ಬೆಂಬಲಿಗರು

ಶುಕ್ರವಾರ, ಮಾರ್ಚ್ 18, 2016

ರಾಜಕಾರಿಣಿಗಳಲ್ಲೊಬ್ಬ ಅಪರಂಜಿ ಮಧು ದಂಡವತೆ



ಹಿಂದೆ ರೈಲ್ವೆ ಎರಡನೇ ತರಗತಿಯ ಬೋಗಿಗಳಲ್ಲಿ  ಕೂರಲು ಮತ್ತು ಮಲಗಲು 

ಮರದ ಸ್ಲೀಪರ್ ಗಳು ಇದ್ದವು .ಸಮಾಜವಾದಿ ಹಿನ್ನಲೆಯಿಂದ ಬಂದ ರೈಲ್ವೆ ಮಂತ್ರಿ 

ಮಧು ದಂಡಾವತೆ ಎಲ್ಲಾ ಸ್ಲೀಪರ್ ಗಳಿಗೂ ಮೆತ್ತೆ (ಕುಶನ್)ಇರುವ ಮಾರ್ಪಾಡು 

ಮಾಡಿದರು .ತಮ್ಮ ಈ ಕ್ರಮಕ್ಕೆ ಅಧಿಕಾರಿಗಳು ಎರಡನೇ ದರ್ಜೆ ಪ್ರಯಾಣಿಕರು 

ಮೆತ್ತೆಯನ್ನು ಹರಿಯುವ ಭಯ ವ್ಯಕ್ತ ಪಡಿಸಿ ವಿರೋಧಿಸಿದರೆಂದೂ ತಾನು ಅವರನ್ನು 

ಒಪ್ಪಿಸಿದೆಂದೂ ಅವರು ಬರೆದಿದ್ದಾರೆ .

ಅದೇ ತರಹ ಕೆಲವು ಮಾರ್ಗಗಳಲ್ಲಿ  ಪ್ರಯಾಣಿಕರ ದಟ್ಟನೆ ಜಾಸ್ತಿ ಇರುವುದನ್ನು 

ಕಂಡ ದಂಡಾವತೆ  ತಾವು ಜರ್ಮನಿಯಲ್ಲಿ ಕಂಡ ಎರಡು ಇಂಜಿನ್ ಅಳವಡಿಸಿ 

ಹೆಚ್ಚು ಬೋಗಿಗಳನ್ನು ಸೇರಿಸುವ  ಪ್ರಸ್ತಾವ ಮುಂದೆ ಇಟ್ಟಾಗ  ತಾಂತ್ರಿಕ 

ಸಮಸ್ಯೆಗಳನ್ನು  ಅಧಿಕಾರಿಗಳು ಎತ್ತಿ ತೋರಿಸಿದರು .ಆದರೆ ಫಿಸಿಕ್ಸ್  ಪ್ರೊಫೆಸರ್ 

ಆಗಿದ್ದ ದಂಡಾವತೆ  ಅದಕ್ಕೆಲ್ಲಾ ವೈಜ್ಞಾನಿಕ ಭಾಷೆಯಲ್ಲಿಯೇ ಉತ್ತರ ಕೊಟ್ಟು

ಅವರ ಭಯ ನಿವಾರಿಸಿದರು .

ತಮ್ಮ ಪುಸ್ತಕ  ಡಯಲಾಗ್ ವಿಥ್ ಲೈಫ್ ನಲ್ಲಿ ಅವರು ಕೆಲ ಅನುಭವಗಳನ್ನು  ಹಂಚಿ 

ಕೊಂಡಿದ್ದಾರೆ .ಜೀವನದಲ್ಲಿ ತಮ್ಮ ಅತ್ಯಂತ ಬಲಶಾಲಿಯಾದ  ಎದುರಾಳಿಯೂ 

ಶತ್ರುವಲ್ಲ ಎಂಬ ತತ್ವ ತಮ್ಮದು ಎಂದು ಕೊಂಡಿದ್ದಾರೆ .

ಇವರು  ಮೊರಾರ್ಜಿ ಸಂಪುಟದಲ್ಲಿ  ರೈಲ್ವೆ ಮಂತ್ರಿ ಆಗಿದ್ದಾಗ  ಇಂದಿರಾಗಾಂಧಿ 

ವಿರೋಧ ಪಕ್ಷದಲ್ಲಿ ಇದ್ದರು .ಒಮ್ಮೆ ಪಾರ್ಲಿಮೆಂಟ್ ಬಳಿ ಎದುರಾದಾಗ  ಇಂದಿರಾ 

'ದಂಡವತೆ ಜಿ ನೀವು ಒಳ್ಳೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ .ನನ್ನ 

ಮಂತ್ರಿ ಮಂಡಲದಲ್ಲಿ ನಿಮ್ಮನ್ನು ಹೊಂದುವ ಭಾಗ್ಯ ನನಗಿಲ್ಲದಾಯಿತು ' ಎಂದರು 

ಅದಕ್ಕೆ ದಂಡವತೆ ನಿಮ್ಮ ಸಂಪುಟ ಸೇರಲು ಅವಕಾಶ ಸಿಗದಿದ್ದುದೇ ನನ್ನ ಭಾಗ್ಯ 

ಎಂದರು .ಇಂದಿರಾ ಅವರು ಈ ಉತ್ತರ ಕೇಳಿ ನಕ್ಕರು.

ಇನ್ನೊಮ್ಮೆ ಮೊರಾರ್ಜಿಯವರು ದಂಡವತೆವತೆಯವರಿಗೆ ನೀವೂ ಮೂತ್ರ ಚಿಕಿತ್ಸೆ 

ಮಾಡಿರಿ ,ಬಹುಕಾಲ ಬದುಕುವಿರಿ ಎಂದು ಸಲಹೆ ಇತ್ತರು .ಅದಕ್ಕೆ  ದಂಡವತೆ 

ಮೊರರ್ಜಿಭಾಯ್  ನನಗೆ ಬಹುಕಾಲ ಬದುಕುವ ಆಸೆಯಿದೆ ಆದರೆ ಒಳ್ಳೆಯ 

ರುಚಿಯೊಂದಿಗೆ ಎಂದರಂತೆ.

ಇನ್ನೊಮ್ಮೆ  ವಿರೋಧ ಪಕ್ಷದ ವತಿಯಿಂದ ಇವರು ಮಾತನಾಡುವಾಗ ಸ್ಪೀಕರ್ 

ಜಾಕಡ್ ಅವರು 'ಪ್ರೊಫೆಸರ್ ಅವರೇ ನೀವು ಶಕ್ತಿಯುತ ಭಾಷಣ 

ಮಾಡುತ್ತಿದ್ದೀರಿ.ಆದರೆ ತಮ್ಮ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಗದ್ದಲ 

ಮಾಡುತ್ತಿರುವರು.ನೀವು ಎಂದೂ ಹಾಗೆ ಮಾಡುವುದಿಲ್ಲ .' ಎಂದರಂತೆ .ಅದಕ್ಕೆ 

ದಂಡವತೆ ತನಗೆ ಈಜಲು ಬರುವುದಿಲ್ಲವಲ್ಲಾ ಎಂದಾಗ ಸದನ ತುಂಬಾ ನಗು .

   ಜಯಪ್ರಕಾಶ ನಾರಾಯಣ ಅವರು  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾಗ 

ತಮ್ಮ  ಮೂತ್ರಪಿಂಡ ದಾನ ಮಾಡುವುದಾಗಿ ದಂಡವತೆ  ಮುಂದೆ ಬಂದಿದ್ದರು .

ಅಲ್ಲದೆ ಅವರ ಮರಣಾನಂತರ   ಅವರ ಇಚ್ಚೆಯಂತೆ  ಶರೀರವನ್ನು ವೈದ್ಯಕೀಯ 

ಕಾಲೇಜ್ ಗೆ ದಾನ ಮಾಡಲಾಯಿತು .

  ಇವರು  ವಿ ಪಿ ಸಿಂಗ್ ಮಂತ್ರಿ ಮಂಡಲದಲ್ಲಿ ಅರ್ಥ ಸಚಿವ ರಾಗಿದ್ದಾಗ  ಚಿನ್ನ 

ಕಂಟ್ರೋಲ್ ಕಾನೂನು ರದ್ದು ಪಡಿಸಿದರು .ಕೊಂಕಣ್ ರೈಲ್ವೆ  ಆರಂಬಿಸಲು 

ಜೋರ್ಜ್ ಫೆರ್ನಾಂಡಿಸ್  ಎಷ್ಟು ಕಾರಣವೋ  ಅಷ್ಟೇ ದಂಡಾವತೆ ಸಹಾ.
                               

    


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ