ಬೆಂಬಲಿಗರು

ಶನಿವಾರ, ಜನವರಿ 2, 2021

ಎಂಬೋಲಿಸಮ್

                             ಎಂಬೋಲಿಸಂ 

ನೀವು ಈ ಶಬ್ದ ಕೇಳಿದ್ದಿರೋ ?ಇಲ್ಲವಾದರೆ ಕೇಳಬೇಕು ..ಹೆಪ್ಪುಗಟ್ಟಿದ ರಕ್ತ ಅಥವಾ ಹೊರಗಿನ ವಸ್ತು ರಕ್ತ ನಾಳಗಳ ಮೂಲಕ ಸಂಚರಿಸಿ ಒಂದು ಆಯಕಟ್ಟಿನ ಜಾಗದಲ್ಲಿ  ನೆಲೆಯೂರಿ  ರಕ್ತ ಸರಬರಾಜು ಬಂದ್ ಮಾಡುವುದಕ್ಕೆ  ಎಂಬಾಲಿಸಂ ಎನ್ನುತ್ತಾರೆ . 

    ಇದರಲ್ಲಿ ಸಾಮಾನ್ಯವಾಗಿ ಕಂಡು ಬರುವುದು ಶ್ವಾಸ ಕೋಶದ ಮುಖ್ಯ ರಕ್ತನಾಳದ (ಪಲ್ಮನರಿ ಆರ್ಟರಿ )ಎಂಬಾಲಿಸಂ . 

                 Thromboembolism (Deep Vein Thrombosis and Pulmonary Embolism) - Harvard  Healthಕಾಲಿನ  ಅಭಿಧಮನಿಗಳಲ್ಲಿ  ಹೆಪ್ಪುಗಟ್ಟಿದ ರಕ್ತ  ಮಹಾ ಅಭಿಧಮನಿ ಮೂಲಕ  ಹೃದಯದ ಬಲ ಹೃತ್ಕರ್ಣ ಮತ್ತು ಹೃತ್ಕುಕ್ಷಿ  ಮೂಲಕ  ಶ್ವಾಶ ಕೋಶದ ಅಪಧಮನಿ ಪ್ರವೇಶಿಸಿ ಅಲ್ಲಿಯ ರಕ್ತ ಸಂಚಾರ ಭಾಗಷಃ ಅಥವಾ ಪೂರ್ಣ ನಿಲುಗಡೆ ಮಾಡುವುದು .ಇದರಿಂದ ಹಠಾತ್ ಉಸಿರು ಕಟ್ಟಿ ಪರಿಸ್ಥಿತಿ ಗಂಭೀರ ಆಗುವುದು ,ಸಾವು ಸಂಭವಿಸಲೂ ಬಹುದು .ಕಾಲಿನ ಅಭಿಧಮನಿ(vein ) ಗಳಲ್ಲಿ  ರಕ್ತ  ಹೆಪ್ಪುಗಟ್ಟುವುದು ಯಾಕೆ ?ಕಾಲಿನ ಚಲನೆಯಿಲ್ಲದೆ (ಉದಾ ಮೂಳೆ ಮುರಿತದಿಂದ  ಮತ್ತು ತೀವ್ರತರ ಕಾಯಿಲೆಗಳಿಂದ ಹಾಸಿಗೆ ಹಿಡಿದವರು ,ದೀರ್ಘ ಕಾಲದ ವಿಮಾನ ಪ್ರಯಾಣ ),  ರಕ್ತನಾಳ ದಲ್ಲಿ  ರಕ್ತ ಚಲನೆ ಕಡಿಮೆ ಆಗುವದು  ಮತ್ತು ಹೆಚ್ಚಿದ ರಕ್ತ ಹೆಪ್ಪುಗಟ್ಟುವ ಸ್ಥಿತಿ (ಉದಾ ಗರ್ಭಿಣಿಯರು ) ಇದಕ್ಕೆ ಮುಖ್ಯ ಕಾರಣಗಳು .ಇಂತಹ ಹೆಪ್ಪು ರಕ್ತ ಮೆಲ್ಲಗೆ ಸ್ಥಾನ ಪಲ್ಲಟ  ಗೊಂಡು ರೋಗಿಯ ಅರಿವಿಲ್ಲದಂತೆಯೇ ಚಲಿಸಿ ಮುಖ್ಯ ಅಂಗದ ರಕ್ತ ನಾಳ ಬಂದ್ ಮಾಡಿ ನಮಗೆ ಚಿಕಿತ್ಸೆಗೆ ಸಮಯ ಕೊಡದೇ  ಪ್ರಾಣಾಪಾಯ ಉಂಟು ಮಾಡ ಬಹುದು .ಸಣ್ಣ ಊರುಗಳಲ್ಲಿ  ಇರುವ ಆಸ್ಪತ್ರೆಯಲ್ಲಿ ಇದನ್ನು ಕಂಡು ಹಿಡಿಯುವ ವ್ಯವಸ್ಥೆ ಇರುವುದಿಲ್ಲ ..ಆಸ್ಪತ್ರೆಯಲ್ಲಿ (ಮತ್ತು ಮನೆಗಳಲ್ಲಿ )ಸಂಭವಿಸುವ  ಅನೀರೀಕ್ಷಿತ ಮರಣಕ್ಕೆ ಒಂದು ಮುಖ್ಯ ಕಾರಣ . 

ಇನ್ನು  ಕೆಲವೊಮ್ಮೆ  ಹೃದಯದ  ಹೃತ್ಕರ್ಣ ಗಳು ಯದ್ವಾತದ್ವಾ  ಸಂಕುಚನ ವಿಕಸನ  ಗೊಂಡು  ಅದರಲ್ಲಿ ರಕ್ತ ಹೆಪ್ಪುಗಟ್ಟಿ  ಅದು ಮಹಾ ಅಪಧಮನಿ ಮೂಲಕ ಮೆದುಳಿಗೆ ಹೋಗಿ ಅಲ್ಲಿ ತನಗೆ ಸರಿಗಂಡ ಕಡೆ ನೆಲೆಯೂರಿ ಆಪತ್ತು ತರಬಹುದು .ಇದರಿಂದ ಮೆದುಳಿನ ಆಘಾತ (ಪಾರ್ಶ್ವ ವಾಯು ಇತ್ಯಾದಿ )ಉಂಟಾಗ ಬಹುದು . 

ಎಂಬಾಲಿಸಂ ವ್ಯಾಖ್ಯೆಯಲ್ಲಿ  ಹೊರಗಿನ ವಸ್ತು ಎಂಬುದು ಇದೆಯಷ್ಟೆ .ಗರ್ಭಿಣಿಯರಲ್ಲಿ  ಮಗುವಿನ ಸುತ್ತ  ಆಮ್ನಿಯಾಟಿಕ್ ದ್ರವ ಇದೆಯಷ್ಟೇ .ಕೆಲವೊಮ್ಮೆ ಇದು ರಕ್ತಕ್ಕೆ ಸೇರಿ ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ ರಕ್ತದ ಒತ್ತಡ ಕುಸಿಯುವುದು ,ಹೃದಯ  ಶ್ವಾಸ ಕೋಶಗಳು ಕಾರ್ಯ ಕ್ಷಮತೆ ಕಳೆದು ಕೊಳ್ಳುವವು .ರಕ್ತ ಹೆಪ್ಪು ಗಟ್ಟದೆ ಎಲ್ಲೆಡೆಗಳಿಂದ  ರಕ್ತ ಸ್ರಾವ ಆಗುವುದು .,ಆಲೋಚನೆ ಮಾಡುವಷ್ಟರಲ್ಲಿ ಸಾವು ಸಂಭವಿಸ ಬಹುದು .ದುರ್ದೈವ ಎಂದರೆ ಇದನ್ನು ಕಂಡು ಹಿಡಿಯುವ ಪರೀಕ್ಷೆಗಳು ಇಲ್ಲಾ .ರೋಗ ಲಕ್ಷಣಗಳನ್ನು ನೋಡಿ ಊಹಿಸ ಬೇಕಷ್ಟೆ .ಹಲವು ಭಾರಿ ರೋಗಿಯ ಸಂಭಂದಿಕರು  ಈ ದುರಂತಕ್ಕೆ ಆಸ್ಪತ್ರೆ ಮತ್ತು ವೈದ್ಯರನ್ನು ದೂಷಿಸುವುದಲ್ಲದೆ  ಹಲ್ಲೆ ಮಾಡಿದ ಸಂಭವವೂ ಇದೆ ..ಇದನ್ನು  ಆಮ್ನಿಯಾಟಿಕ್ ಫ್ಲ್ಯೂಯಿಡ್ ಎಂಬಾಲಿಸಂ ಎಂದು ಕರೆಯುತ್ತಾರೆ .ಇದರ ನಿಖರ ಕಾರಣ ಇದುವರೆಗೆ ನಿಗೂಢ ವಾಗಿದ್ದು ,ಯಾವುದೇ ಪರೀಕ್ಷಣಕ್ಕೆ ಸಮಯ ಇರುವುದಿಲ್ಲ .ವೈದ್ಯರು ಇಂತಹ ಪರಿಸ್ಥಿತಿ ಯಲ್ಲಿ  ನಿಸ್ಸಾಯಕ ರಾಗಿರುತ್ತಾರೆ ಎಂಬುದನ್ನು ಮನಗಾಣ ಬೇಕು . 

ಇನ್ನು ಕೊಬ್ಬು ಮತ್ತು ವಾಯು ರಕ್ತನಾಳಕ್ಕೆ ಸೇರಿ ಸಂಚರಿಸಿ (ಮಕ್ಕಳ ಟೊಪ್ಪಿ ಆಟದಂತೆ )ಸಡನ್ ಆಗಿ ಒಂದು ಪ್ರಮುಖ ರಕ್ತ ಕೊಳವೆ ಬ್ಲಾಕ್ ಮಾಡಿ ಅಪಾಯ ಉಂಟು ಮಾಡಬಹುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ