ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 23, 2013

ನೋಡಲೇ ಬೇಕಾದ ಮಲಯಾಳ ಚಿತ್ರ ೧ ಸಂದೇಶಂ

 ೯೦  -೨೦೦೦  ರ ದಶಕ ದಲ್ಲಿ ಮಲಯಾಳದಲ್ಲಿ ಕೆಲವು  ಅದ್ಭುತ  ಸಿನಿಮಾ ಗಳು ಬಂದಿದ್ದವು.ಅವುಗಳಲ್ಲಿ ಸಂದೇಶಂ ಒಂದು .


ಖ್ಯಾತ ನಿರ್ದೇಶಕ ಸತ್ಯನ್ ಅನ್ತಿಕಾಡ್ ಅವರು ನಟ ಚಿತ್ರ ಕತೆ ಗಾರ ಶ್ರೀನಿವಾಸನ್ ಅವರ ಕತೆಯನ್ನು ಆಧರಿಸಿ ನಿರ್ಮಿಸಿದ


ಈ ಚಿತ್ರವು ಮಲಯಾಳ ಚಿತ್ರ ರಂಗದಲ್ಲಿ ದಾಖಲೆ ಸೃಷ್ಟಿಸಿತು.


ಜೀವಮಾನ ಇಡೀ ತಮಿಳ್ನಾಡಿನಲ್ಲಿ ರೈಲ್ವೆ ನೌಕರನಾಗಿ ಕಳೆದು ಸುಖ ವಿಶ್ರಾಂತ ಜೀವನ ಹಂಬಲಿಸಿ ಊರಿಗೆ ಬಂದ

ರಾಘವನ್ ನಾಯರ್ ಅವರಿಗೆ  ಪ್ರಭಾಕರನ್ ಮತ್ತು ಪ್ರಕಾಶನ್ ಇಬ್ಬರು ಗಂಡು ಮಕ್ಕಳು .ವಿದ್ಯಾವಂತರಾಗಿದ್ದರೂ

ಕೆಲಸಕ್ಕೆ ಹೋಗದೆ  ರಾಜಕೀಯದಲ್ಲಿ ತೊಡಗಿಸಿ ಕೊಂಡ ಇವರಲ್ಲಿ ಒಬ್ಬನು ಎಡಪಂತೀಯ  ರೆವೊಲ್ಯುಶನರಿ ಡೆಮೋಕ್ರಾಟಿಕ್

ಪಾರ್ಟಿ ಯಾದರೆ ಮತ್ತೊಬ್ಬನು ಇಂಡಿಯನ್ ನ್ಯಾಷನಲ್ ಸೆಕ್ಯುಲರ್ ಪಾರ್ಟಿ ಕಾರ್ಯಕರ್ತ .ಕೇರಳ ದಲ್ಲಿ  ಸಾಮಾನ್ಯ ವಾಗಿ

ಕಂಡು ಬರುವ ಅತಿಯಾದ ಪೊಲಿಟಿಕಲ್ ಅವೇರ್ನೆಸ್ ಮತ್ತು ಇನ್ವಾಲ್ವ್ಮೆಂಟ್.

ಆರಂಭದಲ್ಲಿ  ಮಕ್ಕಳ ಆಟವೆಂದು ತಿಳಿದು ಕೊಂಡರೆ ಇಬ್ಬರ ನಡವಳಿಕೆಗಳು ಅತಿರೇಕಕ್ಕೆ ಹೋದಾಗ ಶಾಸಿಸಿ  ಮಕ್ಕಳನ್ನು

ದಾರಿಗೆ ತರುವ ಕತೆ .ಇದರಲ್ಲಿ ಹಲವು ಮೆಲುಕು ಹಾಕುವ  ಸಂಭಾಷಣೆ ಗಳೂ .ಹಾಸ್ಯ ಸನ್ನಿವೇಶಗಳೂ ಇವೆ.

 ನಟರೆಲ್ಲಾ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ  ಜೀವ ತುಂಬಿದ್ದಾರೆ .

ಕೊನೆಯ ಸಂಭಾಷಣೆ  ಮೊದಲು ತಮ್ಮ ಮನೆಯನ್ನು ಸರಿ ಮಾಡಿ .ಮನೆ ನೋಡಿಕೊಳ್ಳದವರು ದೇಶ ಉದ್ಧಾರ ಮಾಡುವುದು

ಹೇಗೆ ?

ನೀವು ಈಗಾಗಲೇ ನೋಡಿರದಿದ್ದರೆ  ನೋಡಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ