ಬೆಂಬಲಿಗರು

ಭಾನುವಾರ, ಅಕ್ಟೋಬರ್ 4, 2020

ಕಳಚಿದ ಮಹಾ ಜ್ನಾನ ವೃಕ್ಷ

                                     

 

                                                        


ಕಳೆದ ವಾರ ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರ ಬಗ್ಗೆ ಬರೆದಿದ್ದೆ .ಇಂದು ನನ್ನ ವೈದ್ಯ ಶಾಸ್ತ್ರದ  ಮಹಾಗುರು  ಡಾ ತಿರುವೆಂಗಡನ್ ಅವರ ಬಗ್ಗೆ ಬರೆಯ ಬೇಕಾಗಿದೆ .ನಿನ್ನೆ ತಾನೇ ಅವರು  ತೀರಿ ಕೊಂಡ ವಾರ್ತೆ ಬಂದಿದೆ .ಅವರ ಬಗ್ಗೆ ಬಹಳ ಹಿಂದೆ  ಇಂಗ್ಲೀಷ್ ನಲ್ಲಿ ಒಂದು ಬ್ಲಾಗ್ ಬರೆದಿದ್ದೆ .

ಇವರು  ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ  ವೈದ್ಯ ಶಾಸ್ತ್ರ  ಪ್ರಾಧ್ಯಾಪಕ ರಾಗಿ  ಬಹಳ ಪ್ರಸಿದ್ದ ರಾಗಿ  ಒಂದು ದಂತ ಕಥೆಯೇ ಆಗಿದ್ದರು .ಅವರ  ಬೆಡ್ ಸೈಡ್  ಪಾಟ ಗಳಿಗೆ  ವಿದ್ಯಾರ್ಥಿಗಳು  ಇರುವೆ ಗಳಂತೆ  ಮುತ್ತುತ್ತಿದ್ದರು .ರೋಗಿಯ  ಸಮಸ್ಯೆ ಗಳ  ವಿವರ ಶೇಖರಿಸುತ್ತಿದ್ದ  ವಿಧಾನ  ,ಕ್ರಮ ಬದ್ದವಾಗಿ  ರೋಗಿಯನ್ನು  ಪರೀಕ್ಷೆ  ಮಾಡುತ್ತಿದ್ದ ಪರಿ  ಬಹಳ ಪ್ರಸಿದ್ದ ಆಗಿತ್ತು .ರೋಗದ ಇತಿಹಾಸ ಮತ್ತು ಪರೀಕ್ಷೆ ಯಲ್ಲಿಯೇ  ಬಹುತೇಕ  ಡಯಾಗ್ನೋಸಿಸ್ ಮಾಡುತ್ತಿದ್ದರು. ಸದ್ಯ ಅಮೆರಿಕದಲ್ಲಿ ಇರುವ ಖ್ಯಾತ ಲೇಖಕ ವೈದ್ಯ ಅಬ್ರಹಾಂ ವರ್ಗೀಸ್ ಸೇರಿ  ಚೆನ್ನೈ ನ  ಮತ್ತು ದಕ್ಷಿಣ ಭಾರತದ  ಘಟಾನುಘಟಿ  ವೈದ್ಯರು ಹಲವಾರು  ಅವರ ಶಿಷ್ಯರು ,ಅವರನ್ನು  ಪೊಫೆಸರ್  ರ  ಪ್ರೊಫೆಸರ್  ಎಂದು ಕರೆಯುತ್ತಿದ್ದರು .

  ಸರಕಾರಿ  ಸೇವೆಯಿಂದ ನಿವೃತ್ತಿ  ಆದಮೇಲೂ  ಅವರ  ಅಧ್ಯಾಪನ ಪ್ರೇಮ ಅವರನ್ನು ಬಿಡಲಿಲ್ಲ  .ರೈಲ್ವೇ ಆಸ್ಪತ್ರೆ ಪೆರಂಬೂರ್ ಮತ್ತು  ಕೆ ಜೆ ಆಸ್ಪತ್ರೆಯಲ್ಲಿ ಅವರು ವೈದ್ಯ ವಿದ್ಯಾರ್ಥಿಗಳಿಗೆ  ಯಾವುದೇ ಆರ್ಥಿಕ ಪ್ರತಿಫಲ ತೆಗೆದು ಕೊಳ್ಳದೆ ಪಾಠ ಮಾಡಲು ಬರುತ್ತಿದ್ದರು .ಅವರ ಮನೆ ಟಿ ನಗರ .ಪೆರಂಬೂರ್ ಮತ್ತೊಂದು ತುದಿ .ತಪ್ಪದೇ ಬರುವರು .ನಾನೂ ಅವರ ವಿದ್ಯಾರ್ಥಿ .ಮದ್ರಾಸ್ ನ  ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು  ಬರುತ್ತಿದ್ದರು .ಅವರದು ಮೆಲು  ದ್ವನಿ ,ಆದರೆ  ಸ್ಪಷ್ಟ .ಹಾಸ್ಯ ಪ್ರಜ್ನೆ ಯೂ ಇತ್ತು .ರೋಗಿಯೊಡನೆ  ವಿವರ ಸಂಗ್ರಹಿಸುವ ಪರಿ ಮತ್ತು  ಪರೀಕ್ಷಾ ವಿಧಾನ ಅವರದೇ ಛಾಪು .ನೆನಪು ಶಕ್ತಿ ಅಗಾಧ .ಈ ವಾರ ಚರ್ಚಿಸಿದ  ರೋಗಿಯ ಬಗ್ಗೆ ಮುಂದಿನ ವಾರ ರೋಗ ಸ್ಥಿತಿ ,ಎಕ್ಸ್ ರೇ ರಕ್ತ ಪರೀಕ್ಷೆ ,ಸ್ಕ್ಯಾನ್ ಫಲಿತಾಂಶ ಕೇಳುವರು .ತಮ್ಮ ಪೂರ್ವ ಭಾವೀ ರೋಗ ನಿಧಾನ ಸರಿಯೇ ಎಂದು ಖಚಿತ ಪಡಿಸುವರು .ಅದು ಬಹುತೇಕ ಸರಿ ಇರುತ್ತಿತ್ತು .ಇಲ್ಲದಿದ್ದರೆ  ಚಡಪಡಿಸುವರು ,ಯಾವುದು ತಮ್ಮ ಪರೀಕ್ಷೆಯಲ್ಲಿ ತಪ್ಪಿತು ಎಂದು ? 

 ಸದಾ ಅಧ್ಯಯನ ನಿರತರು .ಯಾವುದೋ ಒಂದು ವೈದ್ಯಕೀಯ ಲೇಖನ ಅಥವಾ ಹೊಸತಾಗಿ ಬಂದ  ಔಷಧಿ ಬಗ್ಗೆ  ನಮಗೆ ಓದಲು ಸೂಚಿಸುವರು ಮತ್ತು ಇನ್ನೊಂದು ದಿನ ಅದರ ಬಗ್ಗೆ ಚರ್ಚಿಸ ಹೇಳುವರು .

ರೋಗಿಯನ್ನು ಇಡಿಯಾಗಿ  ನೋಡಿರಿ ,ಬಿಡಿ ಬಿಡಿ ಯಾಗಿ ಅಲ್ಲ ಎನ್ನುವುದು ಅವರ ಉಪದೇಶ .ಎಂದರೆ ತಲೆ ನೋವು ಎಂದು ಬಂದವನ ಕಾಲು ಕೂಡ ಪರೀಕ್ಷಿಸದೆ ಬಿಡ ಬಾರದು .

ಅವರು ರಾಷ್ಟ್ರಪತಿ  ವೆಂಕಟರಾಮನ್ ಅವರ ಗೌರವ ವೈದ್ಯರಾಗಿ ಇದ್ದರು .ಪದ್ಮಶ್ರೀ , ಬಿಸಿ ರಾಯ್ ಅವಾರ್ಡ್  ವಿಜೇತರು .ಕ್ರಿಕೆಟ್ ಮತ್ತು ಶಾಸ್ಟ್ರೀಯ ಸಂಗೀತ ದಲ್ಲಿ  ಆಸಕ್ತಿ .

ನಾನು  ಅವರ ಜತೆ ಕೆಲವು ದಿನ ಕಾರಿನಲ್ಲಿ ಪಯಣಿಸಿದ್ದೇನೆ .ಆಗಲೂ ಅವರು ನಾವು ಚರ್ಚಿಸಿದ ರೋಗಿಯ ಬಗ್ಗೆಯೋ ಸಂಗೀತ ದ  ಬಗ್ಗೆಯೋ ವಿವರಿಸುವರು .ವಿನಮ್ರತೆ ಅವರಿಗೆ ಸಹಜ ವಾಗಿತ್ತು .

ಕಲಿಸುವುದು  ಕಲಿಯಲು ಅತ್ಯುತ್ತಮ ಮಾರ್ಗ ಎಂದು ಹೇಳುತ್ತಿದ್ದರು ,ಟೀಚಿಂಗ್ ಈಸ್ ಬೆಸ್ಟ್ ವೇ ಆಫ್ ಲರ್ನಿಂಗ್ .ನಮಗೆ ತಿಳಿದ ಹೊಸ ಜ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವಾಗ ನಾವು ಅರಿವಿಲ್ಲದೆಯೇ ನಮ್ಮ ಜ್ನಾನವನ್ನು ಹೆಚ್ಚ್ಕಿಸಿ ಕೊಳ್ಳುತ್ತೇವೆ '

 ನನಗೆ ಅವರಿಂದ ಒಂದು  ಸರ್ಟಿಫಿಕೇಟ್  ಬೇಕಿತ್ತು .ಅವರು ಒಂದು ಖಾಲಿ ಹಾಳೆಯಲ್ಲಿ ಬರೆದು ಕೊಡುವರು .ಅದನ್ನು  ನಮ್ಮ ಡಿಪಾರ್ಟ್ಮೆಂಟ್ ನ ಬಾಲು ಟೈಪ್ ಮಾಡಿ ಕೊಡುವರು .ಅದನ್ನು ಪುನಃ ಓದಿ ಕೆಲವು ತಿದ್ದು ಪಡಿ ಮಾಡುವರು.ಆಮೇಲೆ  ಅವರ  ಲೆಟರ್ ಹೆಡ್  ಕಾಗದ ದಲ್ಲಿ  ಟೈಪ್  ಮಾಡಿಸುವರು ಮತ್ತು ಸಹಿ ಹಾಕುವರು .ಅದನ್ನು  ಕೊಳ್ಳಲು ಅವರ ಮನೆಗೆ  ಹೋಗಿದ್ದೆ .ಸಣ್ಣವನಾದ ನನಗೆ ಕುಡಿಯಲು  ಜ್ಯೂಸ್ ಮಾಡಿಸಿ ಕೊಡಿಸಿ ಬಾಗಿಲ ವರೆಗೆ ಬಂದು ಬೀಳ್ಕೊಡುವರು .

ಪ್ರೊಫೆಸ್ಸರ್  ಕೆ ವಿ ಟಿ ಎಂದೇ  ಪ್ರಸಿದ್ದರಾದ ಅವರ ನೆಪಪಿಗೆ  ವಂದನೆಗಳು

 https://youtu.be/JhcRy-DImvM

 https://youtu.be/O2foCZT4vdQ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ