ಬೆಂಬಲಿಗರು

ಶುಕ್ರವಾರ, ಮೇ 10, 2024

 ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 

ಈ ಸುಡು ಬೇಸಗೆ ಮತ್ತು   ರಾಜಕೀಯ ಬೇಗೆ ಶಮನ ಗೊಳಿಸಲು ತಣ್ಣೀರು ಮತ್ತು ಸಂಗೀತ ದ ಆಶ್ರಯ ಪಡೆಯುತ್ತೇನೆ. ಮೊನ್ನೆ ಸಂಜೆ ಪ್ರಸಿದ್ಧ ತಮಿಳು ಕೀರ್ತನೆ ಅಲೈ ಪಾಯುದೇ ಕಣ್ಣಾ ಏನ್ ಮನ ಮಿಗ ಅಲೈ ಪಾಯುದೇ  ಕೇಳುತ್ತಿದ್ದೆ .  ಕೃಷ್ಣ ನ ಕುರಿತು ಗೋಪಿಕೆ ಯ  ಹಾಡು . ನಿನ್ನ ಕೊಳಲ ಸಂಗೀತ ಅಲೆ ಅಲೆಯಾಗಿ ಬರುತ್ತಿದೆ ಎಂಬುದು ಪಲ್ಲವಿ ಅರ್ಥ ಇರಬೇಕು . ಈ ಗೀತೆಯ ಒಂದು ಸಾಲು' ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 'ಎಂದು ಆರಂಭ ವಾಗುತ್ತದೆ . ತಿಳಿ ಬೆಳದಿಂಗಳು ಕೂಡಾ ಮಟ  ಮಧ್ಯಾಹ್ನ ದಂತೆ  ಉರಿಯುತ್ತಿದೆ .(ನಿನ್ನ ಪ್ರೇಮ ತಾಪದಲ್ಲಿ ಎಂದು ಇರಬೇಕು  )ಎಂದು ಅರ್ಥ . ಇದನ್ನು ಕೇಳುತ್ತಿದ್ದ ಸಮಯ ಸಂಜೆ ಏಳು ಗಂಟೆ . ಎಂದೂ ಕಾಣದ ಸೆಖೆ . ಕೃಷ್ಣನ ಕೊಳಲ ಗಾನ ಇಲ್ಲದಿದ್ದರೂ ಪಟ್ಟ ಪಗಲ್ ಪೋಲ್ ಎರಿಯುದೇ  ಎಂದು ನನ್ನ ಮನೆಯವರಲ್ಲಿ ಹೇಳಿದೆ . 

ಇಂತಹುದೇ ಅರ್ಥ ಬರುವ ಹಳೆ ಜನಪ್ರಿಯ ಚಿತ್ರ ಗೀತೆ ಒಂದು ಇದೆ .  ನಲ್ಲ ನಲ್ಲೆಯನ್ನು ಕುರಿತು ಹಾಡುವುದು

"ಬಳಿ  ನೀನಿರಲು ಬಿಸಿಲೇ  ನೆರಳು  ಮಧುಪಾನ ಪಾತ್ರೆ  ನಿನ್ನೊಡಲು ಮಧುವಿಲ್ಲದೆ ಮದವೇರಿಪ ನಿನ್ನಂತರಂಗ ಮಧುರಂಗ " ಇಲ್ಲಿ ಸೂರ್ಯನ ತಾಪಕ್ಕೆನಲ್ಲೆಯ ಸಾನ್ನಿಧ್ಯ ತಂಪೆರೆದರೆ , ಮೇಲಿನ ಗೀತೆಯಲ್ಲಿ  ತಂಪಾದ ಬೆಳದಿಂಗಳಲ್ಲೂ ಹಗಲ  ತಾಪ . 

ಏನಿದ್ದರೂ ಇಂತಹ ಆಲಾಪಗಳಿಗೆಲ್ಲ ಈ ಉರಿ ಬೇಸಿಗೆ ಹೇಳಿದ್ದಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ