ಬೆಂಬಲಿಗರು

ಶನಿವಾರ, ಸೆಪ್ಟೆಂಬರ್ 28, 2013

ಮುಂಜಾನೆ ವಾಕಿಂಗ್ ಹೊರಟಾಗ ಕಂಡಿದ್ದು

ವರುಣ  ನೀರ ಸಾಲದ ಅಸಲು ಮಳೆಯಾಗಿ ನೀಡಿ ಬಡ್ಡಿ ಇಬ್ಬನಿ ರೂಪದಲ್ಲಿ ಹಿಂತಿರಿಗಿಸುತ್ತಿದ್ದ

ದೂರದ ಕಾಡಿನಲ್ಲಿ ಮರಗಳು ಮಂಜಿನ ಮುಸುಕು ಹೊದೆದು ಮಲಗಿದ್ದವು .


ಹಕ್ಕಿಗಳು ಮರಿಗಳಿಗೆ ಮಗ್ಗಿ ಪಾಠ ಮಾಡುತ್ತಿದ್ದವು .



ಗಡಿಯಾರದ ಅಂಗಡಿ ಗಂಟೆಗಳಂತೆ ಒಂದೊಂದೇ ಕೋಳಿಗಳು ಅಲಾರಂ ಕೂಗುತ್ತಿದ್ದವು.


ಪೆಟ್ರೋಲ್  ಬ೦ಕಿನಲ್ಲಿ ಮಲಗಿದ್ದ ಬಸ್ ಗಳು ಎದ್ದು  ಮೈಮುರಿದು ಓಡಿದವು .


ಮನೆಗಳಿಂದ ಒಗ್ಗರಣೆ ಪರಿಮಳ ,ಮಿಕ್ಷಿಗಳ ತಳಮಳ ,

ದೇವಳದ ಸುಪ್ರಭಾತ , ರೇಡಿಯೋ ಸಂಗೀತ ಗಳ

ಮಿಶ್ರಣ   ಹಾಲು ಪತ್ರಿಕೆಯವರು ಸೂರ್ಯನಿಗೆ 

ಬೆಂಗಾವಲು ಮೇಳ .




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ