ಬೆಂಬಲಿಗರು

ಗುರುವಾರ, ಜೂನ್ 4, 2015

ಹೃದಯಾಘಾತ -3

  ಹೃದಯಾಘಾತ 3
ಕೆಲವು ಪ್ರಶ್ನೆಗಳು 

ಎದೆ ನೋವಿಗೆ ಬೇರೆ ಕಾರಣಗಳು 

 ಅನ್ನನಾಳದ ಉರಿ .ಜಠರದಲ್ಲಿ ಇರುವ ಆಮ್ಲ ಅನ್ನನಾಳಕ್ಕೆ  ಬಂದರೆ ಉರಿ ನೋವು 

ಬರುವುದು .

ಶ್ವಾಶಕೋಶ ದಲ್ಲಿನ  ಸೋಂಕು ,ಗಡ್ಡೆಗಳು ಎದೆನೋವಿಗೆ ಕಾರಣ ಇರ ಬಹುದು .

ಕೆಲವೊಮ್ಮೆ ಶ್ವಾಸಕೋಶ ತೂತು ಬಿದ್ದು ಎದೆಯೊಳಗೆ ಗಾಳಿ ತುಂಬಿ ಎದೆನೋವು 

ಮತ್ತು ದಮ್ಮು ಉಂಟಾಗಬಹುದು .ಇದನ್ನು ನ್ಯುಮೋ ಥೊರಕ್ಷ್  ಎನ್ನುವರು .

ಎದೆಯ ಪಕ್ಕೆಲುಬು ಮತ್ತು ಮುಂದೆಲುಬಿನ ನಡುವಿನ ಗಂಟಿನ ವಾತ 

 ಎದೆನೋವಿನ ಸಾಮಾನ್ಯ ಕಾರಣ .ನಮ್ಮ ಉಸಿರು ಇರುವ ತನಕ  ಈ 

ಗಂಟುಗಳಿಗೆ ವಿಶ್ರಾಂತಿ ಇಲ್ಲದಿರುವುದರಿಂದ  ಇಲ್ಲಿ ಬಂದ ನೋವು ಬೇಗನೆ 

ಕಡಿಮೆಯಾಗದು .ಆದರೂ ಇದು ದೊಡ್ಡ ವಾತ ವೇನಲ್ಲ .

ಎದೆಯ ಚರ್ಮ ದಲ್ಲಿ  ನರ ಕೋಟಲೆ (ಸರ್ಪ ಸುತ್ತು ) ಬಂದರೆ ನೋವು ಇರುವುದು .

ಕೆಲವೊಮ್ಮೆ ಮನಸಿನ ಉದ್ವೇಗವು ಸುಮ್ಮನೇ ಎದೆನೋವಿನ  ರೂಪದಲ್ಲಿ 

ಕಾಣಿಸಿ ಕೊಳ್ಳುವುದು.

ಇ ಸಿ ಜಿ ಸರಿ ಇದ್ದರೆ ಹೃದಯಾಘಾತ ಆಗಿಲ್ಲ ಎಂದು ಹೇಳ ಬಹುದೇ ?

ಇಲ್ಲ .ಇ ಸಿ ಜಿ ಸರಿ ಇದ್ದು  ಹೃದಯಾಘಾತ ದ ಲಕ್ಷಣ ಇದ್ದರೆ ಇ ಸಿ ಜಿ  ಪುನಃ

ಮಾಡುವರು .ಅಲ್ಲದೆ ರಕ್ತ ಪರೀಕ್ಷೆಗೆ ಒಳಪಡಿಸುವರು.

ಹೃದಯಾಘಾತ  ಮುಂದೆ ಬರುವದೋ ಎಂದು ಕಂಡು ಹಿಡಿಯಲು 

ಆರೋಗ್ಯವಂತರಿಗೆ  ಇ ಸಿ ಜಿ ಮಾಡುವುದರಿಂದ ಹೆಚ್ಚ್ಚಿನ ಪ್ರಯೋಜನ ಇಲ್ಲ .


ಹೃದಯದ  ವೈಫಲ್ಯ (ಹಾರ್ಟ್ ಫೈಲ್ಲ್ಯುರ್ ) ಮತ್ತು  ಹೃದಯಾಘಾತ( ಹಾರ್ಟ್ 

ಅಟಾಕ್) ಕ್ಕೆ ಇರುವ ವ್ಯತ್ಯಾಸ ?

 ಹೃದಯದ ವೈಫಲ್ಯ  ಹೃದಯದ ಕವಾಟ ಗಳ ತೊಂದರೆ , ಕಾರೋನರಿ ರಕ್ತ 

ನಾಳಗಳ ತಡೆ , ವರ್ಶಾಂತರ ಗಳ  ದಮ್ಮಿನ ಕಾಯಿಲೆ ,ತೀವ್ರ ರಕ್ತ  ಹೀನತೆ 

ಇತ್ಯಾದಿ ಕಾಯಿಲೆಗಳಿಂದ ಬರ ಬಹುದು .ಹೃದಯಾಘಾತವೂ ಒಂದು ಕಾರಣ .

ಎಲ್ಲರೂ ಕೊಲೆಸ್ಟರಾಲ್  ಔಷಧಿ ಸೇವಿಸಿದರೆ ಒಳ್ಳೆಯದಲ್ಲವೇ ?

ಅಲ್ಲ ,ಅದಕ್ಕೆ ನಿರ್ಧಿಷ್ಟ ವೈಜ್ಞಾನಿಕ ಮಾನ ದಂಡಗಳಿವೆ. ಈ ಔಷ ಧಿಗಳಿಗೂ ಅಡ್ಡ 

ಪರಿಣಾಮ ಗಳಿವೆ .
ಯಾವ ಎಣ್ಣೆ ಒಳ್ಳೆಯದು ?ತೆಂಗಿನ ಎಣ್ಣೆ ಒಳ್ಳೆಯದೋ ಸೂರ್ಯಕಾಂತಿ ಎಣ್ಣೆ 
 
ಒಳ್ಳೆಯದೋ ?ಬೀchi ಯವರಲ್ಲಿ ಉದ್ದ ಜಡೆಯವಳನ್ನು ಮದುವೆ  ಆಗುವುದು
 
 ಒಳ್ಳೆಯದೋ ಮೋಟು ಜಡೆಯವಳನ್ನು ಮದುವೆ ಆಗುವುದು ಒಳ್ಳೆಯದೋ ಎಂದು 
 
ಕೇಳಿದ್ದಕ್ಕೆ ಮಾಡುವೆ ಆಗುವುದು ಒಳ್ಳೆಯದು ಎಂದು ನಿನಗೆ ಯಾರು ಹೇಳಿದರು 
 
 ?ಎಂದು ಮರು ಪ್ರಶ್ನೆ ಹಾಕಿದರಂತೆ .ಆದುದರಿಂದ ಎಣ್ಣೆ ಉಪಯೋಗ ಹಿತ ಮಿತ 
 
ಇರಲಿ .ರೈಸ್ ಬ್ರಾನ್  ಎಣ್ಣೆ ,ನೆಲಕಡಲೆ ಎಣ್ಣೆ ಪರವಾಗಿಲ್ಲ(ಆಲಿವ್ ಎಣ್ಣೆ ಅತ್ಯುತ್ತಮ 
 
,ಆದರೆ ಬಹಳ ತುಟ್ಟಿ .ತೆಂಗಿನ ಎಣ್ಣೆಯ ಬಗ್ಗೆ ಕೆಳಗೆಕೊಟ್ಟ ಲಿಂಕ್ ಓದಿರಿ . 

 https://www.ahajournals.org/doi/10.1161/CIRCULATIONAHA.119.043052

ಹಣ್ಣು ಹಸಿ ತರಕಾರಿ ಒಳ್ಳೆಯದು ,ಧೂಮ ಪಾನ ಪೂರ್ಣ ನಿಷಿದ್ಧ

2 ಕಾಮೆಂಟ್‌ಗಳು: