ಬೆಂಬಲಿಗರು

ಸೋಮವಾರ, ಆಗಸ್ಟ್ 22, 2022

ಪಾರ್ಶ್ವ ವಾಯು ಮತ್ತು ಮಾಲೀಷ್

 ಪಕ್ಷವಾತ  ಎಂದು ಕರೆಯಲ್ಪಡುವ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ನಲ್ಲಿ  ಮೆದುಳಿನ  ಚಲನ ನಿರ್ದೇಶನ ಪ್ರದೇಶ (ಮೋಟಾರ್ ಏರಿಯಾ ) ಕಾರ್ಯ ಕ್ಷಮತೆ ಕುಗ್ಗಿ ಅಲ್ಲಿಂದ ಕೈಕಾಲುಗಳ ಚಲನೆಗೆ ನಿರ್ದೇಶನ ಸರಿಯಾಗಿ ಹೋಗುವುದಿಲ್ಲ .ಎಡ ಮೆದುಳು ಶರೀರದ ಬಲ ಭಾಗವನ್ನು ಮತ್ತು ಬಲ ಮೆದುಳು ಎಡ ಭಾಗವನ್ನು ನಿಯಂತ್ರಿಸುತ್ತದೆ . .ಜತೆಗೆ ಮಾತನಾಡುವ  ಕ್ರಿಯೆಯನ್ನು ನಿಯಂತ್ರಿಸುವ ಕೇಂದ್ರ ಎಡ ಮೆದುಳಿನಲ್ಲಿ ಇರುವುದು .ಈ ಕಾರಣದಿಂದ ಬಲ ಪಾರ್ಶ್ವ ವಾತ ಆದವರಲ್ಲಿ ಮಾತು ಬೀಳುವುದು ಸಾಮಾನ್ಯ . 

ಹಾಗಾದರೆ ಪಾರ್ಶ್ವ ವಾಯು ವಿನಲ್ಲಿ  ಕೈ ಕಾಲಿಗೆ ಎಣ್ಣೆ ಹಚ್ಚಿ ಮಾಲಿಶ್ ಮಾಡುವದುದರಿಂದ ಪ್ರಯೋಜನ ಇಲ್ಲವೇ ?ಇದೆ .ಎಣ್ಣೆ ಹಚ್ಚದೆ ಮಾಡಿದರೂ ಇದೆ . ಯಾಕೆಂದರೆ ಚಲನ ಹೀನಾ ಅವಯವಗಳು ಹಾಗೇ ಬಿಟ್ಟರೆ ಮಾಂಸ ಖಂಡಗಳ ಅಂಗಾಂಶಗಳು ನಶಿಸಿ ಮರಗಟ್ಟಿ ಹೋಗುವವು .ಇದರಿಂದ ಮೆದುಳಿನಲ್ಲಿ ಇರುವ ಮೂಲ ಕಾಯಿಲೆ ವಾಸಿ ಆದರೂ ಚಲನಾ ನಿರ್ದೇಶನ ಪಾಲನೆ ಸರಿಯಾಗಿ ನಡೆಯದು . ನಾವು ಅದಕ್ಕೆ ಫಿಸಿಯೋಥೆರಪಿ ಸಲಹೆ ಮಾಡುತ್ತೇವೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ