ಬೆಂಬಲಿಗರು

ಗುರುವಾರ, ಮೇ 16, 2024

ಪರಕ್ಕೆ ಸಂದಾಪುನೆ

 

  ಅತೀವ ಕಷ್ಟ ಬಂದಾಗಬಾಲ್ಯದಲ್ಲಿ ತಾಯಿ( ಮತ್ತು ಈಗ ಪತ್ನಿ ಬಾಯಲ್ಲಿ )ಹಲವು ಬಾರಿ ನನಗೆ ಒಟ್ರಾಸಿ 'ಪರಕ್ಕೆ ಸಂದಾಪುನೆ ' ಎಂದು ಅವರು ಹೇಳಿದ ಕೆಲಸ ನಿರೀಕ್ಷಾ ಮಟ್ಟಕ್ಕೆ ಬರದಿದ್ದಾಗ ಬೈದದ್ದು ಇದೆ . ಪರಕ್ಕೆ ಸಂದಾಪುನೆ ಅಥವಾ ಹರಕೆ ಸಲ್ಲಿಸುವುದನ್ನು ಅಷ್ಟು ತಾಪು ಮಾಡುತ್ತಾರೆ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ .  ,ಜನರು ಧರ್ಮಾತೀತ ವಾಗಿ ದೇವರು ,ದೈವ ಗಳಿಗೆ ಹರಕೆ ಹೇಳುವುದು ನಡೆದು ಕೊಂಡು ಅನತಿ ಕಾಲದಿಂದ ನಡೆದು ಕೊಂಡು ಬಂದಿದೆ . ಒಂದೊಂದು ರೋಗ ಮತ್ತು ಸಂಕಟಕ್ಕೂ ಪರಿಹಾರ ಕೇಳುವ ಪ್ರತ್ಯೇಕ  ಕ್ಷೇತ್ರ ಇವೆ . ಇಲ್ಲಿ ನಂಬಿಕೆ  ಭಕ್ತರಿಗೆ ಒಂದು ಪ್ಲಾಸಿಬೊ ರೀತಿಯ ಧೈರ್ಯ ನೀಡುವುದು . ಎಲ್ಲವನ್ನೂ ವೈಜ್ನಾನಿಕ ವಾಗಿ ನೋಡಲು ಆಗುವುದಿಲ್ಲ . ಅಡ್ಡ ದಾರಿಯಲ್ಲಿ ನಡೆದು ದೇವರಿಗೆ ಹರಕೆ ರೂಪದಲ್ಲಿ ಕಪ್ಪ ಕಾಣಿಕೆ ಕೊಟ್ಟರೆ ಸರ್ವ ಜ್ನಾನಿ ಭಗವಂತ ನಿಗೆ ಗೊತ್ತಾಗದೇ? ಅವನಿಗೆ ಗೊತ್ತಾಗದು ಎಂದು ತಿಳಿದರೆ ಅವನ ಮಹಿಮೆಯನ್ನೇ ಕುಗ್ಗಿಸಿ ದಂತೆ.

              ಹರಕೆ ಹೇಳಿ ಆಯಿತು . ಇಷ್ಟಾರ್ಥ ವೂ ಈಡೇರಿತು . ಆಮೇಲೆ ಜಿಜ್ನಾಸೆ . 'ಭೂತಕ್ಕೆ ಕೋಳಿ ಕೊಡುತ್ತೇನೆ ಎಂದು ಕೋಳಿ ಕೊಳ್ಳಲು ಹೋದಾಗ ಹೇಗೂ ಹರಕೆಗೆ ತಿನ್ನಲು ಅಲ್ಲ ,ಹೆಚ್ಚು ಕ್ರಯದ್ದು ಯಾಕೆ ?  '  ಗೋದಾನ ಮಾಡುತ್ತೇನೆ ಎಂದು ಹೇಳಿಕೊಂಡು ಆಗಿದೆ . ಇನ್ನೂ ತುಂಬಾ ಹಾಲು ಕೊಡುವ ದನವೇ ಆಗ ಬೇಕು ಎಂದು ಏನು ?"ಚಿನ್ನದ ತೊಟ್ಟಿಲು ಕೊಡುತ್ತೇನೆ ಎಂದದ್ದು ಹೌದು ಇಷ್ಟು ಪವನಿಂದೆ ಎಂದು ಹೇಳಿಲ್ಲವಲ್ಲ " ಇತ್ಯಾದಿ ಲೌಕಿಕ ವಿಚಾರಗಳು ಪ್ರಮಾರ್ಥಿಕತೆಯನ್ನು ಅವರಿಸುತ್ತವೆ . ಒಟ್ಟಾರೆ ಹರಕ್ಕೆ ಹೇಳಿದ್ದಕ್ಕೆ ತೀರಿಸಿ ದೇವರ ಲೆಕ್ಕ ಚುಕ್ತಾ ಮಾಡಿದರೆ ಆಯಿತು .ಈ ಅರ್ಥದಲ್ಲಿಯೇ ನನ್ನ ತಾಯಿ ಯವರು ಹೇಳುತ್ತಿದ್ದರು ಅನ್ನಿಸುತ್ತದೆ .ಯಾವುದೇ ಕೆಲಸದಲ್ಲಿ ಆತ್ಮಾರ್ಥತೆ ಇಲ್ಲದೆ ಮಾಡ ಬಾರದು ಎಂಬ ಉದ್ದೇಶ . 

ಇನ್ನೊಂದು ನುಡಿಗಟ್ಟು ಇದೆ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ .ಇಲ್ಲಿ ದಕ್ಷಿಣೆ ಕೊಡುವುದು ಯಾರು ,ತಕ್ಕಂತೆ ಪ್ರದಕ್ಷಿಣೆ ಹಾಕುವವವರು ಯಾರು ?ಯಾಕೆಂದರೆ ವಾಡಿಕೆಯಲ್ಲಿ ದಕ್ಷಿಣೆ ಹಾಕುವವರೂ ಪ್ರದಕ್ಷಿಣೆ ಹಾಕುವವರೂ ಒಬ್ಬರೇ ಆಗಿರುತ್ತಾರೆ . ಈಗಿನ ವಾತಾವರಣ]ದಲ್ಲಿ  ದಕ್ಷಿಣೆ ತಕ್ಕ ಪ್ರದಕ್ಷಿಣೆ ಹಾಕುವವರೂ ಅಪರೂಪ . ಮೇಲಿಂದ ಅಥವಾ ಕೆಳಗಿಂದ ಎಂದರೂ ಬಂದರೆ ಮಾತ್ರ ಎಂಬಂತಾಗಿದೆ . 

ನನ್ನ ಅಮ್ಮ ಹೇಳುತ್ತಿದ್ದ ಇನ್ನೊಂದು ಮಾತು ,ಏನು ಮಗ ಒತ್ತಾಯದ ಮೇಲೆ ಶಂಭಟ್ಟನ ರುಜು ಎಂಬ ಮಾತು . ಅವರ ಕಟ್ಟುಪಾಡಿಗೆ ಸಿಕ್ಕ್ಕಿ ಮನಸಿಲ್ಲದ ಮನಸಿನಲ್ಲಿ ಏನಾದರೂ ಮಾಡಿದರೆ ಹೇಳುತ್ತಿದ್ದರು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ