆ  ಒಬ್ಬ ರೋಗಿ ಡಾಕ್ಟ್ರೇ' ನನಗೆ ಉರಿ ಒಂದಕ್ಕೆ ಗೆ  ಮದ್ದು ಬೇಕು ಎಂದರು .  ಮೂತ್ರ ಶಂಕೆಗೆ ನಾವು ಹಳ್ಳಿ ಶಾಲೆಯಲ್ಲಿ ಒಂದಕ್ಕೆ ಎಂದು ಕರೆಯುತ್ತಿದ್ದೆವು ಆಮೇಲೆ ಈ ಶಬ್ದ ಇತ್ತೀಚಿಗೆ ನಾನು ಕೇಳಿದ್ದು ಇದೇ ಮೊದಲು .ನಾವು ಶಾಲೆಗೆ ಹೋಗುವಾಗ ಹುಡುಗರಿಗೆ  ಶೌಚಾ ಲಯಗಳು ಇರಲಿಲ್ಲವಾದುದರಿಂದ  ಬಯಲು ಮತ್ತು ಗುಡ್ಡಕ್ಕೆ ಹೋಗುತ್ತಿದ್ದೆವು .ಮನೆಯಲ್ಲೂ  ಅದೇ ಪರಿಸ್ಥಿತಿ .ಆಗ ಅದು ವಿಶೇಷ ಅಥವಾ ಮುಜುಗರ ಎಣಿಸುತ್ತಿರಲಿಲ್ಲ .ಹಳ್ಳಿಯಲ್ಲಿ ನೆಂಟರ ಮನೆ ,ಸ್ನೇಹಿತರ ಮನೆಗೆ ಹೋದಾಗಲೂ ಇದು ಸಮಸ್ಯೆ  ಆಗದು .ಆದರೆ ಇಂದು  ಮನೆಯಲ್ಲಿ ಶೌಚಾಲಯ ಇದ್ದರೆ  ಸಾಲದು  ವೆಸ್ಟೆರ್ನ್ ಸ್ಟೈಲ್  ಕಮೋಡ್ ಇದ್ದರೆ  ಬರುವೆನು ಎನ್ನುವ ನೆಂಟರು ಇದ್ದಾರೆ . 

ನಗರಗಲ್ಲಿ   ದೊಡ್ಡದಾಗಿ   ಇಲ್ಲಿ  ಬಯಲು ಶೌಚ ನಿಷೇಧ ಎಂದು ಫಲಕ ಗಳನ್ನು  ಕಂಡಿದ್ದೀರಿ .ಆದರೆ  ಸುರಕ್ಷಿತ ಶೌಚಾಲಯ ಎಲ್ಲಿದೆ  ಎಂಬ ಸೂಚನೆ ಎಲ್ಲೂ ಕಾಣುವುದಿಲ್ಲ . ಪೇಟೆಯಲ್ಲಿ ಮಹಿಳೆ ಮತ್ತು ವೃದ್ಧರ  ಕಷ್ಟ ಹೇಳ ತೀರದು . ಇದಕ್ಕೆ ಪರಿಹಾರ ಸೂಚಿಸದೆ  ನಮ್ಮ ಊರು ಸಂಪೂರ್ಣ ಸ್ವಚ್ಛ ಎಂದು ಘೋಷಿಸಿ ಪ್ರಯೋಜನ ಇಲ್ಲ . ನಮ್ಮಲ್ಲಿ ಕೆಲವು ಕಡೆ ಶೌಚಾಲಯ ಇದ್ದರೂ ಅದನ್ನು ಗಲೀಜು ಮಾಡುವರು ಎಂದು  ಬೀಗ ಜಡಿದು ಸ್ಮಾರಕಗಳಂತೆ ಇಟ್ಟಿರುವರು ,

    ನಾನು ಹುಬ್ಬಳ್ಳಿ ಯಲ್ಲಿ  ಎಂ ಬಿ ಬಿ ಎಸ್  ವಿದ್ಯಾರ್ಥಿಯಾಗಿದ್ದಾಗ  ಕಂಡಂತೆ  ಅಲ್ಲಿಯ ಜನರು ಮೂತ್ರ ಶಂಕೆಗೆ ಕಾಲ್ಮಡಿ  ಎಂದೂ ಮಲವಿಸರ್ಜನೆಗೆ ಬೈಲಕಡೆ  ಅಥವಾ  ತಂಬಿಗೆ ತೆಗೊಂಡು ಎಂದು ಹೇಳುತ್ತಿದ್ದುದನ್ನು ಕಂಡೆ . ಅಲ್ಲಿ  ಮೈ ತುರಿಸುತ್ತಿದೆ ಎಂಬುದಕ್ಕೆ  ಮೈಯೆಲ್ಲಾ ತಿಂಡಿ ಎನ್ನುತ್ತಿದ್ದರು . 

ಉರಿ ಮೂತ್ರಕ್ಕೆ ಇಂಗ್ಲಿಷ್ ನಲ್ಲಿ  ಬರ್ನಿಂಗ್ ಮಿಕ್ಟುರಿಷನ್ ಎನ್ನುವರು . ಇದನ್ನೇ ಕನ್ನಡಕ್ಕೆ ಒಬ್ಬರು ಹತ್ತಿ ಉರಿಯುತ್ತಿರುವ ಮೂತ್ರ ಎಂದು ಮಾಡಿದ್ದರು . 

ಎಲ್ಲಾ ಉರಿ ಮೂತ್ರಗಳೂ  ಸೋಂಕಿನಿಂದ ಲೇ  ಇರುವುದಿಲ್ಲ .

ಮೂತ್ರಾಶಯ (Urinary Bladder ) ದ  ಮೈಯಲ್ಲಿ  ಇರುವ ನರಗಳು ಅದು ತುಂಬಿದಾಗ  ಬೆನ್ನು ಹುರಿಯ ಮೂಲಕ ಮೆದುಳಿಗೆ ಸಂದೇಶ ರವಾನಿಸುತ್ತವೆ . ಮೆದುಳಿನ ಕೆಳಭಾಗ ದಲ್ಲಿ ಇರುವ ಪೋನ್ಸ್ ಎಂಬ ಭಾಗದಲ್ಲಿ ಇದರ ಕೇಂದ್ರ .ಮುಖ್ಯ ಮೆದುಳಿಗೂ ಸಂದೇಶದ ಪ್ರತಿ ಹೋಗುವುದು .ಮೂತ್ರ ವಿಸರ್ಜನೆಗೆ ಯೋಗ್ಯ ವಾತಾವರಣ ಇದ್ದರೆ  ಮೇಲಿನಿಂದ ಸಂದೇಶ ಹೋಗಿ ಮೂತ್ರಾಶಯ  ಸಂಕುಚಿಸಿ ,ಮೂತ್ರ ದ್ವಾರ ವಿಕಸನ ಗೊಂಡು  ಹೊರ ಹರಿವು ಸುಗಮ ಆಗುವುದು . ಇದರಲ್ಲಿ ಐಚ್ಚಿಕ ಮತ್ತು ಅನೈಚ್ಚಿಕ ಮಾಂಸ ಖಂಡಗಳು ಪೂರಕವಾಗಿ ಕಾರ್ಯ ನಿರ್ವಸಿಸುವವು .   ಗಂಡಸರಲ್ಲಿ  ವಯಸ್ಸು ಆದಾಗ ಪ್ರಾಸ್ಟೇಟ್ ಗ್ರಂಥಿ ಉಪಟಳ ಕೊಡ ಬಹುದು .ಹೆಂಗಸರಲ್ಲಿ ಮೂತ್ರಾಶಯ ಮತ್ತು ಮೂತ್ರನಾಳದ ಸುತ್ತಲಿನ ಮಾಂಸ ಖಂಡಗಳು ಬಲಹೀನ ಗೊಂಡು ತೊಂದರೆ ಬರುವುದು .ಇದರ  ಪರಿಣಾಮಗಳು ಬೇರೆ ಬೇರೆ ಇರುವವು .   ಮೂತ್ರ ತುಂಬಿದ ಅನುಭವ ಆದ  ಕೂಡಲೇ ಮೂತ್ರ ಮಾಡ ಬೇಕಾಗುವುದು ,ಇಲ್ಲದಿದ್ದರೆ ಬಟ್ಟೆಯಲ್ಲೇ ಹೋಗುವುದು .ಮೂತ್ರ ಮಾಡಲು ಹೋದರೆ ಮೂತ್ರ ಬರಲು ಸಮಯ ತೆಗೆದು ಕೊಳ್ಳುವುದು .ಕೆಮ್ಮು ಸೀನು ಬಂದಾಗ ಸ್ವಲ್ಪ ಮೂತ್ರ ಹೊರ ಹೋಗುವುದು  ಇತ್ಯಾದಿ . ಇವುಗಳಿಗೆ ವೈದ್ಯರು ಪರಿಹಾರ ಸೂಚಿಸುವರು . 

ಮಲ ವಿಸರ್ಜನೆಯು ಇಂತದೇ ನರಗಳ  ಆಣತಿಯಂತೆ  ನಡೆಯುವದು .ಆದರೂ ಮೂತ್ರದ ತೊಂದರೆಯಂತಹ ಉಪಟಳ ಕಡಿಮೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ