ಹಿರಿಯ ಚೇತನ ಬಲ್ನಾಡು ಸುಬ್ಬಣ್ಣ ಭಟ್ ಅವರು ನಿಧನರಾದ ವಾರ್ತೆ ಬಂದಿದೆ . ಸಾತ್ವಿಕ ಸಜ್ಜನ ಎಂಬ ಶಬ್ದಗಳಿಗೆ ಅನ್ವರ್ಥರಾಗಿ ಬಾಳಿ ಬದುಕಿದವರು . ಸರ್ವೇ ಜನಾ ಸುಖಿನೋಭವಂತು ಎಂದು ಸರ್ವರಿಗೂ ಉಳಿತನ್ನು ಬಯಸಿದವರು .
ಒಳ್ಳೆಯ ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . ಇಂದ್ರ ಧನುಷ್ ,ವಿನೋದ ಇತ್ಯಾದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಸುಬ್ಬಣ್ಣನ ತ್ರಿಪದಿಗಳು ಓದುಗರ ಮೆಚ್ಚುಗೆ ಪಡೆದಿದ್ದವು . ಬಹಳ ಮಂದಿಗೆ ತಿಳಿದಿರದ ಇವರ ಇನ್ನೊಂದು ಆಸಕ್ತಿ ಸಂಖ್ಯಾ ವಿಜ್ಞಾನ .
ನನ್ನಂತಹ ಕಿರಿಯರನ್ನು ಕೂಡಾ ಗುರುತಿಸಿ ಹರಸಿದವರು . ಇವರ ನೆನಪಿಗೆ ನೂರು ನಮನ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ