ಬೆಂಬಲಿಗರು

ಶನಿವಾರ, ಡಿಸೆಂಬರ್ 31, 2022

 


 ಹಿರಿಯ ರಂಗಕರ್ಮಿ ,ಕೃಷಿಕ ಮತ್ತು ಸಾಹಿತಿ ಶ್ರೀ ಪ್ರಸಾದ್ ರಕ್ಷಿದಿ ಅವರ ಕಳೆದು ಹೋದ ದಿನಗಳು ಫೇಸ್ ಬುಕ್ ನಲ್ಲಿ ಧಾರವಾಹಿ ಆಗಿ ಬರುತ್ತಿದ್ದಾಗ ಓದಿ ಆನಂದಿಸಿ ದವರಲ್ಲಿ ನಾನೂ ಒಬ್ಬ . ಈಗ ಅದು ಪುಸ್ತಕ ರೂಪದಲ್ಲಿ ಬಂದಿದ್ದು ಪುನಃ ಓದುತ್ತಿದ್ದೇನೆ . ಅವರ ಕುಟುಂಬ ಚರಿತ್ರೆಯೊಡನೆ ಭಾರತೀಯರಲ್ಲಿ ಕಾಫಿ ಕೃಷಿ ಬೆಳೆದು ಬಂದ ವಿವರ ಕೂಡಾ ಹಾಸು ಹೊಕ್ಕಾಗಿ ಬಂದಿರುವ ಈ ಕೃತಿಯ ಲ್ಲಿ  ಕೊಡಗು ಮತ್ತು ಸಕಲೇಶಪುರ ಮುಖ್ಯ ಕರ್ಮಭೂಮಿ . ಎರಡೂ ಕಡೆ ಕೆಲಸ ಮಾಡಿದವನಾದ ನನಗೆ ಈ ವಿವರ ಗಳು ಅಪ್ಯಾಯಮಾನ . ಕಾಫಿ ಕೃಷಿಕ, ಉದ್ದಿಮೆ ದಾರರಾಗಿ ದಂತ ಕತೆ ಯಾಗಿರುವ ಸಾಕಮ್ಮ ಅವರ ಸಾಧನೆ ದಾಖಲೀಕರಣ ದಿಂದ ಆರಂಭ . ಗುಂಡು ಕುಟ್ಟಿ ಮಂಜುನಾಥಯ್ಯ ಅವರ ಉಲ್ಲೇಖ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಮತ್ತು ಶಿವರಾಮ ಕಾರಂತ ರಂಥವರ ಕೃತಿಗಳಲ್ಲಿ ಬರುತ್ತದೆ . ಕಾರಂತರು ತಮ್ಮ ಒಂದು ಕಾದಂಬರಿ ಇವರ ಮನೆಯಲ್ಲಿ ಕುಳಿತೇ ಬರೆದವರು . ಈ ಕೃತಿಯಲ್ಲಿ ಯೂ ಅವರ ಬಹುಮುಖ ಸಾಧನೆಯ ಕಿರು ಪರಿಚಯ ಇದೆ . 

ಸಾಕಮ್ಮ ನವರ ತೋಟದಲ್ಲಿ ಮ್ಯಾನೇಜರ್ ಆಗಿದ್ದ ಗಣಪಯ್ಯ ಹಾರ್ಲೆ ಗಣಪಯ್ಯ ಆದ ಕತೆ ಮುಂದಿನದು . ಸಕಲೇಶ ಪುರದ ಹಾರ್ಲೆ ಎಸ್ಟೇಟ್ ಮತ್ತು ದಶಕಗಳ ಕಾಲ ಅದರ ಒಡೆಯರಾಗಿದ್ದ ಗಣಪಯ್ಯ ಒಂದು ದಂತ ಕತೆ . ಅವರ ಸರಳತೆ,ಶ್ರೀಮಂತಿಕೆ  ,ಸಮಾಜ ಸೇವೆ  ಮತ್ತು ಅತಿಥ್ಯ ಕೇಳಿ ದ್ದ ನನಗೂ ಅವರನ್ನು ಕಾಣುವ ಭಾಗ್ಯ ಒದಗಿತ್ತು . ನಾನು ಸಕಲೇಶ ಪುರದಲ್ಲಿ ರೈಲ್ವೆ ವೈದ್ಯಾಧಿಕಾರಿ ಆಗಿದ್ದಾಗ ಅವರ ಎಸ್ಟೇಟ್ ಡೇ ಗೆ ಕರೆಸಿದ್ದರು .ಅಲ್ಲಿ ಸಿ ಎಂ ಪೂಣಚ್ಚ ಅವರು ,ಮತ್ತು ಗಣಪಯ್ಯ ಅವರ ಪುತ್ರ ಡಾ ರವೀಂದ್ರನಾಥ ಅವರು ತಮ್ಮ ಕಾರ್ಮಿಕ ರೊಂದಿಗೆ ಬೆರೆತು ಸಂತೋಷಿಸುವುದನ್ನು ಕಣ್ಣಾರೆ ನೋಡಿದ ನನಗೆ ರಕ್ಷಿದಿ ಅವರ ಕೃತಿ ಓದುವಾಗ ಹಳೆಯ ನೆನಪುಗಳು ಕಣ್ಣೆದುರು ಬಂತು . ಬಹುಶಃ ಪ್ರಸಾದ್ ಅವರ ನಾಟಕ ಹುಚ್ಚಿಗೂ ಈ ವಾತಾವರಣ ವೇ ಹಾಲು ಎರೆದು ಪೋಷಿಸಿ ರ ಬೇಕು . 

ಈ ಕೃತಿಯಲ್ಲಿ ಸಕಲೇಶಪುರದ ಮತ್ತು ಸುತ್ತಲಿನ  ಪ್ರಸಿದ್ಧ ಎಸ್ಟೇಟ್ ಗಳ  ಕತೆ ಇದೆ . ಕ್ರೌಫೋರ್ಡ್ ,ಅವರ ಹೆಸರಿನ ಆಸ್ಪತ್ರೆ ,ಹಾಲ್ ,ಎತ್ತಿನ ಹಳ್ಳ ,ಹಾಸನ ಮಂಗಳೂರು ರೈಲ್ವೆ ,ಶಾಪ್ ಸಿದ್ದೇಗೌಡ ,ಸಕಲೇಶಪುರ ಹಾಲಿನ ಡೇರಿ ,ಚಳ್ಳೇಕೆರೆ ಸಹಕಾರ ಸಂಘ ,ಅದೇ ಹೆಸರಿನ ಥೀಯೇಟರ್ ಇತ್ಯಾದಿ ಗಳ  ಆಪ್ತ ವಿವರಣೆ ಇವೆ . ಪೂರ್ಣ ಚಂದ್ರ ತೇಜಸ್ವಿ ಅವರ ಒಡನಾಟ ಮತ್ತು ಕಾಫಿ ಡೇ ಸಿದ್ದಾರ್ಥ ನವರ ಕೊಡುಗೆ ಚಿತ್ರಣ ಅಪ್ಯಾಯ ಮಾನ ವಾಗಿವೆ . ಇವುಗಳೆಲ್ಲದರ ಜತೆಗೆ ಲೇಖಕರು ತಮ್ಮ ವೃತ್ತಿ ಮತ್ತು ಪ್ರವೃತ್ತಿ ಬೆಳೆದು ಬಂದ ಬಗೆ ಯ ಬಗ್ಗೆ ಬರೆದಿದ್ದಾರೆ . 

ಡಾ ರವೀಂದ್ರನಾಥ್ ಅವರ ವೈಜ್ಞಾನಿಕ ಮನೋಧರ್ಮ ದ  ಬಗ್ಗೆ ವಿವರ ನನಗೆ ಬಹಳ ಇಷ್ಟ ವಾಯಿತು . ಕೊಂಡು ಓದ ಬೇಕಾದ ಕೃತಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ