ಬೆಂಬಲಿಗರು

ಭಾನುವಾರ, ಜನವರಿ 10, 2021

ಸೋಡಿಯಂ ಕೊರತೆ

                        ಸೋಡಿಯಂ   ಕೊರತೆ 

ಸೋಡಿಯಂ ಕ್ಲೋರೈಡ್ ಎಂದರೆ ಉಪ್ಪು . 

  . ಸೋಡಿಯಂ ,ಪೊಟ್ಯಾಸಿಯಂ ,ಕ್ಯಾಲ್ಸಿಯಂ ಇತ್ಯಾದಿ  ಲವಣಗಳು ಜೀವಕ್ರಿಯೆಯಲ್ಲಿ  ಪ್ರಮುಖ ಪಾತ್ರ ನಿರ್ವಹಿಸುತ್ತವೆ 

 ಉಪ್ಪು ತಿಂದವ ನೀರು ಕುಡಿಯಲೇ ಬೇಕು.ಯಾಕೆ ? ಉಪ್ಪು ಜಾಸ್ತಿ ತಿಂದ ಒಡನೆ ರಕ್ತದ ಸಾಂದ್ರತೆ  ಏರುವುದು .ಮೆದುಳಿನ ಸಾಂದ್ರತಾ ಮಾಪಕ ಜಾಗೃತ ಆಗಿ ತನ್ನಲ್ಲಿರುವ ದಾಹ ಕೇಂದ್ರಕ್ಕೆ ನೀರಡಿಕೆ ಪ್ರಕಟ ಪಡಿಸುವಂತೆ ಸೂಚಿಸುವುದು ಮತ್ತು ಪಿಟ್ಯುಟರಿ  ಗ್ರಂಥಿಗೆ  ಅತಿಮೂತ್ರ ನಿರೋಧಕ (Anti  diuretic Hormone )ಹಾರ್ಮೋನ್ ಸ್ರವಿಸಲು ಆದೇಶ ನೀಡುವುದು .ಈ ಹಾರ್ಮೋನ್ ಮೂತ್ರಪಿಂಡ ನೀರು ಮಾಡುವವು .ಇದರಿಂದ ಏರಿದ ಸಾಂದ್ರತೆ ಕಡಿಮೆ ಆಗುವುದು . 

    ನೀವು  ಇತ್ತೀಚೆಗೆ  ಉಪ್ಪು ಕಡಿಮೆ ಕಾಯಿಲೆ ಎಂದು ಕೇಳಿರಬಹುದು ..ನಾರ್ಮಲ್ ಆಗಿ  ರಕ್ತದಲ್ಲಿ  ಲೀಟರಿಗೆ  ಸೋಡಿಯಂ ೧೩೫ ರಿಂದ ೧೪೫ ಮಿಲ್ಲಿ  ಎಕ್ವಿ ವೆಲೆಂಟ್ ಇರಬೇಕು .ಇದು ೧೩೫ ರಿಂದ ಕಡಿಮೆ ಇದ್ದರೆ  ಕಡಿಮೆ ಆಯಿತು ಎನ್ನುತ್ತೇವೆ . ಸೋಡಿಯಂ ಕಡಿಮೆ ಆದರೆ ಆಯಾಸ ,ತಲೆನೋವು ,ಕಡಿಮೆ ಪ್ರಜ್ಞಾವಸ್ಥೆ ,ಅಪಸ್ಮಾರ ಮತ್ತು  ಕೋಮಾ (ಪೂರ್ಣ ಅಬೋಧವಸ್ಥೆ )ಉಂಟಾಗ ಬಹುದು . 

 ಉಪ್ಪಿನ ಅಂಶ ಕಡಿಮೆ ಆಗಲು ಉಪ್ಪುಸೇವನೆ ಕೊರತೆ ಕಾರಣ ವಾಗುವುದು ಅಪರೂಪ

.ಶರೀರದಿಂದ  ಉಪ್ಪು ಅಧಿಕ ವಿಸರ್ಜನೆ( ಉದಾ ವಾಂತಿ ಭೇದಿ ;ಇಲ್ಲಿ ನೀರಿನ ಮತ್ತು ಉಪ್ಪಿನ ಅಂಶ ಎರಡೂ  ಕಮ್ಮಿ ಆಗುವುದು ),ಅಥವಾ ಅನುಪಾತ ತಪ್ಪಿ  ನೀರು ನಿಲ್ಲುವುದು (ಉದಾ ಹೃದಯ ವೈಫಲ್ಯ ,ಲಿವರ್  ವೈಫಲ್ಯ;ಇಲ್ಲಿ ಹೆಚ್ಚು ನೀರು ನಿಂತು ಸಾಪೇಕ್ಷ ಉಪ್ಪಿನ ಪ್ರಮಾಣ ಕಡಿಮೆ ಆಗುವುದು ). ಉಪ್ಪು ಮತ್ತು ನೀರು ಹೆಚ್ಚು ಹೊರಹಾಕಲು ಕೊಡುವ  ಔಷಧಿಗಳೂ ಕಾರಣ ಇರಬಹುದು . 

                 ಸಾಮಾನ್ಯವಾಗಿ  ಆಸ್ಪತ್ರೆಗಳಲ್ಲಿ ಉಪ್ಪು ಕಡಿಮೆ ಆಗಿ ಬರುವವರು  ವಯಸ್ಸಾದವರು .ಇವರಲ್ಲಿ ಮುಖ್ಯ ಕಾರಣ  ಅತಿ ಮೂತ್ರ ನಿರೋಧಕ ಹಾರ್ಮೋನ್ ನ  ಯದ್ವಾ ತದ್ವಾ ಸ್ರಾವ .ಇದರಿಂದ ಮೂತ್ರ ಪಿಂಡಗಳು ಸುಮ್ಮ ಸುಮ್ಮನೆ ನೀರು ಹಿಡಿದಿಟ್ಟು  ಕೊಂಡು ಸಾಪೇಕ್ಷವಾಗಿ (Relatively )ಉಪ್ಪಿನ ಅಂಶ ರಕ್ತದಲ್ಲಿ ಕಡಿಮೆ ಆಗುವುದು . ಈ ಹಾರ್ಮೋನ್ ಅಧಿಕ ಸ್ರಾವ ಆಗಲು ಖಿನ್ನತೆ,ಅಪಸ್ಮಾರ ಮತ್ತು ಕ್ಯಾನ್ಸರ್ ಗೆ ಕೊಡುವ ಔಷಧಿಗಳು ,ಶ್ವಾಸ  ಕೋಶದ ಕಾಯಿಲೆ ಮತ್ತು  ಸ್ಟ್ರೋಕ್ ನಂತಹ ಮೆದುಳಿನ ಕಾಯಿಲೆಗಳು ಕಾರಣ ಇರ ಬಹುದು ..ಕೆಲವೊಮ್ಮೆ ಯಾವ ಮೂಲ ಕಾರಣವೂ ಸಿಗದು . 

ಈ ತರಹ ಬರುವ ರೋಗಿಗಳಿಗೆ ಕಡಿಮೆ ನೀರು ಸೇವಿಸಲು ವೈದ್ಯರು ಸಲಹೆ ಮಾಡುವರು .ಮತ್ತು ತೀವ್ರತರ ಕೊರತೆ ಇದ್ದರೆ  ಉಪ್ಪಿನ ದ್ರಾವಣ ಡ್ರಿಪ್ ಮೂಲಕ ಕೊಡುವರು .ಅತಿ ಮೂತ್ರ ನಿರೋಧಕ ಹಾರ್ಮೋನ್ ಪ್ರತಿಬಂಧಿಸುವ ಮಾತ್ರೆಗಳೂ ಇವೆ ,

 

 

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ