ಬೆಂಬಲಿಗರು

ಮಂಗಳವಾರ, ಫೆಬ್ರವರಿ 17, 2026

ಹಿರಿಯ ರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

 ಸಮಾಜದಲ್ಲಿ ಹಿರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು  ಅವರಿಗೆ  ಕೌಟಿಂಬಿಕ ಬೆಂಬಲ ಕಡಿಮೆ ಯಾಗುತ್ತಿರುವ ಈ ಕಾಲದಲ್ಲಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳ ಬೇಕಾದ ಜವಾಬ್ದಾರಿ ಅವರ ಮೇಲೆ ಇದೆ . 

ಇಂದಿನ ತಥಾಕಥಿತ ನಾಗರೀಕ ಸಮಾಜದ ಕಾಯಿಲೆಗಳಾದ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದ್ರೋಗ ಗಳಲ್ಲದೆ ಹಿರಿಯ ನಾಗರಿಕರಲ್ಲಿ ಕಾಣಿಸಿ ಕೊಳ್ಳುವ ಮೂತ್ರ ಸಂಬಂದಿ  ಸಮಸ್ಯೆ ,ಬೀಳುವಿಕೆ ಮತ್ತು ಮೂಳೆ ಮುರಿತ , ಮಹಿಳೆಯರಲ್ಲಿ  ಋತುಬಂಧ ಸಮಸ್ಯೆಗಳು ಇವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರ ವೊಂದನ್ನು  ೧.೩.೨೦೨೬ ನೇ ಭಾನುವಾರ ಪುತ್ತೂರಿನಲ್ಲಿ ಹಮ್ಮಿ ಕೊಳ್ಳಲಾಗಿದೆ . 

ಹಿರಿಯ ಮೂಳೆ ತಜ್ಞ ಡಾ ಭಾಸ್ಕರ್ ಅವರು ಹಿರಿಯರ ಮೂಳೆ ಮತ್ತು ಸಂಧಿ ವ್ಯಾಧಿಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ,ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯ ಡಾ ಗೋಪಿನಾಥ ಪೈ ಅವರು ಹಿರಿಯ  ಪುರುಷ ಮತ್ತು ಸ್ತ್ರೀಯರ ಮೂತ್ರ ಸಂಬಂದಿ ಸಮಸ್ಯೆಗಳ ಮೇಲೆ ಮತ್ತು ಜನಪ್ರಿಯ ಸ್ತ್ರೀ ರೋಗ ತಜ್ಞೆ ಡಾ ಶ್ರುತಿ ಅಲೆವೂರ್ ಋತುಬಂಧ(ಮುಟ್ಟು ನಿಲ್ಲುವಿಕೆ )ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡುವರು . ಹಿರಿಯ ಫಿಸಿಯೋಥೆರಪಿಸ್ಟ್ ವಿನಯ ಪ್ರಸಾದ್ ಝಾ ಅವರು ಉಪಯುಕ್ತ ವ್ಯಾಯಾಮ ಗಳ  ಪ್ರಾತ್ಯಕ್ಷಿಕೆ ನೀಡುವರು . ಪ್ರಶ್ನೆ ಸಮಾಲೋಚನೆಗೆ ಅವಕಾಶ ಇದೆ . ಜತೆಗೆ ನಾನೂ ಇರುತ್ತೇನೆ .

ನಿಯಮಿತ  ಆಸನ ವ್ಯವಸ್ಥೆ ಇರುವುದರಿಂದ ದಯವಿಟ್ಟು ೨೬.೨.೨೦೨೬ ರ ಒಳಗೆ ನೋಂದಾಯಿಸಿ ಕೊಳ್ಳಬೇಕಾಗಿ ವಿನಂತಿ . ಇದು ಪೂರ್ಣ ಉಚಿತ . ಕಾರ್ಯಕ್ರಮ ನಂತರ ಊಟದ ವ್ಯವಸ್ಥೆ ಇದೆ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ